Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೊಸೆ ಮಗಳಾಗಲು ಸಾಧ್ಯವಿಲ್ಲ...

ಸೊಸೆ ಮಗಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ನನ್ನ ಸೊಸೆ ನೂರಿ ನನ್ನ ಮಗನಾದಳು !

ಒಬ್ಬ ಮಾವನ ಮನದ ಮಾತುಗಳು

ವಾರ್ತಾಭಾರತಿವಾರ್ತಾಭಾರತಿ3 Feb 2017 3:52 PM IST
share
ಸೊಸೆ ಮಗಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ನನ್ನ ಸೊಸೆ ನೂರಿ ನನ್ನ ಮಗನಾದಳು !

ನನ್ನ ಸೊಸೆ ಎರಡು ತಿಂಗಳ ಹಿಂದೆ ದೇವರ ಪಾದ ಸೇರಿದ್ದಾಳೆ. ಆಕೆ ನನ್ನ ಮಗನಿಗಿಂತ ಹೆಚ್ಚು ಎತ್ತರ ಮತ್ತು ಹೆಚ್ಚು ಆರೋಗ್ಯವಂತಳಾಗಿದ್ದಳು, ಹೀಗಾಗಿ ಪ್ರತಿಯೊಬ್ಬರೂ ಆಕೆಯನ್ನು ತಮಾಷೆ ಮಾಡುತ್ತಿದ್ದರು. ಕುಹಕಿಗಳು ಏನೇ ಹೇಳಲಿ...ಅಂತಿಮವಾಗಿ ಅವಳು ನಮ್ಮ ಮನೆಯ ಮಗಳಾಗಿದ್ದಳು. ಇತರ ಸೊಸೆಯರ ಎದುರಿಗೆ ನೂರಿಜಾಳನ್ನು ಹೆಚ್ಚು ಹೊಗಳದಂತೆ ನನ್ನ ಪತ್ನಿ ಆಗಾಗ್ಗೆ ಉಪದೇಶ ಮಾಡುತ್ತಲೇ ಇದ್ದಳು.

ಆದರೆ ನೂರಿಜಾ ಇತರರಿಗಿಂತ ಭಿನ್ನಳಾಗಿದ್ದಳು,ಅವಳ ದಯಾಗುಣವನ್ನು ನಾನು ಹೇಗೆ ಹೊಗಳದಿರಲಿ? ಹೀಗಾಗಿ ಅವಳ ಬಗ್ಗೆ ಪ್ರತಿಯೊಬ್ಬರಿಗೂ ಹೊಟ್ಟೆಕಿಚ್ಚಿತ್ತು. ನಾನು ಮತ್ತು ನನ್ನ ಪತ್ನಿ ಅವಳನ್ನು ನೂರಿ ಎಂದೇ ಕರೆಯುತ್ತಿದ್ದೆವು.

ನನ್ನ ಮಕ್ಕಳಿಗೆ ಆಸ್ತಿ ಪಾಲು ಮಾಡಿಕೊಟ್ಟ ಬಳಿಕ ನನ್ನ ಬಳಿ ನನ್ನ ಹಜ್ ಯಾತ್ರೆಗೆ ಸಾಕಾಗುವಷ್ಟು ಹಣ ಮಾತ್ರ ಉಳಿದುಕೊಂಡಿತ್ತು. ನನ್ನ ಪತ್ನಿಯ ಯಾತ್ರೆಯ ಖರ್ಚು ಭರಿಸಲು ನನ್ನಿಂದ ಸಾಧ್ಯವಿರಲಿಲ್ಲ. ನನ್ನ ಪತ್ನಿ ಮಕ್ಕಳ ಬಳಿ ಹಣ ಕೇಳಿದಾಗ ಅಂಧ ತಾಯಿಯನ್ನು ಹಜ್‌ಗೆ ಕಳುಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ನುಣುಚಿಕೊಂಡಿದ್ದರು.

  ನನ್ನ ಪತ್ನಿ ಹಲವು ವರ್ಷಗಳ ಹಿಂದೆಯೇ ತನ್ನ ದೃಷ್ಟಿ ಕಳೆದುಕೊಂಡಿದ್ದಳು. ನಾನು ಹಜ್‌ಗೆ ತಯಾರಿ ನಡೆಸುತ್ತಿದ್ದಾಗ ಬಹಳಷ್ಟು ದಿನ ಆಕೆ ಕಣ್ಣೀರು ಹಾಕುತ್ತಿದ್ದುದನ್ನು ಕಂಡಿದ್ದೇನೆ. ಅದೊಂದು ದಿನ ಬಾಗಿಲ ಪರದೆಯ ಹಿಂದೆ ನಿಂತಿದ್ದ ನೂರಿ ಎಲ್ಲರನ್ನೂ ಕರೆದು ಪಾರ್ಸೆಲ್‌ವೊಂದನ್ನು ನನ್ನ ಹಿರಿಯ ಮಗನ ಕೈಗೆ ನೀಡಿದ್ದಳು. ನೂರಿ ತನ್ನ ಚಿನ್ನವನ್ನು ಮಾರಿದ್ದಳು, ಜೊತೆಗೆ ತನ್ನ ಹೆತ್ತವರ ಆಸ್ತಿಯಿಂದ ಬಂದಿದ್ದ ಹಣವನ್ನೂ ಸೇರಿಸಿದ್ದಳು.

ನನ್ನ ಜೊತೆಗೆ ನನ್ನ ಪತ್ನಿಯ ಮತ್ತು ತನ್ನ ಹಜ್ ಯಾತ್ರೆಗೆ ವ್ಯವಸ್ಥೆ ಮಾಡುವಂತೆ ಆಕೆ ನನ್ನ ಮಗನನ್ನು ಕೋರಿಕೊಂಡಿದ್ದಳು. ಅಲ್ಲಿದ್ದವರ ಪೈಕಿ ಯಾರ ಬಾಯಿಯಿಂದಲೂ ಕೃತಜ್ಞತೆಯ ಒಂದೇ ಒಂದು ಶಬ್ದ ಹೊರಬಿದ್ದಿರಲಿಲ್ಲ. ನನ್ನ ಅಂಧ ಪತ್ನಿ ಮಾತ್ರ ಕಂಬನಿ ಮಿಡಿಯುತ್ತಿದ್ದಳು.

ಜನರು ಹೇಳುತ್ತಾರೆ...ಸೊಸೆ ಎಂದೂ ಮಗಳಾಗಲು ಸಾಧ್ಯವಿಲ್ಲ ಎಂದು. ನೂರಿ ನನ್ನ ಮಗಳಾಗಲಿಲ್ಲ, ಆದರೆ ಅವಳು ನಮ್ಮ ಮಗನಾದಳು. ಹಜ್ ಯಾತ್ರೆಯಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸುವಾಗ ಆಕೆ ನನ್ನ ಪತ್ನಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡೇ ನಡೆದಿದ್ದಳು. ನನ್ನ ಪತ್ನಿ ನೂರಿಯನ್ನು ಮಗುವಿನಂತೆ ತಬ್ಬಿಕೊಂಡಿದ್ದರೆ ಹಿಂದಿನಿಂದ ನಡೆಯುತ್ತಿದ್ದ ನನಗೆ ಕಣ್ಣು ತುಂಬಿ ಬಂದು ರಸ್ತೆಯೇ ಕಾಣುತ್ತಿರಲಿಲ್ಲ.

ಹಜ್‌ನಿಂದ ವಾಪಸ್ ಬಂದ ಬೆನ್ನಿಗೇ 2004ರಲ್ಲಿ ನನ್ನ ಪತ್ನಿ ನಿಧನಳಾಗಿದ್ದಳು. ಅಲ್ಲಾಹು ನಮ್ಮ ಪ್ರಾರ್ಥನೆಗಳನ್ನು ಒಪ್ಪಿಕೊಂಡಿದ್ದಾರೆಯೇ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನ್ನ ಕೊನೆಯುಸಿರಿರುವವರೆಗೂ ನನ್ನ ಪ್ರಾರ್ಥನೆಗಳಲ್ಲಿ ನನ್ನ ಸೊಸೆಯಿರುತ್ತಾಳೆ ಮತ್ತು ಸ್ವರ್ಗದಲ್ಲಿ ನಮ್ಮ ನೂರಿಗೆ ಅತ್ಯುತ್ತಮ ಸ್ಥಳವನ್ನು ನೀಡುವಂತೆ ನಾನು ಅಲ್ಲಾಹುವನ್ನು ಬೇಡುತ್ತಲೇ ಇರುತ್ತೇನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X