Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹಿಳೆಯರ ಮಾನ ಅಳೆಯಲು ಹೊರಟ ಪತಂಜಲಿ...

ಮಹಿಳೆಯರ ಮಾನ ಅಳೆಯಲು ಹೊರಟ ಪತಂಜಲಿ ಜಾಹೀರಾತು: ಆಕ್ರೋಶ

ವಾರ್ತಾಭಾರತಿವಾರ್ತಾಭಾರತಿ13 Feb 2017 3:21 PM IST
share
ಮಹಿಳೆಯರ ಮಾನ ಅಳೆಯಲು ಹೊರಟ ಪತಂಜಲಿ ಜಾಹೀರಾತು: ಆಕ್ರೋಶ

ಹೊಸದಿಲ್ಲಿ, ಫೆ.13: ಹಲವಾರು ಉತ್ಪನ್ನಗಳನ್ನು ಈಗಾಗಲೇ ಬಿಡುಗಡೆಗೊಳಿಸಿರುವ ಬಾಬಾ ರಾಮದೇವ್ ಅವರ ಪತಂಜಲಿ ಇತ್ತೀಚೆಗೆ ಸೌಂದರ್ಯ ವರ್ಧಕಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಈ ಸೌಂದರ್ಯ ಪ್ರಸಾಧನಗಳು ಜನತೆ ಅಂಗಡಿಗಳಿಂದ ಖರೀದಿಸುವ ಮುನ್ನವೇ ಅವುಗಳಿಗೆ ಸಂಬಂಧಪಟ್ಟ ಜಾಹೀರಾತು ವಿವಾದಕ್ಕೊಳಗಾಗಿದೆ. ಪತಂಜಲಿ ಜಾಹೀರಾತು ಮಹಿಳೆಯರ ಮಾನ ಅಳೆಯಲು ಹೊರಟಿದೆಯೆಂದು ಹಲವರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಪತಂಜಲಿಯ ಇತ್ತೀಚಿಗಿನ ಜಾಹೀರಾತೊಂದು ಮಹಿಳೆಯರನ್ನು ಅವರು ಬಳಸುವ ಸೌಂದರ್ಯವರ್ಧಕಗಳು ಹಾಗೂ ಸುಂದರತೆಯ ಆಧಾರದಲ್ಲಿ ಅಳೆಯುವುದು ಹಲವರಿಗೆ ಹಿಡಿಸಿಲ್ಲ.

ಈ ಜಾಹೀರಾತಿನಲ್ಲಿ ಸೌಂದರ್ಯ ಹಾಗೂ ಐಶ್ವರ್ಯ ಎಂಬ ಇಬ್ಬರು ಸಹೋದರಿಯರನ್ನು ತೋರಿಸಲಾಗಿದೆ. ಸೌಂದರ್ಯಳನ್ನು ಪರಂಪರೆಯನ್ನು ಪಾಲಿಸುವವಳಾಗಿ ತೋರಿಸಲಾಗಿದ್ದರೆ ಐಶ್ವರ್ಯಾ ಬಿಂದಾಸ್ ಪ್ರವೃತ್ತಿಯವಳು. ಸೌಂದರ್ಯ ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸಿ ಅವಳ ತ್ವಚ್ಛೆ ಕಾಂತಿಯುತವಾಗಿದ್ದರೆ, ಐಶ್ವರ್ಯ ರಾಸಾಯನಿಕಗಳಿಂದ ತಯಾರಿಸಲಾದ ಸೌಂದರ್ಯವರ್ಧಕಗಳನ್ನು ಬಳಸಿ ಅವಳ ಮುಖದ ತುಂಬೆಲ್ಲಾ ಮೊಡವೆಗಳಿವೆಯೆಂಬಂತೆ ತೋರಿಸಲಾಗಿದೆಯಲ್ಲದೆ ಅವಳ ತ್ವಚ್ಛೆಯಿಂದಾಗಿ ಅವಳು ಕಾಲೇಜಿನಲ್ಲಿ ಅಪಹಾಸ್ಯಗೊಳಗಾಗುತ್ತಾಳೆ. ಕೊನೆಗೆ ಸೌಂದರ್ಯ ತನ್ನ ಸಹೋದರಿಯ ರಕ್ಷಣೆಗೆ ಬಂದು ಆಕೆ ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸುವಂತೆ ಮಾಡುತ್ತಾಳೆಂದು ಈ ಜಾಹೀರಾತಿನಲ್ಲಿ ತೋರಿಸಲಾಗಿದೆ.

ಇಲ್ಲಿ ಬಿಂದಾಸ್ ಎಂಬ ಪದದ ಜೊತೆಗೆ ಬಿಂದಾಸ್ ಇರುವವರು ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸುತ್ತಿಲ್ಲ ಹಾಗೂ ಅವರ ಮುಖಗಳು ಮೊಡವೆಗಳಿಂದ ತುಂಬಿದೆಯೆಂಬರ್ಥದಲ್ಲಿ ತೋರಿಸಿದ್ದು ಅನೇಕರಿಗೆ ಸಹ್ಯವಾಗಿಲ್ಲ.

ಈಗಾಗಲೇ ಹಲವು ಗೌರವರ್ಣ ಕ್ರೀಮುಗಳ ಜಾಹೀರಾತುಗಳು ಗೌರವರ್ಣವಿಲ್ಲದ ಯುವತಿಯರು ಅಭದ್ರತೆಯ ಭಾವನೆ ಹೊಂದಿರುತ್ತಾರೆ ಹಾಗೂ ಅವರು ಫೇರ್‌ನೆಸ್ ಕ್ರೀಮ್ ಗಳನ್ನು ಉಪಯೋಗಿಸಬೇಕೆಂದು ಹೇಳುವುದು ಚರ್ಚೆ ವಿಚಾರವಾಗಿರುವಾಗಲೇ ಪತಂಜಲಿಯಿಂದ ಇಂತಹ ಒಂದು ಜಾಹೀರಾತು ವಿವಾದಕ್ಕೀಡಾಗಿರುವುದು ಆಶ್ಚರ್ಯವೇನಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X