Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉತ್ತರಪ್ರದೇಶ: ರೀಚಾರ್ಜ್ ಶಾಪ್‌ಗಳಲ್ಲಿ...

ಉತ್ತರಪ್ರದೇಶ: ರೀಚಾರ್ಜ್ ಶಾಪ್‌ಗಳಲ್ಲಿ ಮಾರಾಟಕ್ಕಿದೆ ಹುಡುಗಿಯರ ನಂಬರ್

ವಾರ್ತಾಭಾರತಿವಾರ್ತಾಭಾರತಿ3 Feb 2017 11:57 PM IST
share

ಲಕ್ನೋ,ಫೆ.3: ಉತ್ತರ ಪ್ರದೇಶದಾದ್ಯಂತ ರೀಚಾರ್ಜ್ ಅಂಗಡಿಗಳಲ್ಲಿ ಅಮಾಯಕ ಹುಡುಗಿಯರ ಮೊಬೈಲ್ ನಂಬರ್‌ಗಳು ಮಾರಾಟವಾಗುತ್ತಿವೆ. ಹುಡುಗಿಯರ ಸೌಂದರ್ಯವನ್ನು ಅವಲಂಬಿಸಿ ಈ ನಂಬರಗಳಿಗೆ ಬೆಲೆಗಳನ್ನು ನಿಗದಿಗೊಳಿಸ ಲಾಗುತ್ತದೆ. ಅವರಿಗೆ ಮೊಬೈಲ್‌ನಲ್ಲಿ ಕಿರುಕುಳ ನೀಡಲು ಹರಾಮಿ ಗಂಡಸರು ಕೇಳಿದಷ್ಟು ಹಣವನ್ನು ಕೊಟ್ಟು ನಂಬರ್‌ಗಳನ್ನು ಪಡೆದು ಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಪೇಕ್ಷಿತ ಕರೆಗಳ ವಿರುದ್ಧ ಮಹಿಳೆಯರ ದೂರುಗಳು ಮಹಾಪೂರದಂತೆ ಪೊಲೀಸ್ ಸಹಾಯವಾಣಿಗೆ ಬರತೊಡಗಿದಾಗ ಇಂತಹ ಹುಲುಸಾದ ದಂಧೆಯೊಂದು ನಡೆಯುತ್ತಿದೆ ಎನ್ನುವುದು ಬೆಳಕಿಗೆ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪೊಲೀಸ್ ಸಹಾಯವಾಣಿ ಯಲ್ಲಿ ದಾಖಲಾದ ಆರು ಲಕ್ಷಕ್ಕೂ ಅಧಿಕ ದೂರುಗಳ ಪೈಕಿ ಶೇ.90ರಷ್ಟು ಮೊಬೈಲ್ ಫೋನ್‌ಗಳಲ್ಲಿ ಮಹಿಳೆಯರಿಗೆ ಕಿರುಕುಳಕ್ಕೆ ಸಂಬಂಧಿಸಿವೆ.


ಮಹಿಳೆಯರನ್ನು ಬಲೆಗೆ ಬೀಳಿಸಲು ‘ಹಮೆಂ ಆಪ್ ಸೆ ದೋಸ್ತಿ ಕರ್‌ನಾ ಹೈ’ ಎಂಬ ಸಾಲಿನೊಂದಿಗೆ ಮಾತು ಶುರುವಿಟ್ಟುಕೊಳ್ಳುವ ಹೆಚ್ಚಿನ ಗಂಡಸರು ಮಹಿಳೆಯರು ಕರೆನ್ಸಿ ರೀಚಾರ್ಜ್ ಮಾಡಿಸಿಕೊಳ್ಳುವ ಅಂಗಡಿಯಿಂದ ಅವರ ನಂಬರ್‌ಗಳನ್ನು ಪಡೆದು ಕೊಳ್ಳುತ್ತಾರೆ. ನೀತಿಬಾಹಿರ ದಂಧೆ ನಡೆಸುವ ರೀಚಾರ್ಜ್ ಅಂಗಡಿಯವರು ಮಹಿಳೆಯರ ನಂಬರ್‌ಗಳನ್ನು ಸೇವ್ ಮಾಡಿಟ್ಟುಕೊಂಡು ಬಳಿಕ ಕಾಸು ನೀಡಲು ಸಿದ್ಧವಿದ್ದವರಿಗೆ ಆ ನಂಬರ್ ಗಳನ್ನು ದಾಟಿಸುತ್ತಾರೆ. ‘ಸುಂದರಿ’ ಹುಡುಗಿ ಯರ ನಂಬರ್ 500 ರೂ.ವರೆಗೂ ಮಾರಾಟ ವಾಗುತ್ತದೆ! ಸಾಮಾನ್ಯ ರೂಪದ ಹುಡುಗಿಯರ ಮೊಬೈಲ್ ನಂಬರ್ 50 ರೂ.ಗೆ ಮಾರಾಟವಾಗುತ್ತದೆ.
ಈ ಬೀದಿಕಾಮಣ್ಣಗಳು ಕೆಲವೊಮ್ಮೆ ಹೀಗೆ ನಂಬರ್ ಪಡೆದುಕೊಂಡ ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಹುಡುಗಿಯರಿಗೆ ಅಶ್ಲೀಲ ಚಿತ್ರಗಳನ್ನೂ ರವಾನಿಸುವುದೂ ಇದೆ.
ಮೊಬೈಲ್ ರೀಚಾರ್ಜ್ ಏಜೆಂಟ್ ಆಗುವುದು ಸುಲಭ. ಫಾರ್ಮ್‌ವೊಂದನ್ನು ತುಂಬಿ ಭದ್ರತಾ ಠೇವಣಿಯನ್ನು ನೀಡಿದರೆ ಸಾಕು. ಹಾಗೆಂದು ಎಲ್ಲರೂ ಹುಡುಗಿಯರ ಮೊಬೈಲ್ ನಂಬರ್ ಮಾರಾಟದ ದಂಧೆಯಲ್ಲಿ ತೊಡಗಿಕೊಂಡಿಲ್ಲ.
ಅವಿವಾಹಿತ ಯುವತಿಯರ ಜೊತೆಗೆ ವಿವಾಹಿತ ಮಹಿಳೆಯರೂ ಈ ಮೊಬೈಲ್ ಫೋನ್ ಕಿರುಕುಳದಿಂದ ಹೊರತಾಗಿಲ್ಲ. ಪೊಲೀಸ್ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದವರಲ್ಲಿ ವಿವಾಹಿತೆಯರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ವ್ಯಂಗ್ಯವೆಂದರೆ ಉತ್ತರ ಪ್ರದೇಶದಲ್ಲಿ ಹೀಗೆ ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ಮಾರಾಟ ಮಾಡುತ್ತಿರುವರ ಅಥವಾ ಖರೀದಿಸುತ್ತಿರುವವರ ಪೈಕಿ ಒಬ್ಬರೂ ಈವರೆಗೆ ಜೈಲಿಗೆ ಹೋಗಿಲ್ಲ. ಈ ದೂರುಗಳಿಂದ ಯಾವುದೇ ಅಪರಾಧ ಸಾಬೀತು ಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಐಜಿ ನವನೀತ್ ಸೆಕೆರಾ.
ಮೊಬೈಲ್ ನಂಬರ್‌ಗಳನ್ನು ಮಾರಾಟ ಮಾಡುವವರನ್ನು ಬಂಧಿಸಿದರೆ ರಾಜ್ಯದ ಜೈಲುಗಳು ತುಂಬಿ ಹೋಗುತ್ತವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು!
ಸದ್ಯಕ್ಕೆ ಸಹಾಯವಾಣಿಯ ಉಸ್ತುವಾರಿ ಹೊಂದಿರುವವರು ಮಹಿಳೆಯರಿಗೆ ಕಿರುಕುಳ ಕೊಡುವ ಕಿಡಿಗೇಡಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಈ ವಿಷಯದಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಅಗತ್ಯವಾಗಿವೆ ಎನ್ನುತ್ತಾರೆ ಕ್ರಿಮಿನಲ್ ಲಾಯರ್‌ಗಳು.
ಮಹಿಳೆ ನಂಬಿಕೆಯಿಂದ ತನ್ನ ನಂಬರ್‌ನ್ನು ರೀಚಾರ್ಜ್ ಅಂಗಡಿಯವನಿಗೆ ನೀಡಿರುತ್ತಾಳೆ. ಆತ ಅದನ್ನು ಮಾರಾಟ ಮಾಡಿದರೆ ಹಣದ ಲಾಭಕ್ಕಾಗಿ ಮಾಹಿತಿಯನ್ನು ವಿನಿಮಯಿಸಿಕೊಂಡ ಅಪರಾಧವೆಸಗುತ್ತಾನೆ. ಇದಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೆ ಫೋನ್ ಮೂಲಕ ಚುಡಾವಣೆಗೂ ಆತ ಕುಮ್ಮಕ್ಕು ನೀಡಿರುತ್ತಾನೆ ಎಂದು ವಕೀಲ ಅವಿಂದರ್ ಸಿಂಗ್ ಹೇಳಿದರು.


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X