Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜಿಲ್ಲೆಯಲ್ಲಿ ಮರಳು ಸಮಸ್ಯೆ: ಶಾಶ್ವತ...

ಜಿಲ್ಲೆಯಲ್ಲಿ ಮರಳು ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಆಗ್ರಹ

ಉಡುಪಿ ಜಿಪಂ ಸಾಮಾನ್ಯ ಸಭೆ

ವಾರ್ತಾಭಾರತಿವಾರ್ತಾಭಾರತಿ7 Feb 2017 10:09 PM IST
share

 ಮಣಿಪಾಲ, ಫೆ.7: ಕಳೆದ ಸುಮಾರು ಒಂದು ವರ್ಷದಿಂದ ಜಿಲ್ಲೆಯಲ್ಲಿ ಜನತೆಗೆ ತೀವ್ರ ಸಮಸ್ಯೆ ಉಂಟು ಮಾಡಿರುವ ಮರಳು ಅಲಭ್ಯತೆ ಇಂದು ನಡೆದ ಉಡುಪಿ ಜಿಪಂನ ಐದನೇ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ, ಅಂತಿಮವಾಗಿ ಈ ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಲಾಯಿತು.

ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲೇ ಸರಕಾರಿ ಆದೇಶ-ಸುತ್ತೋಲೆಗಳ ಓದುವ ಸಂದರ್ಭದಲ್ಲಿ ಸರಕಾರಿ ಹಾಗೂ ಕಡಿಮೆ ವರಮಾನದ ವಸತಿ ಯೋಜನೆಗಳ ಕಾಮಗಾರಿಗಳಿಗೆ ಮರಳನ್ನು ವಿತರಿಸುವ ಕುರಿತಂತೆ ಸರಕಾರ ಹೊರಡಿಸಿದ ಸುತ್ತೋಲೆ, ಜಿಲ್ಲೆಯಲ್ಲಿ ಮರಳುಗಾರಿಕೆ ಮೇಲೆ ನ್ಯಾಯಾಲಯ ವಿಧಿಸಿರುವ ತಡೆಯಾಜ್ಞೆಯಿಂದ ಉದ್ಭವಿಸಿರುವ ಸಮಸ್ಯೆಗಳ ಕುರಿತ ಚರ್ಚೆಗೆ ನಾಂದಿ ಹಾಡಿತು.

ಸಿಆರ್‌ಝಡ್ ವ್ಯಾಪ್ತಿಯ ಪ್ರದೇಶಗಳಲ್ಲಿ ಮರಳುಗಾರಿಕೆಗೆ ನ್ಯಾಯಾಲಯದ ನಿರ್ಬಂಧವಿದ್ದು, ನಾನಾ ಸಿಆರ್‌ಝಡ್ ಪ್ರದೇಶದಲ್ಲಿ ಕೇವಲ ನಾಲ್ಕು ಬ್ಲಾಕ್ ಗಳಲ್ಲಿ ಮರಳುಗಾರಿಕೆಗೆ ಅವಕಾಶವಿದ್ದರೂ, ಜಿಲ್ಲೆಯ ಅನೇಕ ಕಡೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಮರಳನ್ನು ರಾತ್ರಿ ವೇಳೆ ಅಕ್ರಮ ವಾಗಿ ಹೊರಜಿಲ್ಲೆಗೆ ಸಾಗಿಸಲಾಗುತ್ತಿದೆ. ಇವೆಲ್ಲವೂ ಗಣಿ ಹಾಗೂ ಭೂವಿಜ್ಞಾನ ಇಲಾಖೆ, ಕಂದಾಯ, ಪಿಡಬ್ಲುಡಿ ಹಾಗೂ ಪೊಲೀಸ್ ಇಲಾಖೆಗಳ ಮೂಗಿನಡೆಯಲ್ಲೇ ನಡೆಯುತ್ತಿದೆ ಎಂದು ಸದಸ್ಯರು ಆರೋಪಗಳ ಸುರಿಮಳೆ ಗೆರೆದರು.

ಜಿಲ್ಲೆಯಲ್ಲಿ ಬಡಜನರಿಗೆ ಮರಳು ಬಿಸಿತುಪ್ಪವಾಗಿದ್ದರೆ, ಹೊರ ಜಿಲ್ಲೆಗಳಿಗೆ ರಾಜಾರೋಷವಾಗಿ ಸಾಗಾಟವಾಗುತ್ತಿದೆ. ಮಂಗಳೂರಿನಲ್ಲಿ ಇಲ್ಲದ ಮರಳುಗಾರಿಕೆ ನಿಷೇಧ, ನಿರ್ಬಂಧ ಉಡುಪಿ ಜಿಲ್ಲೆಗೆ ಮಾತ್ರ ಯಾಕೆ. ಅಲ್ಲಿ ಸರಾಗವಾಗಿ ಮರಳುಗಾರಿಕೆ ನಡೆಯುತಿದ್ದು, ಅಲ್ಲಿಂದ ಮರಳನ್ನು ಇಲ್ಲಿಗೆ ತರಿಸಿಕೊಳ್ಳುವ ಅನಿವಾರ್ಯತೆ ಜಿಲ್ಲೆಗೆ ಬಂದಿದೆ ಎಂದು ವಿಷಯವನ್ನೆತ್ತಿದ ಪ್ರತಾಪ್ ಹೆಗ್ಡೆ ಮಾರಾಳಿ, ಜನಾರ್ದನ ತೋನ್ಸೆ, ಉದಯ ಕೋಟ್ಯಾನ್, ಬಾಬು ಶೆಟ್ಟಿ ಮುಂತಾದವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಬಡಜನರಿಗೆ ಮರಳು ಬಿಸಿತುಪ್ಪವಾಗಿದ್ದರೆ, ಹೊರ ಜಿಲ್ಲೆಗಳಿಗೆ ರಾಜಾರೋಷವಾಗಿ ಸಾಗಾಟವಾಗುತ್ತಿದೆ.

ಮಂಗಳೂರಿನಲ್ಲಿ ಇಲ್ಲದ ಮರಳುಗಾರಿಕೆ ನಿಷೇ,ನಿರ್ಬಂ ಉಡುಪಿ ಜಿಲ್ಲೆಗೆ ಮಾತ್ರ ಯಾಕೆ. ಅಲ್ಲಿ ಸರಾಗವಾಗಿ ಮರಳುಗಾರಿಕೆ ನಡೆಯುತಿದ್ದು, ಅಲ್ಲಿಂದ ಮರಳನ್ನು ಇಲ್ಲಿಗೆ ತರಿಸಿಕೊಳ್ಳುವ ಅನಿವಾರ್ಯತೆ ಜಿಲ್ಲೆಗೆ ಬಂದಿದೆ ಎಂದು ವಿಷಯವನ್ನೆತ್ತಿದ ಪ್ರತಾಪ್ ಹೆಗ್ಡೆ ಮಾರಾಳಿ, ಜನಾರ್ದನ ತೋನ್ಸೆ, ಉದಯ ಕೋಟ್ಯಾನ್, ಬಾಬು ಶೆಟ್ಟಿ ಮುಂತಾದವರು ಪ್ರಶ್ನಿಸಿದರು.

ಬಿಜೆಪಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ಜಿಲ್ಲೆಯ ಮರುಳುಗಾರಿಕೆಯ ಈ ಪರಿ ಸಮಸ್ಯೆಗೆ ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಬೇರೆಲ್ಲೂ ಇಲ್ಲದ ಈ ಸಮಸ್ಯೆ ಉಡುಪಿ ಜಿಲ್ಲೆಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದರಲ್ಲದೇ, ಜಿಲ್ಲಾಡಳಿತ ಕಾನೂನುಬದ್ದವಾಗಿ ಮರಳು ತೆಗೆಯಲು ಬಿಡುತ್ತಿಲ್ಲ. ಈಗ ಕೆಲವರಿಗೆ ಮಾತ್ರ ಮರಳುಗಾರಿಕೆಗೆ ಅವಕಾಶ ಸಿಗುತ್ತಿದೆ. ಇದರಿಂದ ಮರಳು ಎಲ್ಲರಿಗೂ ಸಿಗುತ್ತಿಲ್ಲ. ಇದಕ್ಕೆ ಬದಲು ಎಲ್ಲರಿಗೂ ಮರಳು ತೆಗೆಯಲು ಮುಕ್ತ ಅವಕಾಶ ಕೊಡಿ ಎಂದರು.

 ಗಣಿ ಇಲಾಖೆಯ ಅಧಿಕಾರಿಗಳು ಉತ್ತರಿಸಿ ನಾನ್ ಸಿಆರ್‌ಝಡ್ ವ್ಯಾಪ್ತಿ ಯ 16 ಬ್ಲಾಕ್‌ಗಳಲ್ಲಿ ನಾಲ್ಕು ಬ್ಲಾಕ್‌ಗಳಲ್ಲಿ ಮಾತ್ರ ಈಗ ಮರಳು ತೆಗೆಯಲು ಅವಕಾಶವಿದೆ. ಇದು ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿದ್ದು, ಅವರು ಇದರಲ್ಲಿ ಎರಡು ಬ್ಲಾಕ್‌ಗಳ ಮರಳನ್ನು ಸರಕಾರಿ ಯೋಜನೆಗಳ ನಿರ್ಮಾಣಕ್ಕೆ ಬಳಸುತಿದ್ದಾರೆ. ಉಳಿದ ಕಡೆಗಳ ಮರಳುಗಳನ್ನು ತೆಗೆಯುವ ಬಗ್ಗೆ ಜಿಲ್ಲಾ ಮೇಲ್ವಿಚಾರಣಾ ಸಮಿತಿ ನಿರ್ಧರಿಸಲಿದ್ದು, ಇದಕ್ಕಾಗಿ ಎನ್‌ಐಟಿಕೆ ತಜ್ಞರ ಸಮಿತಿಯ ವರದಿಯನ್ನು ಕೇಳಲಾಗಿದೆ. ಅದು ನೀಡುವ ವರದಿಯಾಧಾರದಲ್ಲಿ ಇಲ್ಲಿ ಶೀಘ್ರವೇ ಮರಳುಗಾರಿಕೆ ಪ್ರಾರಂಭಗೊಳ್ಳಲಿದೆ ಎಂದರು.

ಉಪವಿಭಾಗಾಧಿಕಾರಿ ಉತ್ತರ:   ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪ ನಾಗ್ ಅವರು ಸಭೆಗೆ ಬಂದ ನಂತರ ಈ ಕುರಿತು ಮತ್ತೆ ಚರ್ಚೆ ನಡೆಯಿತು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಎಸಿ ಅವರು, ನಾನ್ ಸಿಆರ್‌ಝಡ್‌ನಲ್ಲಿ 16+2 ಒಟ್ಟು 18 ಬ್ಲಾಕ್‌ಗಳಿದ್ದು, ಇವುಗಳಲ್ಲಿ ಸದ್ಯಕೆಕ 4ರಲ್ಲಿ ಮಾತ್ರ ಮರಳುಗಾರಿಕೆ ನಡೆಯುತ್ತಿದೆ. ಉಳಿದ ಬ್ಲಾಕ್‌ಗಳ ಕುರಿತು ಎನ್‌ಐಟಿಕೆ ತಜ್ಞರ ಸಮಿತಿ ನೀಡಿದ ವರದಿಯ ಆಧಾರದಲ್ಲಿ ಮರಳುಗಾರಿಕೆಗೆ ಟೆಂಡರ್ ಮೂಲಕ ನೀಡವಾಗುವುದು ಎಂದರು.

ಈ ನಡುವೆ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿ ವಶಪಡಿಸಿಕೊಂಡ ಒಟ್ಟು 600 ಘನ ಮೀ. ಮರಳು ದಾಸ್ತಾನಿನಿಂದ 35 ಲಕ್ಷ ರೂ. ಆದಾಯ ಬಂದಿದೆ. ಈ ಮರಳನ್ನು ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ವಾರಾಹಿ, ನಗರಸಭೆ-ಪುರಸಭೆಗಳಿಗೆ ಹಂಚಲಾಗಿದೆ ಎಂದರು.

 ಅಕ್ರಮವಾಗಿ ಮರಳನ್ನು ಹೊರಜಿಲ್ಲೆಗೆ ಸಾಗಿಸದಂತೆ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ತಾನು ದೂರು ಬಂದಾಕ್ಷಣ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿ ಅವುಗಳನ್ನು ವಶಪಡಿಸಿಕೊಂಡಿದ್ದೇನೆ. ಹೊರ ರಾಜ್ಯಗಳಿಂದ ಬಂದ ಕೂಲಿಕಾರ್ಮಿಕರನ್ನು ಅಲ್ಲಿಂದ ತೆರವುಗೊಳಿಸಿದ್ದೇವೆ ಎಂದು ಶಿಲ್ಪನಾಗ್ ಹೇಳಿದರು.

ಮಧ್ಯಪ್ರವೇಶಿಸಿದ ಮಾತನಾಡಿದ ಶಿರೂರಿನ ಸದಸ್ಯ ಸುರೇಶ್ ಬಟ್ವಾಡಿ, ಶಿರೂರಿನಿಂದ ಪ್ರತಿದಿನ ರಾತ್ರಿ 12 ಗಂಟೆಯ ಬಳಿಕ 50 ಲಾರಿ ಮರಳು ಉತ್ತರ ಕನ್ನಡದತ್ತ ಸಾಗುತ್ತವೆ. ಇದು ಕಂದಾಯ ಮತ್ತು ಪೊಲೀಸ್ ಇಲಾಖೆಗಳ ನೇರ ಸುಪರ್ದಿಯಲ್ಲೇ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರಾಮಸ್ಥರು ತಡೆಯಲು ಹೋದರೆ ನಮ್ಮ ವಿರುದ್ಧವೇ ಹೆದ್ದಾರಿ ದರೋಡೆ ಕೇಸನ್ನು ಪೊಲೀಸರು ದಾಖಲಿಸುತ್ತಾರೆ ಎಂದು ಆರೋಪಿಸಿದರು.

ರಾಘವೇಂದ್ರ ಕಾಂಚನ್ ಅವರು ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಬಂದರಿನಲ್ಲಿ ಪತ್ತೆಯಾದ ಕೋಟ್ಯಾಂತರ ರೂ. ವೌಲ್ಯದ 5000 ಮೆಟ್ರಿಕ್ ಟನ್ ಮರಳಿನ ಅಕ್ರಮ ದಾಸ್ತಾನನ್ನು ಊರಿನವರು ಹಿಡಿದುಕೊಟ್ಟರೂ ಗಣಿ ಇಲಾಖೆಯ ಅಧಿಕಾರಿಗಳು ದುರ್ಬಲ ಎಫ್‌ಐಆರ್ ದಾಖಲಿಸಿ ಅವರಿಗೆ ನೆರವಾಗುತಿದ್ದಾರೆ. ಗಣಿಗಾರಿಕೆಗೆ ಬಳಸಿದ ಯಾವುದೇ ಉಪಕರಣಗಳನ್ನು ವಶಪಡಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಮರು ತನಿಖೆಗೆ ಆದೇಶಿಸಿದ್ದು, ಅದರ ವರದಿಯನ್ನು ಎದುರುನೋಡಲಾಗುತ್ತಿದೆ ಎಂದ, ಜಿಲ್ಲೆಯ ಮರಳು ಸಮಸ್ಯೆಗೆ ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಬೇಕಾಗಿದೆ ಎಂದು ಚರ್ಚೆಗೆ ಮುಕ್ತಾಯ ಹಾಡಿದರು.

ಗೀತಾಂಜಲಿ ಸುವರ್ಣ ಅವರು ಕೆಂಪು ಕಲ್ಲು ಗಣಿಗಾರಿಕೆ ಮಾಡುವವರನ್ನು ಬಿಟ್ಟು, ಹೊಟ್ಟೆಪಾಡಿಗೆ ಅವುಗಳನ್ನು ಸಾಗಿಸುವ ಲಾರಿಯನ್ನು ಹಿಡಿದು ಚಾಲಕನ ಮೇಲೆ 50,000ರೂ. ದಂಡ ವಿಧಿಸುತಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿ, ಗಣಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಕುರಿತೂ ಚರ್ಚೆ ನಡೆಯಿತು.

ಗೀತಾಂಜಲಿ ಸುವರ್ಣ ಅವರು ಕೆಂಪು ಕಲ್ಲು ಗಣಿಗಾರಿಕೆ ಮಾಡುವವರನ್ನು ಬಿಟ್ಟು, ಹೊಟ್ಟೆಪಾಡಿಗೆ ಅವುಗಳನ್ನು ಸಾಗಿಸುವ ಲಾರಿಯನ್ನು ಹಿಡಿದು ಚಾಲಕನ ಮೇಲೆ 50,000ರೂ. ದಂಡ ವಿಧಿಸುತಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿ, ಗಣಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಕುರಿತೂ ಚರ್ಚೆ ನಡೆಯಿತು. ಟೋಲ್‌ಗೆ ವಿರೋಧ:  ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಅಳವಡಿಸಿರುವ ಟೋಲ್‌ಗೇಟ್‌ಗಳಲ್ಲಿ ಕಂಪೆನಿ ಟೋಲ್ ಸಂಗ್ರಹಿಸುವ ಕುರಿತು ಸಹ ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಟೋಲ್ ಸಂಗ್ರಹಕ್ಕೆ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಪರಿಸರದ ಎಂಟು ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಟೋಲ್‌ನಿಂದ ರಿಯಾಯಿತಿ ನೀಡಬೇಕು ಎಂದು ರಾಘವೇಂದ್ರ ಕಾಂಚನ್ ಆಗ್ರಹಿಸಿದರು.

   ರಾ.ಹೆದ್ದಾರಿಯ ಭೂಸ್ವಾಧೀನತಾ ಪ್ರಕ್ರಿಯೆ ಮುಗಿದಿದೆ. ಪಡುಬಿದ್ರಿಯಲ್ಲಿ ಶೇ.100 ಮಂದಿಗೆ ನೋಟೀಸು ನೀಡಲಾಗಿದೆ. ಇಲ್ಲಿನ್ನು ಯಾವುದೇ ಸಮಸ್ಯೆ ಗಳಿಲ್ಲ ಎಂದು ಶಿಲ್ಪ ನಾಗ್ ನುಡಿದರು. ಹಾವಂಜೆ ಮೀಸಲು ಅರಣ್ಯದಿಂದ ಜನರಿಗಾಗುತ್ತಿರುವ ತೊಂದರೆಗಳ ಕುರಿತು ಜನಾರ್ದನ ತೋನ್ಸೆ, ಅಂಡಾರಿನ ಶಾಲೆಯೊಂದರ ಬಾವಿ ಕುಸಿದಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು ಜ್ಯೋತಿ ಹರೀಶ್ ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸ್ಥಾಯಿ ಸಮಿತಿ ಸದಸ್ಯರಾದ ಬಾಬು ಶೆಟ್ಟಿ, ಉದಯ ಕೋಟ್ಯಾನ್, ಶಶಿಕಾಂತ ಪಡುಬಿದ್ರಿ, ಉಪ ಕಾರ್ಯದಶಿ ಎನ್.ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X