Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ನಾವು ಸೇವಿಸುತ್ತಿರುವ ವಿಷಕಾರಿ...

ನಾವು ಸೇವಿಸುತ್ತಿರುವ ವಿಷಕಾರಿ ಎಣ್ಣೆಗಳಿಂದ ಮುಕ್ತಿ ಬೇಕೇ ? ಇಲ್ಲಿದೆ ಒಂದು ಪರಿಹಾರ

ಉತ್ಕೃಷ್ಟ ದರ್ಜೆ, ಕೊಲೆಸ್ಟ್ರಾಲ್ ಮುಕ್ತ , ಡಬಲ್ ರೀಫೈನ್ಡ್ ಹೆಸರಲ್ಲಿ ಹೆಸರಾಂತ ಬ್ರಾಂಡುಗಳು ಮಾಡುತ್ತಿರುವ ವಂಚನೆ ಕೊನೆಗೊಳಿಸೋಣ

ರವಿ ಅರೇಹಳ್ಳಿರವಿ ಅರೇಹಳ್ಳಿ8 Feb 2017 9:51 PM IST
share
ನಾವು ಸೇವಿಸುತ್ತಿರುವ ವಿಷಕಾರಿ ಎಣ್ಣೆಗಳಿಂದ ಮುಕ್ತಿ ಬೇಕೇ ?   ಇಲ್ಲಿದೆ ಒಂದು ಪರಿಹಾರ

ಉತ್ಕೃಷ್ಟ ದರ್ಜೆಯವೆಂದು, ಕೊಲೆಸ್ಟ್ರಾಲ್ ಮುಕ್ತ (ಇದು ಇನ್ನೊಂದು ದೊಡ್ಡ ಕಥೆ!) ಡಬಲ್ ರೀಫೈನ್ಡ್ ಎಂದೆಲ್ಲಾ ಹೇಳಿಕೊಳ್ಳುವ ಹೆಸರಾಂತ ಬ್ರಾಂಡುಗಳ ಬಹುತೇಕ ಎಣ್ಣೆಗಳ ಬೆಲೆಗಳು 70 ರಿಂದ ಶುರು ಆಗಿ 130--140ರಲ್ಲಿ ನಿಲ್ಲುತ್ತವೆ. ಬಹುತೇಕ ಎಣ್ಣೆಗಳು ಆಯಾ ಎಣ್ಣೆಕಾಳುಗಳಿಗೆ ಸಂಬಂಧಿಸಿದ ವಾಸನೆ, ಬಣ್ಣ ಇತ್ಯಾದಿಗಳನ್ನು ಕಳೆದುಕೊಂಡು ತಿಳಿನೀರಿನಂತೆ ಸ್ವಚ್ಛ ಸುಂದರವಾಗಿ ಕಾಣಿಸುತ್ತಿರುತ್ತವೆ. ಇರಲಿ.

ಒಂದಿಷ್ಟು ಎಣ್ಣೆ ತೆಗೆಯುವ ಹಂತದ ಲೆಕ್ಕಾಚಾರಗಳನ್ನು ನೋಡೋಣ ಬನ್ನಿ.

ಕಡ್ಲೆಕಾಯಿ (ಶೇಂಗಾ) ಎಣ್ಣೆ ಒಂದು ಕೆಜಿಯಷ್ಟು ತಯಾರಾಗಲು ಅತ್ಯುತ್ತಮ ದರ್ಜೆಯ 2ರಿಂದ 2.5 ಕೆಜಿ ಶೇಂಗಾಬೀಜ ಬೇಕು. 2 ಕೆಜಿ ಬೀಜ (ಸಾವಯವ ಅಲ್ಲದ್ದು) ದ ಹೋಲ್ಸೇಲ್ ಬೆಲೆ ಈಗ 70 ರೂಪಾಯಿ ಇರಬಹುದೆಂದುಕೊಳ್ಳೋಣ. ಶೇಂಗಾಬೀಜದ ಖರ್ಚು 140 ಆಯಿತು. ಇದಕ್ಕೆ ಎಣ್ಣೆ ತೆಗೆಯುವ ಛಾರ್ಜು 30 ಸೇರಿಸೋಣ. ನಂತರ ಸಾಗಣೆ, ಕ್ಲೀನಿಂಗ್ ಇತ್ಯಾದಿ 30 ರೂಪಾಯಿ ಎಂದುಕೊಳ್ಳೋಣ. ಎಣ್ಣೆ ತೆಗೆದ ಮೇಲೆ ಇದಕ್ಕೆ ಶೇ 25ರಷ್ಟು ಪ್ಯಾಕಿಂಗ್ ಮತ್ತು ಮಾರ್ಕೆಟಿಂಗ್ ವೆಚ್ಚಗಳು ಸೇರಿಕೊಳ್ಳುತ್ತವೆ.

2 ಕೆಜಿ ಶೇಂಗಾ ಬೀಜ 140/-
ಮಿಲ್ಲಿಂಗ್ ಚಾರ್ಜು 30/-
ಸಾಗಣೆ, ಕ್ಲೀನಿಂಗ್ ಖರ್ಚು 30/-
ಪ್ಯಾಕಿಂಗ್ ಮಾರ್ಕೆಟಿಂಗ್ 50/-
-------------------------------------
ಒಟ್ಟು 250/-
ಒಂದು ಕೆಜಿ ಹಿಂಡಿ -30/-
--------------------------------
ನಂತರ ಒಟ್ಟು 220/-

ಒಟ್ಟು ಮೊತ್ತದಲ್ಲಿ 1 ಕೆಜಿ ಹಿಂಡಿಯ ಫಾಕ್ಟರಿ ದರ 30ನ್ನು ಕಳೆದರೆ ಕೆಜಿ ಎಣ್ಣೆಯ ಮೊತ್ತ 220ಕ್ಕೆ ಇಳಿಯುತ್ತದೆ. ದೊಡ್ಡ ಪ್ರಮಾಣದಲ್ಲಿ ಫಾಕ್ಟರಿಗಳಲ್ಲಿ ಎಣ್ಣೆ ತೆಗೆದು ರೀಫೈನ್ ಮಾಡುವುದರಿಂದ, ಹೀಟ್ ಪ್ರೆಸ್ ಮಾಡಿ ಎಣ್ಣೆ ತೆಗೆಯುವಾಗ ಪ್ರತಿ ಕೆಜಿ ಬೀಜಕ್ಕೆ ಸ್ವಲ್ಪ ಹೆಚ್ಚು ಎಣ್ಣೆ ದೊರೆಯಬಹುದು. ಆಗ ಈ ಖರ್ಚುಗಳು ಶೇ 20 ರಷ್ಟು ಕಡಿಮೆ ಆಗುತ್ತವೆ ಎಂದುಕೊಂಡರೂ ಪ್ರತಿ ಕೆಜಿ ಎಣ್ಣೆಯ ಫ್ಯಾಕ್ಟರಿ ದರವೆ 176 ರೂಪಾಯಿ ಆಗುತ್ತದೆ. ಅದು ಡಿಸ್ಟಿಬ್ಯೂಟರ್‌ಗಳನ್ನು ತಲುಪಿ, ಹೋಲ್‌ಸೇಲ್, ರೀಟೈಲ್ (ಸಾಧಾರಣ ವಸ್ತುವಿನ ರೀಟೈಲ್ ಬೆಲೆಯ ಶೇ 33ರಷ್ಟು ಇಲ್ಲಿ ಹಂಚಿಕೆಯಾಗುತ್ತದೆ) ಎಂದು ನಮ್ಮ ಕೈ ತಲುಪುವಷ್ಟರಲ್ಲಿ 234 ಆಗಬೇಕು.

ಆದರೆ ಕೆಜಿಗೆ 234ರೂಪಾಯಿ ಎಂದರೆ ಯಾವ ಗ್ರಾಹಕನೂ ಆ ಎಣ್ಣೆಯನ್ನು ಮೂಸುವುದಿಲ್ಲ.

ಆಗ ‘ಮಾರುಕಟ್ಟೆ’ಯ ವ್ಯಾಪಾರಿ ಬುದ್ದಿ ಕೆಲಸ ಮಾಡತೊಡಗುತ್ತದೆ. ಕಲಬೆರಕೆ ಆರಂಭವಾಗುತ್ತದೆ. ಗ್ರಾಹಕರಿಗೆ ಬೆಲೆಯೂ ಹೆಚ್ಚಾಗಬಾರದು, ಕರಿದ ತಿಂಡಿಗಳೂ ಗರಿಗರಿಯಾಗಿರಬೇಕು. ಆರೋಗ್ಯದ ಮೇಲೆ ದಿಡೀರ್ ಪರಿಣಾಮ ಉಂಟಾಗುವಂತಿರಬಾರದು. ನಿಧಾನ ವಿಷದಂತ ಪದಾರ್ಥಗಳಾದರೆ ಸಲೀಸು.

’ಲಿಕ್ವಿಡ್ ಪ್ಯಾರಾಫಿನ್’ನಂತಹ ಪೆಟ್ರೊಲಿಯಂ ಸಂಸ್ಕರಣೆಯ ಹಂತದ ‘ಉಳಿಕೆ’ಗಳು ಕಲಬೆರಕೆ ಮಾಡಲು ಬಹಳ ಸೂಕ್ತ ಪದಾರ್ಥ. ಇಂತದ್ದೆ ಹಲವು ಕಲಬೆರಕೆ ಪದಾರ್ಥಗಳು ಹಾಲಿನಲ್ಲಿ ನೀರು ಹೊಂದಿಕೊಳ್ಳುವಂತೆ ಎಣ್ಣೆಯೊಡನೆ ಸೇರಿಹೋಗುತ್ತವೆ. ಅಗ್ಗದ ಫಾಮ್ ಆಯಿಲ್ ಕೊನೆಯ ಆಯ್ಕೆ. ಜೊತೆಗೆ ಒಂದಿಷ್ಟು ಬಣ್ಣ, ಕೃತಕ ಸುವಾಸನೆಯನ್ನು ಸೇರಿಸಲೇಬೇಕು. ಎಲ್ಲವೂ ಗ್ರಾಹಕರನ್ನು ಖುಷಿಪಡಿಸಲು. ಹೀಗೆಲ್ಲಾ ಕಲಬೆರಕೆಯಾಗಿ ತಯಾರಾದ ಎಣ್ಣೆಯ ಪ್ರತಿ ಕೆಜಿಯ ಫಾಕ್ಟರಿ ದರ 50--60ರ ಆಸುಪಾಸಿನಲ್ಲಿರಬಹುದು. ನೋಡಿ, ನಮಗಾಗಿ ಎಣ್ಣೆ ತಯಾರು ಮಾಡುವ ದೊಡ್ಡ ಫ್ಯಾಕ್ಟರಿಯವ ಎಷ್ಟೆಲ್ಲಾ ಕಲಬೆರಕೆಯ ಸರ್ಕಸ್ಸು ಮಾಡಬೇಕಲ್ಲವೆ...

ಈ ಲೆಕ್ಕಾಚಾರ ಸ್ವಲ್ಪ ಅಂಕಿ ಅಂಶ ಬದಲಾವಣೆಯೊಂದಿಗೆ ಈಗ ಲಭ್ಯ ಇರುವ ಸೂರ್ಯಕಾಂತಿ, ತೆಂಗು, ಎಳ್ಳು, ಹುಚ್ಚೆಳ್ಳು...ಹೀಗೆ ಎಲ್ಲಾ ಎಣ್ಣೆಗಳಿಗೂ ಅನ್ವಯಿಸುತ್ತದೆ ಹಾಗೂ ಕಲಬೆರಕೆಯಲ್ಲಿ ಎಲ್ಲವೂ ಅಣ್ಣತಮ್ಮಂದಿರೇ.

ಹೇಳಿ ಇಷ್ಟು ಕಡಿಮೆ ಬೆಲೆಗೆ ತಯಾರಾಗುವ ಎಣ್ಣೆಯನ್ನೇ ಅಲ್ಲವೆ ನಾವೂ ನೀವೂ ಆ ರುಚಿ, ಈ ರುಚಿ, ಡೈಮಂಡು, ಗೋಲ್ಡು ಇತ್ಯಾದಿ ಬ್ರಾಂಡುಗಳಲ್ಲಿ ತಿನ್ನುತ್ತಿರುವುದು...ಇದೇ ಎಣ್ಣೆ ಮತ್ತು ಮೈದಾದಂತಹ ಘೋರ ವಿಷದ ಜೊತೆಗೂಡಿ ತಯಾರಾದ ಬೇಕರಿ ತಿನಿಸುಗಳನ್ನು ನಾವು ಚಪ್ಪರಿಸುತ್ತಿದ್ದೇವಲ್ಲ...ಪ್ರತಿ ಹಳ್ಳಿಯಲ್ಲೂ ಇಂದು ಬೇಕರಿಗಳಾಗಿವೆ...ಪಾನಿಪೂರಿ, ಗೋಬಿ ಮಂಚೂರಿ ಅಂಗಡಿಗಳು ಬಂದಿವೆ. ಎಣ್ಣೆ ಬಳಸುವುದರಲ್ಲಿ ಇಂದು ಬಡವ, ಬಲ್ಲಿದ; ಹಳ್ಳಿ ನಗರ ಎಂಬ ವ್ಯತ್ಯಾಸಗಳಿಲ್ಲ.

ಪ್ರತಿ ಗ್ರಾಂ ಎಣ್ಣೆ ನಮ್ಮ ದೇಹ ಸೇರುವಾಗಲೂ ನಿಧಾನ ವಿಷವನ್ನು ಉಣ್ಣುತ್ತಿರುತ್ತೇವೆ. ಇಂದಿನ ಜನರನ್ನುಅತಿಹೆಚ್ಚು ಕಾಡುತ್ತಿರುವ ಬೊಜ್ಜು, ಬೀಪಿ, ಶುಗರ್ರು, ಕ್ಯಾನ್ಸರ್ರು ಮತ್ತೊಂದು ಇತ್ಯಾದಿ ನೂರೆಂಟು ಕಾಯಿಲೆಗಳಿಗೂ ನಾವು ಬಳಸುವ ಎಣ್ಣೆಗಳೇ ಮೂಲವಾಗಿರಬಾರದೇಕೆ...ಅದರಲ್ಲಿ ಸಂಶಯವೇ ಇಲ್ಲ ಬಿಡಿ. ಅಂಗೈ ಹುಣ್ಣಿಗೆ ಕನ್ನಡಿಯಾಕೆ?

ಹಾಗಿದ್ದ ಮೇಲೆ ನಾವು ಪ್ರತಿನಿತ್ಯ ಮನೆ, ಹೋಟೆಲ್ಲು, ಸಮಾರಂಭ ಎಲ್ಲೆಡೆಯೂ ವಿಷಕಾರಿ ಎಣ್ಣೆಗಳನ್ನು ಸೇವಿಸುತ್ತಿದ್ದೇವೆ ಅಂತಾಯಿತು.

ಹಾಗಾದರೆ ಇದರಿಂದ ಹೊರಬರಲು ಆಗುವುದಿಲ್ಲವೆ...

ಅಲ್ಲಾ.. ಇಷ್ಟೆಲ್ಲಾ ಆಗುವಾಗ ಸರ್ಕಾರ, ಅದರ ಅಂಗೋಪಾಂಗಗಳು ಎಣ್ಣೆ ಹೊಡೆಯುತ್ತಿರುತ್ತವಾ ಅಂತಾ ನೀವು ಕೇಳಬಹುದು...ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿವೆಯೆಂದರೆ ನಿಮಗೆ ವಿಷಯದ ಗಾಂಭೀರ್ಯ ಅರ್ಥವಾಗುತ್ತಿದೆ ಎಂದರ್ಥ.

ಎಲ್ಲರ ಮನಸ್ಸಿನಲ್ಲೂ ಆರೋಗ್ಯದ ಬುದ್ಧನ ಹುಟುಕಾಟ ಶುರುವಾಗಬೇಕಿದೆ.

(-ಎಣ್ಣೆಯ ಕತೆ ಮುಂದುವರೆಯುವುದು)

ಬೆಂಗಳೂರಿನಲ್ಲಿ ಕೋಲ್ಡ್ ಪ್ರೆಸ್ಡ್ ಆಯಿಲ್ (ಗಾಣದ ಪರಿಶುದ್ಧ ಎಣ್ಣೆ) ಸೇರಿದಂತೆ ಆರ್ಗಾನಿಕ್ ಆಹಾರ ವಸ್ತುಗಳನ್ನು ರೈತರಿಂದ ನೇರವಾಗಿ ಕೊಳ್ಳುವ ಇಚ್ಛೆಯಿದ್ದರೆ ನಿಮ್ಮ ಹೆಸರು, ಏರಿಯಾ ಕುರಿತ ವಿವರಗಳೊಂದಿಗೆ ವಾಟ್ಸಾಪ್ ಮಾಡಿ - 99004 39930

share
ರವಿ ಅರೇಹಳ್ಳಿ
ರವಿ ಅರೇಹಳ್ಳಿ
Next Story
X