ಫೆ.26-ಮಾ.4: ಇರ್ದೆ ಪಳ್ಳಿತ್ತಡ್ಕ ದರ್ಗಾ ಉರೂಸ್ ಕಾರ್ಯಕ್ರಮ

ಪುತ್ತೂರು, ಫೆ.22: ತಾಲೂಕಿನ ಇರ್ದೆ ಪಳ್ಳಿತ್ತಡ್ಕ ದರ್ಗಾ ವಲಿಯುಲ್ಲಾಹಿ ಅವರ 41ನೆ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಫೆ.26ರಿಂದ ಮಾರ್ಚ್ 4ರ ತನಕ ಜರಗಲಿದೆ ಎಂದು ಕೊರಿಂಗಿಲ ಜಮಾಅತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಮತ್ತು ಉರೂಸ್ ಕಮಿಟಿಯ ಅಧ್ಯಕ್ಷ ಕೆ.ಎಂ. ಹಮೀದ್ ಕೊಮ್ಮೆಮ್ಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಫೆ.26ರಂದು ಮಸೀದಿಯ ಇಮಾಮ್ ಅಲ್ಹಾಜ್ ಜಿ.ಎಚ್. ಅಯ್ಯೂಬ್ ವಅಬಿ ಗಡಿಯಾರ ಉದ್ಘಾಟಿಸಲಿದ್ದಾರೆ. ಅಸ್ಸೈಯದ್ ಹಾಸಿಂ ಬಾಅಲವಿ ತಂಙಳ್ ದುಆ ನೆರವೇರಿಸಲಿದ್ದಾರೆ.
ಪೊಯ್ಯತ್ತಬೈಲ್ ಮುದರ್ರಿಸ್ ಅಬ್ದುಲ್ ಜಬ್ಬಾರ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.27ರಂದು ಅಬೂಬಕರ್ ಫೈಝಿ ಕೊಟ್ಟಂಬಾಡಿ ಕೊಡಗು, ಫೆ.28ರಂದು ಅಬೂಬಕರ್ ಸಿದ್ದೀಕ್ ಜಲಾಲಿ, ಮಾ.1ರಂದು ಹಾಮಿದ್ ಯಾಸೀನ್ ಜೌಹರಿ ಕಾದಿಸಿಯ್ಯಾ ಕೊಲ್ಲಂ, ಮಾ.2ರಂದು ಅನ್ವರ್ ಅಲಿ ಉದವಿ ಕೊಂಡೋಟಿ ಮಲಪ್ಪುರಂ ಮುಖ್ಯ ಪ್ರವಚನ ಮಾಡಲಿದ್ದಾರೆ.
ಮಾ.3ರಂದು ಅಸ್ಸೈಯದ್ ಅಹ್ಮದ್ ಪೂಕೋಯ ತಂಙಳ್ ದುಆ ಮಾಡಲಿದ್ದಾರೆ. ಶಾಫಿ ಸಖಾಫಿ ಮುಂಡಬ್ರ, ಮಲಪ್ಪುರಂ ಮುಖ್ಯ ಭಾಷಣ ಮಾಡಿದ್ದಾರೆ.
ಮಾ.4ರಂದು ಸಮಾರೋಪ ಸಮಾರಂಭ, ಸೌಹಾರ್ದ ಸಂಗಮ, ಉರೂಸ್ ಮುಬಾರಕ್
ಫೆ.4ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ ಅಲ್ಹಾಜ್ ಅಯ್ಯೂಬ್ ವಬಿ ಕೊರಿಂಗಿಲ ನೇತೃತ್ವದಲ್ಲಿ ‘ವೌಲೀದ್ ಪಾರಾಯಣ’ ನಡೆಯಲಿದೆ. ರಾತ್ರಿ ನಡೆಯಲಿರುವ ‘ಸೌಹಾರ್ದ ಸಂಗಮ’ ಕಾರ್ಯಕ್ರಮವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ.
ಜಮಾಅತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ.
ಶಾಸಕಿ ಶಕುಂತಳಾ ಶೆಟ್ಟಿ, ಗಣೇಶ್ ರೈ ಅನಾಜೆ, ಸಂಪ್ಯ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್, ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಜಿಪಂ ಸದಸ್ಯ ಎಂ.ಎಸ್ಮುಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲಲ್ ರಹೀಂ, ಇರ್ದೆ ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ, ನಿಡ್ಪಳ್ಳಿ ಹೋಲಿ ರೋಝರಿ ಚರ್ಚ್ನ ಧರ್ಮಗುರು ಫಾ.ಜೋನ್ ಡಿಸೋಜ, ಕರಾವೇ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ಕುಕ್ಕುವಳ್ಳಿ ಮತ್ತಿತರರು ಅತಿಥಿಯಾಗಿ ಬಾಗವಹಿಸಲಿದ್ದಾರೆ.
ಬಳಿಕ ನಡೆಯಲಿರುವ ಉರೂಸ್ ಸಮಾರಂಭವನ್ನು ಕೊರಿಂಗಿಲ ಮಸೀದಿ ಇಮಾಮ್ ಅಲ್ಹಾಜ್ ಜಿ.ಎಚ್.ಅಯ್ಯೂಬ್ ವಅಬಿ ಉದ್ಘಾಟಿಸಲಿದ್ದಾರೆ. ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಫಿಳ್ ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರಂ ಕೇರಳ ಮುಖ್ಯ ಭಾಷಣ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೊರಿಂಗಿಲ ಜಮಾಅತ್ ಕಮಿಟಿಯ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಸದಸ್ಯ ಟಿ.ಎ.ರಹಿಮಾನ್, ಉರೂಸ್ ಕಮಿಟಿಯ ಕಾರ್ಯದರ್ಶಿ ಖಾಸಿಂ ಕೇನಾಜೆ ಉಪಸ್ಥಿತರಿದ್ದರು.







