Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಂಬಳ ನಿಷೇಧ ಹೋರಾಟಕ್ಕೆ ನಾಗರಿಕ...

ಕಂಬಳ ನಿಷೇಧ ಹೋರಾಟಕ್ಕೆ ನಾಗರಿಕ ಅಭಿವೃದ್ಧಿ ಸಮಿತಿ ಬೆಂಬಲ : ಇಬ್ರಾಹಿಂ ಗೋಳಿಕಟ್ಟೆ

ವಾರ್ತಾಭಾರತಿವಾರ್ತಾಭಾರತಿ6 Feb 2017 6:11 PM IST
share

ಪುತ್ತೂರು,ಫೆ.6: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯಂತೆ ಕರ್ನಾಟಕದ ಕರಾವಳಿಯಲ್ಲಿ ಕಂಬಳವು ಬಹಳ ವಿಶೇಷತೆಯ ಒಂದು ಕ್ರೀಡೆಯಾಗಿದ್ದು. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಂಬಳ ಸಮಿತಿ ನಡೆಸುವ ಹೋರಾಟಗಳಿಗೆ ಪುತ್ತೂರು ನಾಗರಿಕ ಅಭಿವೃದ್ಧಿ ಸಮಿತಿಯು ಪೂರ್ಣ ಬೆಂಬಲ ನೀಡಲಿದೆ. ಜಾತಿ ಮತ ಮತ್ತು ರಾಜಕೀಯ ಬೇಧ ಮರೆತು ಎಲ್ಲರೂ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಸಮಿತಿಯ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದ್ದಾರೆ.

 ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಒಂದೊಂದು ರಾಜ್ಯದಲ್ಲಿ ಒಂದೊಂದು ಪದೇಶದಲ್ಲಿ ಅಲ್ಲಲ್ಲಿಯ ಜನರ ಜೀವ ನಾನುಸಾರವಾಗಿ ಒಂದೊಂದು ಕ್ರೀಡೆಯನ್ನು ಜನರು ಬಹಳ ಹಿಂದಿನ ಕಾಲದಿಂದಲೂ ನೆಚ್ಚಿಕೊಂಡು ಬಂದಿದ್ದರು. ಅದರಂತೆಯೇ ಕಂಬಳವು ನಮ್ಮ ತುಳುನಾಡಿನ ಬಹಳ ಆಸಕ್ತಿಯ ಕ್ರೀಡೆ ಮತ್ತು ಸಂಸ್ಕ್ರತಿಯಾಗಿದೆ. ಮಾತ್ರವಲ್ಲದೇ ವಿಶೇಷತೆ ಹಲವು ಐಕ್ಯತೆಯ ಸಂದೇಶಗಳೂ ಕೂಡಾ ಅದರಲ್ಲಿದೆ. ಒಂದು ಕಾಲದಲ್ಲಿ ಕಂಬಳದ ಕೋಣ ಓಡಿಸುವ ಗದ್ದೆಯು ಬಹಳ ಫಲಭರಿತ ಭೂಮಿಯಾಗಿತ್ತು. ಕಂಬಳದ ಗದ್ದೆಯ ಬಗ್ಗೆಯೂ ಓಡುವ ಕೋಣಗಳ ಬಗ್ಗೆಯೂ ಮಾತ್ರವಲ್ಲ ಕೋಣವನ್ನು ಓಡಿಸುವ ಓಟಗಾರನ ಬಗ್ಗೆಯೂ ಜನರಿಗೆ ಅಪಾರವಾದ ಪ್ರೀತಿ, ಹೆಮ್ಮೆಯಿದೆ. ಬೇಸಾಯ ಬಿತ್ತನೆ ಕೊಯ್ಲು ಇವಲ್ಲೆದರಲ್ಲೂ ಐಕ್ಯತೆಯಿಂದ ಬೆವರಿಳಿಸಿದ ರೈತ ಭಾಂದವರು ಮೋಜಿಗಾಗಿ ಕಂಬಳದ ಗದ್ದೆಯಲ್ಲಿ ಒಂದುಗೋಡಿ ಯಾವುದೇ ಜಾತಿ ಬೇಧವಿಲ್ಲದೆ ಸಂತಸದ ವಾತಾವರಣವನ್ನು ಹಂಚಿಕೊಳ್ಳುತ್ತಿದರು. ಇಂತಹ ರಸಭರಿತ ಒಂದು ಕ್ರೀಡೆಯು ನಮ್ಮ ಜನರಿಂದ ಕಸಿಯಲ್ಪಡುತ್ತಿದೆ. ನಿಜಕ್ಕೂ ಇದು ಆಘಾತಕಾರಿ ಬೆಳವಣಿಗೆ ಎಂದರು

 ಅಸಂತುಷ್ಟಗೊಂಡ ಜನರು ಅಲ್ಲಲ್ಲಿ ಶಬ್ದವೆಬ್ಬಿಸಿ ಹೋರಾಟದ ಬಗ್ಗೆ ರೂಪು ರೇಖೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ನಮ್ಮ ಜನರಲ್ಲಿ ಐಕ್ಯತೆಯ ಕೊರತೆಯಿಂದ ಹೋರಾಟದ ಕಾವು ನಿರೀಕ್ಷೆಯಂತೆ ಫಲ ಕೊಡುತ್ತಿಲ್ಲ. ನಮ್ಮ ಜನರೆಡೆಯಲ್ಲಿ ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಜನರ ಮನಸ್ಸನ್ನು ಹಲವು ಕವಲುಗಳಾಗಿ ಹಂಚಲ್ಪಟ್ಟಿದೆ. ಮೇಲು ಕೀಳು ತಾರತಮ್ಯ ಹೃದಯವನ್ನು ನುಚ್ಚು ನೂರು ಮಾಡಿವೆ. ಹಿಂದೂ ಮುಸ್ಲಿಂ ಭೇದ ಭಾವವಿಲ್ಲದೆ ಒಗ್ಗಟ್ಟಾಗಿ ಹೋರಾಡಿ ಇಡೀ ಭಾರತ ದೇಶದ ಸ್ವಾತಂತ್ರ್ಯವನ್ನೇ ಪಡೆದ ಇತಿಹಾಸವಿದ್ದರೂ ಇದೀಗ ಕಂಬಳ, ನೇತ್ರಾವತಿ, ಕಾವೇರಿ ಹೋರಾಟಗಳು ಒಗ್ಗಟ್ಟಾಗಿ ನಡೆಯುತ್ತಿಲ್ಲ. ಸಮಸ್ಯೆ ವಿರುದ್ದ ನಾವೆಲ್ಲ ಒಂದಾಗಿ ನಿಂತು ಒಗ್ಗಟ್ಟಿನಿಂದ ಹೋರಾಟ ನಡೆಸುವ ಸಮ್ಮನಸ್ಸು ಬಂದಿದ್ದರೆ ಖಂಡಿತವಾಗಿಯೂ ವಿಜಯವು ನಮ್ಮದಾಗುತ್ತಿತ್ತು ಎಂದ ಅವರು ಇದೀಗ ಕಂಬಳ ನಿಷೇಧದ ವಿರುದ್ದ ಎಲ್ಲರೂ ಸೇರಿಕೊಂಡು ಐಕ್ಯತೆಯನ್ನು ಪ್ರದರ್ಶಿಸಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಗರಿಕ ಅಭಿವೃದ್ಧಿ ಸಮಿತಿ ಪ್ರದಾನ ಕಾರ್ಯದರ್ಶಿ ಸಿ.ಮೋಹನ ಗೌ, ಕಾರ್ಯದರ್ಶಿ ಪಿ.ಎಂ.ಇಬ್ರಾಹಿ ಪರ್ಪುಂಜ, ಜೊತೆ ಕಾರ್ಯದರ್ಶಿ ಅಬ್ದುಲ್ ಅಜೀಜ್ ಬಪ್ಪಳಿಗೆ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X