Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಾರವಾರ: ಅವೈಜ್ಞಾನಿಕ ಹೂಳು ಎತ್ತುವ...

ಕಾರವಾರ: ಅವೈಜ್ಞಾನಿಕ ಹೂಳು ಎತ್ತುವ ಕಾರ್ಯದಿಂದ ವಿನಾಶದತ್ತ ಕಡಲ ಜೀವಿಗಳು...

ಶ್ರೀನಿವಾಸ್ ಬಾಡ್ಕರ್ಶ್ರೀನಿವಾಸ್ ಬಾಡ್ಕರ್9 Feb 2017 11:11 PM IST
share
ಕಾರವಾರ: ಅವೈಜ್ಞಾನಿಕ ಹೂಳು ಎತ್ತುವ ಕಾರ್ಯದಿಂದ ವಿನಾಶದತ್ತ ಕಡಲ ಜೀವಿಗಳು...

ಕಾರವಾರ, ಫೆ.9: ನಗರದ ಟಾಗೋರ ಕಡಲ ತೀರದಲ್ಲಿ ಕಳೆದ ಎರಡು ದಿನದಿಂದ ನೀಲಿಕಲ್ಲು ಸೇರಿದಂತೆ ವಿವಿಧ ಕಡಲ ಜೀವಿಗಳ ಅವಶೇಷಗಳು ರಾಶಿಯಾಗಿ ಬಂದು ಸಂಗ್ರಹವಾಗುತ್ತಿವೆೆ.

ನೀಲಿಕಲ್ಲಿಗಳು,ಚಿಪ್ಪಿ,ಏಡಿ ಸೇರಿದಂತೆ ಹಲವು ಬಗೆಯ ಕಡಲ ಜೀವಿಗಳ ಚಿಪ್ಪಿಗಳು ಕಡಲ ತೀರದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ.ಅಪರೂಪವಾಗುತ್ತಿರುವ ನೀಲಿಕಲ್ಲಿನ ಸಣ್ಣ ಪ್ರಮಾಣದ ಚಿಪ್ಪಿಗಳು ಸೇರಿದಂತೆ ಹಲವು ಬಗೆಯ ಚಿಪ್ಪಿಕಲ್ಲು ಜಾತಿಗೆ ಸೇರಿದ ಜೀವಿಗಳು ಕಡಲತೀರದ ದಿವೇಕರ್ ಕಾಲೇಜಿನ ಹಿಂಭಾಗ,ಆರ್‌ಟಿಓ ಕಚೇರಿಯ ಎದುರಿನ ಕಡಲ ತೀರದಲ್ಲಿ ಬಂದು ರಾಶಿಯಾಗಿವೆ. ದಿನಬೆಳಗಾಗುವುದರೊಳಗೆ ಇಷ್ಟೊಂದು ಪ್ರಮಾಣದಲ್ಲಿ ಸತ್ತಿರುವುದಕ್ಕೆ ಮೀನುಗಾರರು ಸೇರಿದಂತೆ ಕಡಲಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


ಕೆಲವು ತಿಂಗಳುಗಳಿಂದ ಸಮುದ್ರದಲ್ಲಿ ಬಂದರು ವಿಸ್ತರಣೆಗೆ ದೊಡ್ಡ ದೊಡ್ಡ ಯಂತ್ರಗಳ ಮೂಲಕ ಅವೈಜ್ಞಾನಿಕವಾಗಿ ಹೂಳು ಎತ್ತುವ ಕಾರ್ಯದಿಂದಾಗಿ ಈ ರೀತಿ ಜೀವಿಗಳು ಸಾಯುತ್ತಿವೆ ಎನ್ನಲಾಗುತ್ತಿದೆ. ಹೂಳೆತ್ತುವಾಗ ಈ ಯಂತ್ರಗಳು ನೀರಿನಾಳದಲ್ಲಿ ಜೋರಾಗಿ ಹೂಳನ್ನು ಎಳೆದುಕೊಳ್ಳುತ್ತದೆ.ಈ ವೇಳೆ ನೀರಿನಲ್ಲಿ ಯಂತ್ರದಿಂದ ಬೀಡುಗಡೆಯಾಗುವ ಹೈಡ್ರೋಜನ್ ಸಲ್ಪೈಡ್, ಮಿಥೆನ್ ಇನ್ನಿತರ ರಾಸಾ ಯಿನಿಕ ಬೀಡುಗಡೆಯಾದಾಗ ಹಾಗೂ ಅದರ ರಭಸಕ್ಕೆ ಈ ಜೀವಿಗಳಿಗೆ ಸರಿಯಾಗಿ ಆಮ್ಲಜನಕ ದೊರೆಯದೆ ಸತ್ತಿರಬಹುದು ಎಂದು ಕಡಲ ವಿಜ್ಞಾನಿ ಡಾ. ವಿ. ಎನ್. ನಾಯ್ಕ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆ ಅದಿರು ಸಾಗಿಸಲು ಹಡಗುಗಸಂಚಾರ ಹೆಚ್ಚಾಗಿತ್ತು.ಆ ಸಂದರ್ಭದಲ್ಲಿ ಹಡಗುಗಳಿಂದ ಬಿದ್ದ ತೈಲ ಹಾಗೂ ಇನ್ನಿತರ ಕೆಮಿಕಲ್ ನೀರಿನ ತಳಭಾಗ ಸೇರಿ ಹೂಳು ತುಂಬಿಕೊಂಡಿತ್ತು.ಇದೀಗ ಹೂಳೆತ್ತುವ ರಭಸಕ್ಕೆ ಅದು ನೀರಿನೊಂದಿಗೆ ಬೆರೆತಿದೆ. ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಹೆಚ್ಚಿನೆ ಹಡಗುಗಳ ಓಡಾಟವಿಲ್ಲದೆ ಬೆಳವಣಿಗೆ ಹೊಂದಿದ್ದ ಜೀವಿಗಳು ಇದೀಗ ಯಂತ್ರಗಳು ಹೂಳೆತ್ತುವ ರಭಸಕ್ಕೆ ಅದರಲ್ಲಿದ್ದ ಕೆಮಿಕಲ್‌ಕಾರಕಗಳು ನೀರಿನೊಂದಿಗೆ ಮಿಶ್ರಿತವಾಗಿ ಸತ್ತಿರಬಹುದು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಪ್ರತೀ ಹುಣ್ಣಿಮೆ ಹಾಗೂ ಅಮಾವಾಸ್ಯೆ ಸಮಯದಲ್ಲಿ ಸಮುದ್ರದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತದೆ. ನೀಲಿಕಲ್ಲುಗಳು ಹೆಚ್ಚಾಗಿ ಸಮುದ್ರದೊಳಗಿನ ಬಂಡೆಕಲ್ಲುಗಳಿಗೆ ಅಂಟಿಕೊಂಡು ಬೆಳೆಯುತ್ತವೆ. ರಭಸವಾಗಿ ಬಂಡೆಗಲ್ಲುಗಳಿಗೆ ಬಡಿಯುವ ತೆರೆಗಳಿಂದ ಚಿಕ್ಕ ಗಾತ್ರದ ನೀಲಿ ಕಲ್ಲುಗಳು ಗಟ್ಟಿಯಾಗಿ ಅಂಟಿಕೊಳ್ಳಲಿಕ್ಕಾಗದೇ ಉದುರಿ ಬೀಳುತ್ತವೆ. ಇದರಿಂದಲೂ ದಡದಲ್ಲಿ ರಾಶಿಯಾಗಿರಬಹುದು ಎಂದು ಸ್ಥಳೀಯರು,ಮೀನುಗಾರರು ಹೇಳುತ್ತಿದ್ದಾರೆ.


 ನೀರು ಸರಬರಾಜಿಗೆ ತಾಂತ್ರಿಕ ಅಡಚಣೆ: ಯೋಜನೆ ಪ್ರದೇಶದಲ್ಲಿ ಕಳ್ಳತನ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶದಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಸಂಪರ್ಕ ಕಲ್ಪಿಸುವ ಕಾಪರ್ ವಯರ್ ಕಳ್ಳತನವಾಗಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೋಟಾರ್‌ಗೆ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಕೂಟುಹೊಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕೂಟುಹೊಳೆ ಹಾಗೂ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶಕ್ಕೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಭೇಟಿ ನೀಡಿ ನೀರಿನ ಮಟ್ಟವನ್ನು ಅವಲೋಕಿಸಿದ್ದಾರೆ. 

share
ಶ್ರೀನಿವಾಸ್ ಬಾಡ್ಕರ್
ಶ್ರೀನಿವಾಸ್ ಬಾಡ್ಕರ್
Next Story
X