Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡ ಹೆಣ್ಮಕ್ಕಳ ಮನಗೆದ್ದ BWF ಮಿತ್ರರು

ಬಡ ಹೆಣ್ಮಕ್ಕಳ ಮನಗೆದ್ದ BWF ಮಿತ್ರರು

ಅನಿವಾಸಿ ಭಾರತೀಯರ "ಸೆಂಚುರಿ ಮದುವೆ"

ರಶೀದ್ ವಿಟ್ಲ.ರಶೀದ್ ವಿಟ್ಲ.10 Feb 2017 9:36 PM IST
share
ಬಡ ಹೆಣ್ಮಕ್ಕಳ ಮನಗೆದ್ದ BWF ಮಿತ್ರರು

ವಿದೇಶಕ್ಕೆ ಕೆಲಸ ಅರಸುತ್ತಾ ತೆರಳುವ ಅನಿವಾಸಿ ಮಿತ್ರರು ತಾನಾಯಿತು, ತನ್ನ ಪಾಡಾಯಿತು ಎಂದು ಇರುವುದು ಸಾಮಾನ್ಯ. ಗಲ್ಫ್ ಜೀವನ ಎಂದರೆ ತನ್ನ ಕೋಣೆ ಮತ್ತು ಕೆಲಸದ ಸ್ಥಳಕ್ಕೆ ಸೀಮಿತವಾಗಿರುತ್ತದೆ. ಇವಿಷ್ಟಲ್ಲ.., ಇದಕ್ಕೂ ಆಚೆಗಿನ ಅರ್ಥಪೂರ್ಣ ಜೀವನ ನಡೆಸಬೇಕೆಂದು ಪಣತೊಟ್ಟು ಇಂದು ಕರಾವಳಿಯ ಬಡವರ ಮನೆ ಮನೆ ಮಾತಾದ ಒಂದು ಸಂಸ್ಥೆ ಎದ್ದು ನಿಂತಿರುವುದು ನಿಜಕ್ಕೂ ಸೋಜಿಗ.

ಅಬುದಾಬಿಯಲ್ಲಿ ನೆಲೆಸಿರುವ ನಮ್ಮೂರ ಸುಮಾರು 12 ಮುಸ್ಲಿಂ ಕುಟುಂಬ ಒಂದೆಡೆ ಸೇರುತ್ತದೆ. ಅಬುದಾಬಿಯಲ್ಲೊಂದು "ಫ್ಯಾಮಿಲಿ ಮೀಟ್" ಏರ್ಪಡಿಸುತ್ತದೆ. ಆವೊಂದು ಫ್ಯಾಮಿಲಿ ಮೀಟ್ ನೂರಾರು ಬಡ/ಅಶಕ್ತ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದು ಅಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಇಂದು ಅಬುದಾಬಿಯ ಆ ತಂಡ ಕರಾವಳಿ ಜಿಲ್ಲೆಯಲ್ಲಿ ಕ್ರಾಂತಿಯನ್ನು ಮಾಡಿದೆ. ಯಾರೂ ಮಾಡದ್ದನ್ನು ಮಾಡಿ ತೋರಿಸಿದೆ.

2005 ರಲ್ಲಿ ಮಹಮ್ಮದಲಿ ಉಚ್ಚಿಲ ನೇತೃತ್ವದಲ್ಲಿ ಅಬುದಾಬಿಯಲ್ಲಿ ಫ್ಯಾಮಿಲಿ ಗೆಟ್-ಟುಗೆದರ್ ಆಯೋಜಿಸಲಾಗುತ್ತದೆ. ತನ್ನ ಸರ್ಕಲ್ ನಲ್ಲಿರುವ ಶಾಹುಲ್ ಹಮೀದ್ ಪರ್ಲಿಯಾ, ಅಬ್ದುಲ್ ಹಮೀದ್ ಉಚ್ಚಿಲ್, ಮೊಯ್ದಿನಾಕ ಮಂಗಳೂರು, ಅಬ್ದುಲ್ಲ ಮದುಮೂಲೆ, ಹಂಝ ಅಬ್ದುಲ್ ಖಾದರ್, ರಫೀಕ್ ಕೃಷ್ಣಾಪುರ, ಮಹಮ್ಮದ್ ಸಿದ್ದೀಕ್ ಕಾಪು, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್ ಕುತ್ತಾರ್, ಇಮ್ರಾನ್ ಅಹ್ಮದ್ ಕುದ್ರೋಳಿ ಮೊದಲಾದ ಸುಮಾರು 12 ಕುಟುಂಬಿಕರು ಒಟ್ಟು ಸೇರುತ್ತಾರೆ. ಅದೇ ತಂಡ ಕುಟುಂಬ ಸಮ್ಮಿಲನಕ್ಕೆ ಒಂದು ಸಂಘಟನೆಯ ರೂಪ ನೀಡುತ್ತದೆ. "ಬ್ಯಾರೀಸ್ ವೆಲ್ಫೇರ್ ಫಾರಂ" (ಬಿಡಬ್ಲ್ಯುಎಫ್) ಅಬುದಾಬಿ ಹೆಸರಲ್ಲಿ ಸಂಘಟನೆ ಕಾರ್ಯಾರಂಭವಾಗುತ್ತದೆ. ಮಹಮ್ಮದಲಿ ಉಚ್ಚಿಲ್ ಅಧ್ಯಕ್ಷರಾಗಿಯೂ, ಅಬ್ದುಲ್ಲ ಮದುಮೂಲೆ ಕಾರ್ಯದರ್ಶಿಯಾಗಿಯೂ ನೇಮಕವಾಗುತ್ತಾರೆ. ಸಂಸ್ಥೆಗೆ ದಶಮಾನೋತ್ಸವ ಕಳೆದರೂ ಅವರೇ ಈ ತನಕವೂ ಸರ್ವಾನುಮತದಿಂದ ಅಧ್ಯಕ್ಷ, ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ. ಪ್ರಸ್ತುತ ಬಿಡಬ್ಲ್ಯುಎಫ್ 25 ಕಾರ್ಯಕಾರೀ ಸಮಿತಿ ಸದಸ್ಯರನ್ನು ಹಾಗೂ ಅಬುದಾಬಿಯಾದ್ಯಂತ ಸುಮಾರು 600 ಸಾಮಾನ್ಯ ಸದಸ್ಯರನ್ನು ಹೊಂದಿದೆ. ಊರಿನ ಬಡ ಹೆಣ್ಮಕ್ಕಳ ಕಣ್ಣೀರಿಗೆ ಪನ್ನೀರಾಗುವುದೇ ಈ ಸಂಘಟನೆಯ ಮೂಲ ಉದ್ದೇಶವಾಗುತ್ತದೆ.

ಮುಸ್ಲಿಂ ಸಮುದಾಯದಲ್ಲಿ ವರದಕ್ಷಿಣೆಯ ಪೆಡಂಬೂತಕ್ಕೆ ಬಲಿಯಾಗಿ ಬಡಹೆಣ್ಮಕ್ಕಳು ಮೂಲೆಗುಂಪಾಗುವುದನ್ನು ಮನಗಂಡ ಬಿಡಬ್ಲ್ಯುಎಫ್ ಸಂಘಟನೆ ಅಂತಹ ಹೆಣ್ಮಕ್ಕಳ ಆಪ್ತ ಸಂಸ್ಥೆಯಾಗಿ ಹೊರಹೊಮ್ಮುತ್ತದೆ. ಸಾಮೂಹಿಕ ವಿವಾಹಕ್ಕೆ ಅಡಿಪಾಯ ಹಾಕುತ್ತದೆ. 2007 ರಲ್ಲಿ ಮಂಗಳೂರಿನಲ್ಲಿ ಸಭೆ ನಡೆಸಿದ ಬಿಡಬ್ಲ್ಯುಎಫ್ ತಂಡ ಮಂಗಳೂರಿನ ಪ್ರಮುಖರಾದ ಯು.ಟಿ.ಖಾದರ್, ಎಂ.ಬಿ.ಅಬ್ದುರ್ರಹ್ಮಾನ್, ಉಮರ್ ಯು.ಎಚ್, ಯು.ಕೆ.ಇಬ್ರಾಹಿಂ ಹಾಜಿ, ಸ್ಟೇಟ್ ಬ್ಯಾಂಕ್ ಖಾದ್ರಿಯಾಕನನ್ನು ಸೇರಿಸಿಕೊಂಡು ಪ್ರಥಮ ಸಭೆ ನಡೆಸುತ್ತದೆ. ಬಿಡಬ್ಲ್ಯುಎಫ್ ಮಾಸ್ ಮ್ಯಾರೇಜ್ ಕಮಿಟಿ ಅಸ್ತಿತ್ವಕ್ಕೆ ಬರುತ್ತದೆ. ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ ಸಮಾರಂಭ ಪ್ರಾರಂಭವಾಗುತ್ತದೆ. ಬಂದ ಬಡಕುಟುಂಬದ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಕುಟುಂಬಗಳನ್ನು ಆಯ್ಕೆ ಮಾಡಿ ಮದುವೆ ಮಾಡಿಸಲಾಗುತ್ತದೆ. ಮದುಮಗಳಿಗೆ ಚಿನ್ನದೊಡವೆ, ಮದುವೆ ವಸ್ತ್ರ, ಖರ್ಚಿಗೆ ಮೊತ್ತ, ಮದುಮಗನಿಗೆ ಬಟ್ಟೆಬರೆ ನೀಡಲಾಗುತ್ತದೆ. ಹೀಗೇ ಮುಂದುವರಿದ ಸಾಮೂಹಿಕ ವಿವಾಹ ಜೋಡಿಗಳ ಸಂಖ್ಯೆ 83 ಕ್ಕೆ ತಲುಪಿದೆ. ನಾಳೆ (11/02) ಮಿಲಾಗ್ರಿಸ್ ಹಾಲ್ ನಲ್ಲಿ ಮತ್ತೆ 17 ಜೋಡಿಗೆ ಮದುವೆ ನಡೆಯಲಿದೆ. ಹೀಗೇ ಒಟ್ಟು ನೂರು ಜೋಡಿಗೆ ವಿವಾಹ ನಡೆಸುವ ಮೂಲಕ ಬಿಡಬ್ಲ್ಯುಎಫ್ ಎಂಬ ಅಬುದಾಬಿಯ ಸಂಘಟನೆ ಕ್ರಾಂತಿ ಮಾಡಿದೆ. ಕರಾವಳಿ ಜಿಲ್ಲೆಯಲ್ಲಿ ಪ್ರಥಮವಾಗಿ ಪ್ರಾರಂಭಗೊಂಡ ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹವನ್ನು ಮಾದರಿಯಾಗಿ ತೆಗೆದುಕೊಂಡು ಇಂದು ಹಲವು ಸಾಮಾಜಿಕ ಸಂಘಟನೆಗಳು ಬಡಹೆಣ್ಮಕ್ಕಳ ಮದುವೆ ನಡೆಸುತ್ತಿದೆ. ಒಂದು ರೀತಿಯಲ್ಲಿ ಜಾಗೃತಿ ಮೂಡಿಸಿದೆ. ವರದಕ್ಷಿಣೆಯ ಸಮಸ್ಯೆ ಹಂತಹಂತವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಆರ್ಥಿಕ ಸಹಾಯ ಮಾಡುತ್ತಿದ್ದರೆ ಊರಿನಲ್ಲಿದ್ದುಕೊಂಡು ಅದರ ಕೆಲಸಕಾರ್ಯಗಳನ್ನು ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ಸುಸೂತ್ರವಾಗಿ ನಡೆಸುತ್ತಿದೆ. ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಲ್ ವಫಾದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಇವಿಷ್ಟೇ ಅಲ್ಲ. ಮದುವೆಯಾದ ಬಳಿಕ ಆ ಫಲಾನುಭವಿಗಳ ಮನೆಮನೆ ಸಂದರ್ಶಿಸುವ ಕಾರ್ಯವನ್ನೂ ಬಿಡಬ್ಲ್ಯುಎಫ್ ಕೈಗೆತ್ತಿಕೊಂಡಿತು. ಹೀಗೇ ಸರ್ವೆ ನಡೆಸುವಾಗ ಎಡಪದವು ಎಂಬಲ್ಲಿ ಟಾಯ್ಲೆಟ್ ರಹಿತ ಮನೆಯನ್ನು ಕಂಡು ಬೇಸತ್ತ ಬಿಡಬ್ಲ್ಯುಎಫ್ ಅಂದಿನಿಂದ ಟಾಯ್ಲೆಟ್ ಇಲ್ಲದ ಬಡವರ ಮನೆಗಳಲ್ಲಿ ಟಾಯ್ಲೆಟ್ ನಿರ್ಮಾಣ ಪ್ರಾರಂಭಿಸಿ ಸ್ವಚ್ಛ ಭಾರತಕ್ಕೆ ಒತ್ತು ನೀಡಿತ್ತದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈತನಕ ಸುಮಾರು 150 ಟಾಯ್ಲೆಟ್ ಗಳ ನಿರ್ಮಾಣ ಬಿಡಬ್ಲ್ಯುಎಫ್ ನಿಂದ ಆಗಿದೆ. ಅದಿನ್ನೂ ಮುಂದುವರೆಯುತ್ತಿದೆ. ಊರಲ್ಲಿ ಅಲ್ ವಫಾ ಹಾಗೂ ಎಂ.ಫ್ರೆಂಡ್ಸ್ ಟಾಯ್ಲೆಟ್ ಯೋಜನೆಗೆ ಸಹಕಾರ ನೀಡುತ್ತಿದೆ. ಸಾಮೂಹಿಕ ವಿವಾಹ, ಟಾಯ್ಲೆಟ್ ನಿರ್ಮಾಣವಲ್ಲದೆ ಸಮಾರು 40 ವ್ಹೀಲ್ ಚೆಯರ್ ಗಳನ್ನು ಕೂಡಾ ಬಿಡಬ್ಲ್ಯುಎಫ್ ಅರ್ಹರಿಗೆ ವಿತರಿಸಿದೆ. ಕಳೆದೊಂದು ವರ್ಷದ ಹಿಂದೆ ಸಂಸ್ಥೆಗೆ ದಶಮಾನೋತ್ಸವ ಕಾರ್ಯಕ್ರಮ ಅಬುದಾಬಿಯಲ್ಲಿ ಅದ್ದೂರಿಯಾಗಿ ನಡೆದರೆ ಇದೀಗ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ದಶವರ್ಷದಲ್ಲೇ ಸೆಂಚುರಿ ಬಾರಿಸಿದ ಸಂತೋಷ ಬೇರೆ. ಬಿಡಬ್ಲ್ಯುಎಫ್ ನಿಂದ ನೂರು ಹೆಣ್ಮಕ್ಕಳ ಬಾಳು ಹಸನಾಯಿತೆಂದರೆ ಅಲ್ಲಿ ಸಾವಿರಾರು ಬಡಕುಟುಂಬ ಖುಷಿಪಟ್ಟಂತೆ. ಲಕ್ಷಾಂತರ ಜನ ಕೈ ಎತ್ತಿ ಪ್ರಾರ್ಥಿಸಿದಂತೆ. ಸಂಘಟನೆಗೆ ದೇವರು ಹತ್ತಿರವಾದಂತೆ. ಬಿಡಬ್ಲ್ಯುಎಫ್ ಇನ್ನಷ್ಟು ಮತ್ತಷ್ಟು ಸಮುದಾಯ ಸ್ನೇಹಿಯಾಗಲಿ. ಶುಭವಾಗಲಿ.

    (ಮಹಮ್ಮದಲಿ ಉಚ್ಚಿಲ)

share
ರಶೀದ್ ವಿಟ್ಲ.
ರಶೀದ್ ವಿಟ್ಲ.
Next Story
X