Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೆ

ಓ ಮೆಣಸೆ

ವಾರ್ತಾಭಾರತಿವಾರ್ತಾಭಾರತಿ13 Feb 2017 12:35 AM IST
share
ಓ ಮೆಣಸೆ

  *ಮೋದಿ ಬಗ್ಗೆ ಎಸ್.ಎಂ.ಕೃಷ್ಣ ಅವರಿಗೆ ಅಪಾರ ಗೌರವವಿದೆ

-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಆ ಗೌರವ ತಮ್ಮ ಪಕ್ಷದ ಮುಖಂಡರ ಮೇಲೆ ಇಲ್ಲದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣ.

---------------------
  ಸರಕಾರಕ್ಕಿಂತ ಸಂತರ ಮಾತು ಪ್ರಭಾವ ಶಾಲಿ

  - ನರೇಂದ್ರ ಮೋದಿ, ಪ್ರಧಾನಿ

ಅದಕ್ಕೇ ಸಂತರ ಸಂಖ್ಯೆ ಹೆಚ್ಚುತ್ತಿರುವುದು.

---------------------
  ಪ್ರತಿಯೊಂದು ಭಾಷೆಯ ಹಿಂದೆ ಸಂಸ್ಕೃತಿ ಅಡಗಿರುತ್ತದೆ
-ವಿ.ಸುನಿಲ್ ಕುಮಾರ್, ಶಾಸಕ  

ಕೆಲವು ರಾಜಕಾರಣಿಗಳ ಬಾಯಲ್ಲಿ ಭಾಷೆ, ತನ್ನ ಸಂಸ್ಕೃತಿಯನ್ನೇ ಕಳೆದುಕೊಳ್ಳುತ್ತದೆ.

---------------------
  ಗೆಲ್ಲುವ ವಿಶ್ವಾಸವಿಲ್ಲದವರು ಮಾತ್ರ ಮೈತ್ರಿಗೆ ಮುಂದಾಗುತ್ತಾರೆ
- ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
  
ಕೆಲವರು ಹತ್ಯಾಕಾಂಡಕ್ಕೆ ಮುಂದಾದ ಉದಾಹರಣೆಗಳಿವೆ.

---------------------
  ಮುಖ್ಯಮಂತ್ರಿಯಾಗುವಂತೆ ಪನ್ನೀರ್ ಸೆಲ್ವಂ ನನ್ನನ್ನು ಒತ್ತಾಯಿಸಿದ್ದರು
- ಶಶಿಕಲಾ ನಟರಾಜನ್

ಈಗ ಅವರನ್ನು ಒತ್ತಾಯಿಸುವ ಸರದಿ ನಿಮ್ಮದು.

---------------------
  ಗಾಂಧಿ ಕಂಡ ರಾಮರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು
- ಗೋ.ಮಧುಸೂದನ್, ವಿ.ಪ.ಸದಸ್ಯ
  ಗಾಂಧಿ ಚುನಾವಣೆಗೆ ನಿಂತು ರಾಮರಾಜ್ಯದ ಕನಸು ಕಂಡಿರಲಿಲ್ಲ. 

--------------------
  ನಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿಲ್ಲ
- ಮುಲಾಯಂ ಸಿಂಗ್ ಯಾದವ್, ಎಸ್ಪಿ ವರಿಷ್ಠ  
ಮಗನ ಅಭಿಪ್ರಾಯವೇ ಅಂತಿಮ, ಅಷ್ಟೇ.

---------------------
  ಸರಕಾರವನ್ನು ಟೀಕಿಸುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
- ಸಿ.ಟಿ.ರವಿ, ಶಾಸಕ
  ನಿಮ್ಮ ಕಿನ್ನರಿಯನ್ನು ಹಿಡಿದುಕೊಂಡು ದಿಲ್ಲಿಗೆ ಯಾಕೆ ಹೋಗಬಾರದು?
---------------------
  ವಿಪಕ್ಷಗಳು ಪ್ರಧಾನಿ ಮೋದಿಯನ್ನು ಪದೇ ಪದೇ ಟೀಕಿಸುತ್ತಿರುವುದರಿಂದ ಅವರು ಹೆಚ್ಚು ಜನಪ್ರಿಯರಾಗುತ್ತಿದ್ದಾರೆ
- ಹೇಮಾಮಾಲಿನಿ, ಸಂಸದೆ
  ಜನಪ್ರಿಯರಾಗುವುದಕ್ಕಾಗಿಯೇ ಪ್ರಧಾನಿ ಮೋದಿ ತಪ್ಪು ಮಾಡುತ್ತಿರಬೇಕಲ್ಲ?
---------------------
  ರಾಜ್ಯಪಾಲರ ಭಾಷಣದಲ್ಲಿ ಉಪ್ಪೂ ಇಲ್ಲ, ಖಾರವೂ ಇಲ್ಲ

-ಕೋನರೆಡ್ಡಿ, ಶಾಸಕ
ಚಿಕನ್ ಟಿಕ್ಕಾ ಎಂದು ನೆಕ್ಕಿ ನೋಡಿರಬೇಕು.

---------------------
 ಕಾಂಗ್ರೆಸ್‌ಗೆ ಕಾರ್ಯಕರ್ತರೇ ಆಸ್ತಿ

-ಧರಂಸಿಂಗ್, ಮಾಜಿ ಮಖ್ಯಮಂತ್ರಿ

ಅಕ್ರಮ ಆಸ್ತಿ ಎಂದರಂತೆ ಮೋದಿ.

---------------------

  ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ನಿಜ

  -ಡಾ.ಜಿ.ಪರಮೇಶ್ವ್‌ರ್, ಸಚಿವ

ಮಾತಿನ ಮರುಳುಗಾರಿಕೆ ನಿಲ್ಲಿಸಿ, ಕಾನೂನು ಕೈಗೆತ್ತಿಕೊಳ್ಳಿ.

---------------------
  
ನನ್ನನ್ನು ಅರಿಯ ಬೇಕಾದರೆ ಅಧ್ಯಯನ ನಡೆಸಬೇಕು

-ನರೇಂದ್ರ ಮೋದಿ, ಪ್ರಧಾನಿ
  ಹೌದು. ತಮ್ಮ ಶಿಕ್ಷಣಾರ್ಹತೆಯ ಕುರಿತಂತೆ ಅಧ್ಯಯನ ನಡೆಯುತ್ತಿದೆ.

---------------------
  ಕನಸಿನಲ್ಲೂ ಮುಖ್ಯಮಂತ್ರಿ ಆಗೋ ಯೋಚನೆ ಇಲ್ಲ
- ಕೆ.ಎಸ್.ಈಶ್ವರಪ್ಪ, ವಿ.ಪ.ವಿ. ನಾಯಕ
ಬರೇ ವಾಸ್ತವದಲ್ಲಿ ಮಾತ್ರ ಯೋಚನೆ ಇರಬೇಕು.

---------------------
  ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ನಮಗೆ ಸಹೋದರರು
- ರಾಜನಾಥ್ ಸಿಂಗ್, ಕೇಂದ್ರ ಸಚಿವ
  ಅದಕ್ಕೆಂದೇ ಸಹೋದರರ ಮಧ್ಯೆ ಜಗಳ ತಂದಿಕ್ಕುತ್ತಿದ್ದೀರಾ?
---------------------
  ಮೋದಿ ಆಡಳಿತದಲ್ಲಿ ವಿಜಯ ಮಲ್ಯಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ
- ಅರುಣ್ ಜೇಟ್ಲಿ, ಕೇಂದ್ರ ಸಚಿವ
  ಒಂದು ರೂಪಾಯಿಯಿಂದ ಅವರಿಗೆ ಏನು ಲಾಭವಿದೆ?
---------------------
ಜಪಾನ್‌ನಲ್ಲಿ ನೆಲೆಸುವವರು ಜಪಾನಿಯರು, ಅಮೇರಿಕದಲ್ಲಿ ನೆಲೆಸುವವರು ಅಮೆರಿಕನ್ನರು, ಹಿಂದೂಸ್ಥಾನ್‌ದಲ್ಲಿ ನೆಲೆಸುವವರು ಹಿಂದೂಗಳು

-ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
  ಹಾಗಾದರೆ ಬ್ರಾಹ್ಮಣರೆಲ್ಲ ಎಲ್ಲಿಗೆ ಹೋಗಬೇಕು?
---------------------
ಸರಕಾರದ ನೀತಿ ವಿರೋಧಿಸುವವರಿಗೆ ದೇಶ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ

-ಎಂ.ವೀರಪ್ಪ ಮೊಯ್ಲಿ, ಸಂಸದ
 ಅದಕ್ಕೆಂದೇ ತಾವು ಬಾಯಿ ಮುಚ್ಚಿ ಕೂತಿರುವುದೇ?

---------------------
  ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಗೆ ಕುಂದು ತಂದಿದ್ದಾರೆ
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
 ಕುಂದು ತರುವುದು ಅವರ ಘನತೆಯ ಭಾಗವಂತೆ.

---------------------
  ತೋಚಿದಲ್ಲಿಗೆ ಅಟ್ಟಲು ನಾವೇನು ಕುರಿ ಮಂದೆಯಲ್ಲ
- ಕಮಲ ಹಾಸನ್, ನಟ
  ತೋಳವೆಂದು ಒಪ್ಪಿಕೊಳ್ಳುತ್ತೀರಾ
---------------------
  ಮಾಜಿ ಸಿಎಂ ಯಡಿಯೂರಪ್ಪ ಜೈಲಿಗೆ ಹೋಗಿದ್ದಕ್ಕೆ ನಾನು ಖುಷಿ ಪಟ್ಟಿಲ್ಲ
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ಬದಲು ತನ್ನ ಸರದಿ ಯಾವಾಗ ಎಂದು ಆತಂಕದಲ್ಲಿದ್ದಿರಂತೆ.
---------------------
  ಎಐಎಡಿಎಂಕೆ ಒಂದು ಆಲದ ಮರದಂತೆ. ಅದನ್ನು ಯಾರೂ ಹೈಜಾಕ್ ಮಾಡಲು ಆಗುವುದಿಲ್ಲ
- ಒ.ಪನ್ನೀರ್ ಸೆಲ್ವಂ, ತ.ನಾ.ಹಂಗಾಮಿ ಮುಖ್ಯಮಂತ್ರಿ
  
ತಾವು ಆಲದ ಮರದಡಿಯಲ್ಲಿ ತಪಸ್ಸಿಗೆ ಕೂತ ಮಾರ್ಜಾಲ ಸನ್ಯಾಸಿಯೆಂಬ ಅನುಮಾನ.

---------------------
  ತಮಿಳು ನಾಡು ರಾಜಕೀಯದಲ್ಲಿ ನಾವು ಮೂಗು ತೂರಿಸೋಲ್ಲ

 - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಬಾಲ ಮಾತ್ರ ತೂರಿಸುವ ಉದ್ದೇಶವಿರಬೇಕು.

---------------------
ಸಮಾಜ ಸಂಘಟಿತವಾಗಿದ್ದಾಗ ಗುರುಪೀಠಕ್ಕೂ, ಸಮಾಜಕ್ಕೂ ಶಕ್ತಿ ಬರುತ್ತದೆ

-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

  ಮಹಿಳೆಯರೂ ಸಂಘಟಿತರಾಗಬೇಕಾದ ಅನಿವಾರ್ಯತೆ ಬಂದಿದೆ
  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X