ಟೋಲ್ ಸಂಗ್ರಹ ವಿರುದ್ದ ಮುಲ್ಕಿಯಲ್ಲಿ ಬೃಹತ್ ಪ್ರತಿಭಟನೆ

ಮುಲ್ಕಿ, ಫೆ.13: ರಾಷ್ತ್ರೀಯ ಹೆದ್ದಾರಿ 66 ಹೆಜಮಾಡಿಯಲ್ಲಿ ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸದೇ ಟೋಲ್ ಸಂಗ್ರಹ ಆರಂಭಿಸಿದ್ದರ ವಿರುದ್ದ ಉಡುಪಿ ಜಿಲ್ಲೆ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪೂರಕವಾಗಿ ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ರಾಷ್ತ್ರೀಯ ಹೆದ್ದಾರಿ ತಡೆ ಮಾಡಿ ಸುಮಾರು 15 ನಿಮಿಷ ಪ್ರತಿಟನೆ ನಡೆಯಿತು.
ಪ್ರತಿಟನಾಕಾರರನ್ನು ಉದ್ದೇಶಿಸಿ ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ, ರಾಷ್ತ್ರೀಯ ಹೆದ್ದಾರಿಯ ಗುತ್ತಿಗೆದಾರರು ದಕ್ಷಿಣಕನ್ನಡ ಜಿಲ್ಲೆಯ ಗಡಿಪ್ರದೇಶವಾದ ಮೂಲ್ಕಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸದೆ ಅಧಂಬರ್ಧ ಕಾಮಗಾರಿ ನಡೆಸಿ ಹೆಜಮಾಡಿಯಲ್ಲಿ ಹೆದ್ದಾರಿಯಲ್ಲಿ ಟೋಲ್ ಗೇಟ್ ಆರಂಭಿಸಿದ್ದಾರೆ.ಮೂಲ್ಕಿ ಪರಿಸರದ 20 ಕಿ.ಮಿ ವರೆಗೆ ಟೋಲ್ ಸಂಗ್ರಹದಲ್ಲಿ ವಾಹನಗಳಿಗೆ ವಿನಾಯಿತಿ ನೀಡಬೇಕು ಹಾಗೂ ಬಾಕಿಯುಳಿದ ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಟನೆ ನಡೆಸುವುದಾಗಿ ಹೇಳಿದರು.ಮೂಲ್ಕಿಯಿಂದ ಕೇವಲ 2 ಕಿ ಮಿ ದೂರದಲ್ಲಿ ಹೆಜಮಾಡಿಯಲ್ಲಿ ಹಾಗೂ 10 ಕಿ ಮಿ ದೂರದಲ್ಲಿ ಸುರತ್ಕಲ್ ನಲ್ಲಿ ಟೋಲ್ ಸಂಗ್ರಹ ಆರಂಗೊಂಡಿದ್ದು ಇದರಿಂದ ಮೂಲ್ಕಿ ಪರಿಸರದವರಿಗೆ ತುಂಬಾ ತೊಂದರೆಯಾಗಿದೆ ಇದರಿಂದ ಮೂಲ್ಕಿ ಪರಿಸರದವರಿಗೆ ಟೋಲ್ ನಲ್ಲಿ ವಿನಾಯಿತಿ ನೀಡಬೇಕು ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಟನೆ ಮಾಡಲಾಗುವುದೆಂದು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಹೇಳಿದರು.ಕಿನ್ನಿಗೋಳಿಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಸಬೆಯನ್ನುದ್ದೇಶಿಸಿ ಮಾತನಾಡಿದರು. ಬೆಳಿಗ್ಗೆ ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಸುಮಾರು 15 ನಿಮಿಷಗಳ ಕಾಲ ಪ್ರತಿಟನಾಕಾರರರು ಹೆದ್ದಾರಿಯಲ್ಲಿ ಕುಳಿತು ವಾಹನ ಸಂಚಾರ ಸ್ತಗಿತಗೊಳಿಸಿ ಪ್ರತಿಟನೆ ಮಾಡಲಾಯಿತು.ಒಂದು ಹಂತದಲ್ಲಿ ಪ್ರತಿಟನಾಕಾರರು ಹೆದ್ದಾರಿಯನ್ನು ಬಿಟ್ಟು ಕದಲಲಲು ನಿರಾಕರಿಸಿದ್ದರಿಂದ ಪೊಲೀಸರು ಬಲವಂತವಾಗಿ ಪ್ರತಿಟನಾಕರರನ್ನು ಸ್ಥಳದಿಂದ ಎಬ್ಬಿಸಿದರು.ಮೂಲ್ಕಿಯ ರಿಕ್ಷಾ,ಕಾರು,ಬಸ್ಸು ಚಾಲಕ ಮಾಲಕರು ಪ್ರತಿಟನಾ ಸಬೆಯಲ್ಲಿ ಬಾಗವಹಿಸಿದ್ದರು.ಮೂಲ್ಕಿಯ ಕಾರು ಚಾಲಕ-ಮಾಲಕರ ಸಂಘದ ಅಧ್ಯಕ್ಷ ಮಧು ಆಚಾರ್ಯ, ಮೂಲ್ಕಿ ನಗರ ಪಂಚಾಯತ್ ಸದಸ್ಯರುಗಳಾದ ಪುತ್ತು ಬಾವು,ಪುರುಷೋತ್ತಮ,ಬಶೀರ್ ಕುಳಾಯಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಅಶೋಕ್ ಪೂಜಾರ ಮತ್ತಿತರಿದ್ದರು.
ಮೂಲ್ಕಿ ಪೋಲಿಸ್ ಠಾಣಾಧಿಕಾರಿ ಅನಂತ ಪದ್ಮನಾ ನೇತ್ರತ್ವದಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ಎರ್ಪಡಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮೀಸಲು ಪೋಲಿಸ್ ಪಡೆಯು ಬೆಳಗ್ಗಿನಿಂದ ಬಂದೋ ಬಸ್ತ್ ಕಾರ್ಯದಲ್ಲಿ ಬಾಗಿಯಾಗಿತ್ತು. ಬಳಿಕ ಪ್ರತಿಟನಾಕಾರರು ಹೆಜಮಾಡಿ ಟೋಲ್ಗೆಟ್ ಬಳಿ ಮನವಿ ಸಲ್ಲಿಸಿದರು.
ಪೆ.25ರವರೆಗೆ ತಾತ್ಕಾಲಿಕ ರಿಯಾಯಿತಿ
ಹೆಜಮಾಡಿ ಟೋಲಿನಿಂದ ಸುಮಾರು 5ಕಿಮೀರವರೆಗಿನ ವಾಹನಗಳಿಗೆ ಪೆ.25ರವರೆಗೆ ರೀಯಾಯಿತಿ ದೊರಕಿದೆ ಎಂದು ಹೋರಾಟಗಾರ ಧನಂಜಯಮಟ್ಟು ಹೇಳಿದ್ದಾರೆ. ಅವರು ಟೋಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮದ್ಯಮದವರಿಗೆ ತಿಳಿಸಿದ್ದಾರೆ.ಪೆ.25ರ ಬಳಿಕ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಟೋಲಿನ ಬಗ್ಗೆ ಸೂಕ್ತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮುಲ್ಕಿಯಲ್ಲಿ ಬಸ್ಸುಗಳು ಬಂದ್
ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಟೋಲಿನ ಪ್ರತಿಟನೆ ಕಾವೇರುತ್ತಿದ್ದಂತೆ ದ.ಕ. ಜಿಲ್ಲೆಯ ಗಡಿಪ್ರದೇಶವಾದ ಮೂಲ್ಕಿಯಲ್ಲೂ ಪ್ರತಿಟನೆ ಹಾಗೂ ಆಂಶಿಕ ಬಂದ್ ನಡೆಯಿತು. ಮಂಗಳೂರು ಉಡುಪಿ ತಡೆರಹಿತ ಬಸ್ಸುಗಳು ಹಾಗೂ ಕಿನ್ನಿಗೋಳಿ,ಕಟೀಲು ಹಳೆಯಂಗಡಿಗೆ ಹೋಗುವ ಬಸ್ಸುಗಳು ಸಂಪೂರ್ಣ ಸಂಚಾರ ನಿಲ್ಲಿಸಿದ್ದವು.ಅಂಗಡಿಮುಗ್ಗಟ್ಟುಗಳು ತೆರೆದಿದ್ದವು. ಬ್ಯಾಂಕುಗಳಲ್ಲಿ ವ್ಯವಹಾರ ಕಡಿಮೆಯಾಗಿತ್ತು.







