ಭಾರತ ರೋಗ ಮುಕ್ತ ದೇಶವಾಗಲಿ: ಅದಮಾರು ಶ್ರೀ
ಉಡುಪಿ, ಫೆ.15: ಎಲ್ಲ ರೋಗಗಳಿಗೂ ಮೂಲ ಕಾರಣ ಆಹಾರ. ಅದನ್ನು ಸರಿಯಾಗಿ, ಹಿತಮಿತವಾಗಿ ಸೇವಿಸಬೇಕು. ಆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಭಾರತವನ್ನು ದೈಹಿಕ ಮಾತ್ರವಲ್ಲದೆ ಮಾನಸಿಕ ರೋಗ ಮುಕ್ತವನ್ನಾಗಿಸಬೇಕು ಎಂದು ಅದಮಾರು ಮಠಾೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ಯೆನಪೊಯ ವಿವಿ, ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಮತ್ತು ಪೂರ್ಣಪ್ರಜ್ಞ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಉಡುಪಿ ತಲ್ಲೂರು ್ಯಾಮಿಲಿ ಟ್ರಸ್ಟ್ನ ಸಹಯೋ ಗದೊಂದಿಗೆ ಬುಧವಾರ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಹಮ್ಮಿಕೊಳ್ಳಲಾದ ಕ್ಯಾನ್ಸರ್ ರೋಗ ಅರಿವು ಕಾರ್ಯ ಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಯೆನಪೋಯ ಆಸ್ಪತ್ರೆಯ ಡಾ.ಗುರುರಾಜ್ ಭಟ್ ಸಮಾರೋಪ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ ವಹಿಸಿದ್ದರು. ಮಂಗಳೂರು ವಿವಿಯ ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜನಾಕಾರಿ ಪ್ರೊ.ವಿನೀತಾ ಕೆ., ಡಾ.ಗಣೇಶ್ ಶೆಣೈ, ಸಂಧ್ಯಾ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ಪಿಪಿಸಿ ಆಡಳಿತ ಮಂಡಳಿ ಗೌರವ ಕಾರ್ಯ ದರ್ಶಿ ಡಾ.ಚಂದ್ರಶೇಖರ್, ತಲ್ಲೂರು ್ಯಾಮಿಲಿ ಟ್ರಸ್ಟ್ನ ತಲ್ಲೂರು ಶಿವರಾಮ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ಯೆನಪೋಯ ಆಸ್ಪತ್ರೆ ವೈದ್ಯರಾದ ಡಾ.ಇಮ್ರಾನ್ ಪಾಷ, ಡಾ.ರೇಷ್ಮಾ, ಎನ್ನೆಸ್ಸೆಸ್ ಅಕಾರಿ ಅಶ್ವಿನಿ, ಪಿಪಿಸಿಯ ಎನ್ನೆಸ್ಸೆಸ್ ಯೋಜನಾಕಾರಿ ಬಾಲರಾಜ್ಡಿ.ಬಿ. ಉಪಸ್ಥಿತರಿದ್ದರು.
ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಯೋಜನಾಕಾರಿ ರಮಾನಂದ ರಾವ್ ಸ್ವಾಗತಿಸಿದರು. ಯೋಜನಾಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.







