ಸಿನೆಮಾ ನಟ ಬಾಬುರಾಜ್ಗೆ ಇರಿತ

ಅಡಿಮಾಲಿ, ಫೆ.14: ನಟ ಬಾಬುರಾಜ್ರ ಎದೆಗೆ ಇರಿಯಲಾಗಿದೆ. ಕಲ್ಲಾರ್ ಕಂಬಿಲೈನ್ನ ಬಾಬುರಾಜ್ ಮಾಲಕತ್ವದ ರಿಸಾರ್ಟ್ನಲ್ಲಿ ಘಟನೆ ನಡೆದಿದೆ. ಕೊಳದ ನೀರನ್ನು ಬತ್ತಿಸುವುದಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳಾದ ಕೆಲವರೊಂದಿಗೆ ನಡೆದ ವಾಗ್ವಾದದ ವೇಳೆ ಒಬ್ಬ ವ್ಯಕ್ತಿ ಕುಡುಗೊಲಿನಿಂದ ಬಾಬುರಾಜ್ರನ್ನು ಇರಿದಿದ್ದಾನೆ.
ಸಮೀಪದ ನಿವಾಸಿಗಳು ಈ ಕೊಳದಿಂದಲೇ ಬೇಸಗೆಯಲ್ಲಿ ನೀರು ಉಪಯೋಗಿಸುತ್ತಿದ್ದರು. ಆದರೆ ಈ ಕೊಳವನ್ನು ಬತ್ತಿಸಲು ಬಾಬು ರಾಜ್ ತೀರ್ಮಾನಿಸಿದ್ದರು. ಇದನ್ನು ವಿರೋಧಿಸಿ ಸಮೀಪದ ನಿವಾಸಿಗಳು ಒಗ್ಗೂಡಿದ್ದರು. ಇರಿತದಿಂದ ಬಾಬುರಾಜ್ರ ಎದೆಯ ಎಡಭಾಗಕ್ಕೆ ಗಾಯವಾಗಿದೆ. ಅಡಿಮಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕೊಚ್ಚಿಯ ರಾಜಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ.
Next Story





