ವಿ.ಎನ್. ಸುಧಾಕರನ್ ನ್ಯಾಯಾಲಯಕ್ಕೆ ಶರಣು

ಹೊಸದಿಲ್ಲಿ, ಫೆ.15: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ನಿಂದ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರ ಸಂಬಂಧಿ ವಿ.ಎನ್. ಸುಧಾಕರನ್ ಇಂದು ಸಂಜೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಶರಣಾದರು.
ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಅಶ್ವತ್ಥ್ ನಾರಾಯಣ್ ಅವರ ಮುಂದೆ ಹಾಜರಾದರು.
ಇದಕ್ಕೂ ಮೊದಲು ವಿ.ಕೆ.ಶಶಿಕಲಾ ಮತ್ತು ಜೆ. ಇಳವರಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶಶಿಕಲಾ ಮತ್ತು ಇಳವರಸಿ ನ್ಯಾಯಾಯಕ್ಕೆ ಹಾಜರಾಗಿ ಜೈಲು ಸೇರಿದ ಬಳಿಕ ಸುಧಾಕರನ್ ನ್ಯಾಯಾಲಯಕ್ಕೆ ಹಾಜರಾದರು.
Next Story





