Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಯುಎಇ: ವೀಸಾ ವೆಚ್ಚವನ್ನು ಉದ್ಯೋಗಿಯೇ...

ಯುಎಇ: ವೀಸಾ ವೆಚ್ಚವನ್ನು ಉದ್ಯೋಗಿಯೇ ಭರಿಸಬೇಕೆ? ಇಲ್ಲಿದೆ ಉತ್ತರ

ವಾರ್ತಾಭಾರತಿವಾರ್ತಾಭಾರತಿ22 Feb 2017 12:09 PM IST
share
ಯುಎಇ: ವೀಸಾ ವೆಚ್ಚವನ್ನು ಉದ್ಯೋಗಿಯೇ ಭರಿಸಬೇಕೆ? ಇಲ್ಲಿದೆ ಉತ್ತರ

ಯುಎಇ, ಫೆ.22: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಉದ್ಯೋಗ ಪಡೆಯುವ ವಲಸಿಗರು ಅಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ ಬಳಿಕ ತಮ್ಮ ಉದ್ಯೋಗ ವೀಸಾವನ್ನು ರದ್ದುಪಡಿಸಲು ಬಯಸಿದರೆ ವೀಸಾ ವೆಚ್ಚವನ್ನು ಉದ್ಯೋಗಿಯೇ ತನ್ನ ಉದ್ಯೋಗದಾತನಿಗೆ ನೀಡಬೇಕೇ ಎಂಬ ವಿಚಾರದಲ್ಲಿ ಹಲವರಲ್ಲಿ ಗೊಂದಲವಿದೆ. ಈ ಗೊಂದಲ ಪರಿಹಾರಕ್ಕೆ ಇಲ್ಲಿದೆ ಉತ್ತರ.

ತನ್ನ ಉದ್ಯೋಗ ಗುತ್ತಿಗೆಯನ್ನು ಮುಂದುವರಿಸದೇ ಇರಲು ಒಬ್ಬ ಉದ್ಯೋಗಿ ನಿರ್ಧರಿಸಿದ್ದೇ ಆದಲ್ಲಿ ಆತನ ಉದ್ಯೋಗದಾತ ತಾನು ವೀಸಾ ವೆಚ್ಚಕ್ಕಾಗಿ ಉಪಯೋಗಿಸಿದ ಹಣವನ್ನು ಉದ್ಯೋಗಿಯಿಂದ ಪಡೆಯುವ ಹಾಗಿಲ್ಲ.
ವೀಸಾ ವೆಚ್ಚದ ಕುರಿತಾಗಿ ಉದ್ಯೋಗಿ ತನ್ನ ಮಾಲಕನಿಗೆ ಹಣ ನೀಡಬೇಕೆಂದು ಈ ದೇಶದ ಯಾವುದೇ ಕಾನೂನು ಕೂಡ ಹೇಳುತ್ತಿಲ್ಲ. ಹಾಗೇನಾದರೂ ಉದ್ಯೋಗದಾತರು ಬೇಡಿಕೆಯಿಟ್ಟಲ್ಲಿ ಅದು ಫೆಡರಲ್ ಕಾನೂನು ಸಂಖ್ಯೆ 8, 1980 ಇದರ ಅನುಚ್ಚೇಧ 60 ಇದರ ಉಲ್ಲಂಘನೆಯಾಗುತ್ತದೆ.

ಉದ್ಯೋಗಿಯೊಬ್ಬನ ವೇತನದಿಂದ ಯಾವುದೇ ಖಾಸಗಿ ಕ್ಲೇಮ್ ಗಾಗಿ ಹಣವನ್ನು ಈ ಕೆಳಗಿನ ಕಾರಣಗಳ ಹೊರತಾಗಿ ಬೇರೆ ಉದ್ದೇಶಗಳಿಗೆ ಬಳಸುವ ಹಾಗಿಲ್ಲ.

1. ವೇತನಕ್ಕಿಂತ ಹೆಚ್ಚುವರಿಯಾಗಿ ಯಾವುದೇ ಹಣ ಪಾವತಿ ಮಾಡಿದ್ದೇ ಆದಲ್ಲಿ ಹಾಗೂ ಆತನಿಗೆ ನೀಡಿದ ಸಾಲ ಮರುಪಾವತಿ ಉದ್ದೇಶಕ್ಕಾಗಿ ಆತನ ವೇತನದ ಶೇ.10ಕ್ಕಿಂತ ಅಧಿಕವಾಗದಂತೆ ಕಡಿತ ಮಾಡಬಹುದಾಗಿದೆ.

2.ಸಾಮಾಜಿಕ ಭದ್ರತೆ ಮತ್ತು ವಿಮಾ ಯೋಜನೆಗಳಿಗಾಗಿ ಕಾರ್ಮಿಕರ ವೇತನದಿಂದ ಕಡಿತಗೊಳಿಸಬಹುದಾಗಿದೆ.

3. ಪ್ರಾವಿಡಂಟ್ ಫಂಡ್ ಅಥವಾ ಸಾಲ ಮರುಪಾವತಿಗಾಗಿ ವೇತನದಿಂದ ಕಡಿತ ಮಾಡಬಹುದಾಗಿದೆ.

4. ಕಲ್ಯಾಣ ಯೋಜನೆಗಾಗಿ ದೇಣಿಗೆ ಮತ್ತು ಕಾರ್ಮಿಕ ಇಲಾಖೆಯಿಂದ ಅನುಮೋದಿತ ಯಾವುದೇ ಸೌಲಭ್ಯವನ್ನು ಮಾಲಕ ನೀಡುವುದಿದ್ದರೆ ಅದನ್ನು ವೇತನದಿಂದ ಕಡಿತ ಮಾಡಬಹುದಾಗಿದೆ.

5. ಉದ್ಯೋಗ ಸ್ಥಳದಲ್ಲಿ ಉದ್ಯೋಗಿ ಯಾವುದೇ ತಪ್ಪು ಮಾಡಿದ್ದಲ್ಲಿ ದಂಡ ಮೊತ್ತ.

6. ನ್ಯಾಯಾಲಯದ ಆದೇಶದಂತೆ ಉದ್ಯೋಗಿ ಪಡೆದಿರುವ ಯಾವುದೇ ಸಾಲ ಮರುಪಾವತಿಗಾಗಿ. ಆದರೆ ಇಲ್ಲಿ ವೇತನದ ನಾಲ್ಕನೆ ಒಂದಂಶಕ್ಕಿಂತ ಹೆಚ್ಚಿನ ಕಡಿತ ಮಾಡುವಂತಿಲ್ಲ. ಒಂದು ವೇಳೆ ಆತ ಹಲವಾರು ಸಾಲ ಪಡೆದಿದ್ದೇ ಆಗಿದ್ದಲ್ಲಿ ಹೆಚ್ಚೆಂದರೆ ಉದ್ಯೋಗಿಯ ಅರ್ಧ ವೇತನವನ್ನು ಕಡಿತಗೊಳಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X