Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರಿನಲ್ಲಿ ಬಹುವಿಧದ ಖಾದ್ಯಗಳ...

ಮಂಗಳೂರಿನಲ್ಲಿ ಬಹುವಿಧದ ಖಾದ್ಯಗಳ ‘ಖಸಾಕ್’ ರೆಸ್ಟೋರೆಂಟ್

ವಾರ್ತಾಭಾರತಿವಾರ್ತಾಭಾರತಿ4 Feb 2017 11:50 PM IST
share
ಮಂಗಳೂರಿನಲ್ಲಿ ಬಹುವಿಧದ ಖಾದ್ಯಗಳ ‘ಖಸಾಕ್’ ರೆಸ್ಟೋರೆಂಟ್

ಮಂಗಳೂರು, ಫೆ.4: ನಗರದ ಲಾಲ್‌ಬಾಗ್‌ನಲ್ಲಿರುವ ಕರಾವಳಿ ಉತ್ಸವ ಮೈದಾನದ ಮಾರ್ಟಿನ್ ಪಾಯಸ್ ರಸ್ತೆಗೆ ತಾಗಿಕೊಂಡು ಪ್ರವಾಸಿ ತಾಣಗಳಲ್ಲಿ ಕಂಡು ಬರುವ ರೆಸ್ಟೋರೆಂಟ್‌ಗಳನ್ನು ಹೋಲುವ ‘ಖಸಾಕ್’ ರೆಸ್ಟೋರೆಂಟ್ ಖಾದ್ಯಪ್ರಿಯರನ್ನು ಆಕರ್ಷಿಸುತ್ತಿದೆ.

ಹಳೆ ಶೈಲಿಯ ಹೆಂಚಿನ ಮನೆಗೆ ಆಧುನಿಕ ಶೈಲಿಯನ್ನು ಅಳವಡಿಸಲಾದ ಕೇರಳದ ಉದ್ಯಮಿ ಶಮೀರ್ ಮಾಲಕತ್ವದ ಈ ‘ಖಸಾಕ್’ ರೆಸ್ಟೋರೆಂಟ್ ಪ್ರವಾಸಿ ತಾಣಕ್ಕೆ ಸರಿಸಮಾನವಾಗಿದೆ. ತೆಂಗು ಹಾಗೂ ಇತರ ಬೃಹತ್ ಮರಗಳ ನಡುವೆ ಇರುವ ಈ ಮನೆಯ ಆವರಣದಲ್ಲೇ ಗುಡಿಸಲುಗಳಂತೆ ಹೋಲುವ ಹೆಂಚಿನ ಛಾವಣಿಯುಳ್ಳ 3-4 ವಿಶೇಷ ಕೋಣೆಗಳು ಗಮನ ಸೆಳೆಯುತ್ತಿವೆ. ರಾತ್ರಿಯಂತೂ ಜಗಜಗಿಸುವ ವಿದ್ಯುತ್ ದೀಪಗಳು ಕಣ್ಮನ ಸೆಳೆಯುತ್ತದೆ. ಎಲ್ಲವೂ ಸುಂದರವಾದ ಮರದ ಕೆತ್ತನೆಯಿಂದ ಕೂಡಿರುವ ಕಾರಣ ‘ಮನೆ’ಯಲ್ಲೇ ಕುಳಿತು ‘ಕೈ’ರುಚಿ ನೋಡುವ ಅನುಭವ ಆದಂತಾಗುತ್ತದೆ.

 ಹೆಂಚಿನ ಮನೆಯ ಈ ರೆಸ್ಟೋರೆಂಟ್‌ಗೆ ಕಲಾತ್ಮಕ ಸ್ಪರ್ಶ ನೀಡಲಾಗಿದ್ದು, ಒಳಾಂಗಣ ವಿನ್ಯಾಸ ಕೂಡ ಹಳೆಯ ಮನೆಗೆ ಕಾಲಿಟ್ಟಂತ ಅನುಭವ ನೀಡುತ್ತದೆ. ಭೋಜನಕ್ಕೆ ಜೋಡಿಸಿಡಲಾದ ಮೇಜು-ಕುರ್ಚಿಗಳು ಮರದ ಕೆತ್ತನೆಯಿಂದ ಕೂಡಿದೆ. ಪೂರ್ವಾಹ್ನ 11ಕ್ಕೆ ಆರಂಭವಾಗುವ ‘ಖಸಾಕ್’ ರಾತ್ರಿ 11ರವರೆಗೆ ತೆರೆದಿರುತ್ತದೆ. ಇಲ್ಲಿ ಚಿಕನ್, ಮಟನ್ ಹಾಗೂ ಮೀನಿನ ವೈವಿಧ್ಯಮಯ ಖಾದ್ಯಗಳು ಸದಾ ಲಭ್ಯವಿವೆ. ಮಧ್ಯಾಹ್ನ ಮತ್ತು ರಾತ್ರಿಯ ಊಟ, ಬಿರಿಯಾನಿಯಲ್ಲದೆ ಕೇರಳದ ಪುಟ್ಟು, ಪರೋಟ, ತಟ್ಟು ದೋಸೆ, ಅರಿ ದೋಸೆ, ಕಲ್ಲಪ್ಪಂ ಸಹಿತ ಹಲವು ಬಗೆಯ ತಿಂಡಿ-ತಿನಿಸುಗಳೂ ಇಲ್ಲಿವೆ.

‘ಖಸಾಕ್’ನಲ್ಲಿ ಸ್ವಾದಿಷ್ಟಕರ ಚೈನೀಸ್, ಕೇರಳ ಹಾಗೂ ಮಂಗಳೂರು, ಭಾರತೀಯ, ಪಾಶ್ಚಾತ್ಯ ಶೈಲಿಯ ಹಲವು ವಿಧವಾದ ಖಾದ್ಯಗಳಲ್ಲದೆ ಅತ್ಯಾಧುನಿಕ ಮಾದರಿಯ ಶುಚಿ-ರುಚಿಯಾದ ಮಾಂಸಾಹಾರ, ಸಸ್ಯಾಹಾರ, ತಂಪು ಪಾನೀಯ, ಐಸ್‌ಕ್ರೀಂ, ಜ್ಯೂಸ್, ಚಹಾ, ಕಾಫಿ ಸಹಿತ ನೂರಾರು ಬಗೆಯ ತಿಂಡಿ- ತಿನಿಸುಗಳು ಲಭ್ಯವಿವೆ. ಸುಮಾರು 100 ಮಂದಿಗೆ ಏಕಕಾಲಕ್ಕೆ ತಿಂಡಿ-ತಿನಿಸು ತಿನ್ನುವ ಮತ್ತು ಭೋಜನ ಮಾಡುವ ವ್ಯವಸ್ಥೆಯಿದೆ. ಆಹಾರ ತಯಾರಿಸಲು ಮತ್ತು ಕುಡಿಯಲು ಹಾಗೂ ಪಾತ್ರೆಪಗಡೆಗಳನ್ನು ತೊಳೆಯಲು ಶುದ್ಧೀಕರಿಸಲ್ಪಟ್ಟ ನೀರನ್ನೇ ಬಳಸಲಾಗುತ್ತದೆ. ಮಂಗಳೂರು ಆಸುಪಾಸಿನ 4-5 ಕಿ.ಮೀ. ವ್ಯಾಪ್ತಿಯೊಳಗೆ ಡೋರ್ ಡೆಲಿವರಿ ವ್ಯವಸ್ಥೆಯು ಇಲ್ಲಿ ಲಭ್ಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X