ಫೆ.19: ಶ್ರೀರಕ್ಷಾ ಸುದರ್ಶನ ಹೋಮ
ಮಂಗಳೂರು, ಫೆ.15: ಪ್ರಧಾನಿ ನರೇಂದ್ರ ಮೋದಿ ಆಯುಷ್ಯ, ಆಯುರಾರೋಗ್ಯಕ್ಕಾಗಿ ಪಂಪ್ವೆಲ್ ಫ್ರೆಂಡ್ಸ್ ಸಂಘಟನೆಯ ಕಾರ್ಯಕರ್ತರು ಹಾಗೂ ರಾಮಚಂದ್ರ ಸುವರ್ಣ, ರಾಜೇಶ್ ಪಂಪ್ವೆಲ್ ಇವರ ಮುಂದಾಳತ್ವದಲ್ಲಿ ಫೆ.19ರಂದು ರಾತ್ರಿ 7 ಗಂಟೆಗೆ ‘ಶ್ರೀರಕ್ಷಾ ಸುದರ್ಶನ’ ಹೋಮವನ್ನು ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಧಾನಿ ಮೋದಿಗಾಗಿ ಅನೇಕ ಯಾಗ, ಯಜ್ಞ, ಹೋಮ, ಹವನ, ಪೂಜೆ, ಹರಕೆಗಳನ್ನು ದೇವರಿಗೆ ಅರ್ಪಿಸಿ ಅವರ ಪ್ರಾಣ ರಕ್ಷಣೆಗಾಗಿ ದೇವರ ಮೊರೆ ಹೋಗಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜೇಶ್ ಪಂಪ್ವೆಲ್, ಸಂದೀಪ್ ಶೆಟ್ಟಿ, ರಾಮಚಂದ್ರ ಸುವರ್ಣ, ಅಶೋಕ್ ಸುಬ್ಬಯ್ಯ ಉಪಸ್ಥಿತರಿದ್ದರು.
Next Story