ಫೆ.26ರಿಂದ ಇರ್ದೆ ಪಳ್ಳಿತ್ತಡ್ಕ ಉರೂಸ್
ಪುತ್ತೂರು, ಫೆ.22: ತಾಲೂಕಿನ ಇರ್ದೆ ಪಳ್ಳಿತ್ತಡ್ಕ ದರ್ಗಾ ವಲಿಯುಲ್ಲಾಹಿ ಅವರ 41ನೆ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು ಫೆ.26ರಿಂದ ಮಾರ್ಚ್ 4ರವರೆಗೆ ಜರಗಲಿದೆ ಎಂದು ಕೊರಿಂಗಿಲ ಜಮಾಅತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಮತ್ತು ಉರೂಸ್ ಕಮಿಟಿಯ ಅಧ್ಯಕ್ಷ ಕೆ.ಎಂ.ಹಮೀದ್ ಕೊಮ್ಮೆಮ್ಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಫೆ.26ರಂದು ಮಸೀದಿಯ ಇಮಾಮ್ ಅಲ್ಹಾಜ್ ಜಿ.ಎಚ್. ಅಯ್ಯೂಬ್ ವಅಬಿ ಗಡಿಯಾರ ಉದ್ಘಾಟಿಸಲಿದ್ದಾರೆ. ಅಸ್ಸೈಯದ್ ಹಾಶಿಂ ಬಾಅಲವಿ ತಂಙಳ್ ದುಆ ನೆರವೇರಿಸಲಿದ್ದಾರೆ. ಪೊಯ್ಯತ್ತಬೈಲ್ ಮುದರ್ರಿಸ್ ಅಬ್ದುಲ್ ಜಬ್ಬಾರ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.27ರಂದು ಅಬೂಬಕರ್ ಫೈಝಿ ಕೊಟ್ಟಂಬಾಡಿ ಕೊಡಗು, ಫೆ.28ರಂದು ಅಬೂಬಕರ್ ಸಿದ್ದೀಕ್ ಜಲಾಲಿ, ಮಾ.1ರಂದು ಹಮೀದ್ ಯಾಸೀನ್ ಜೌಹರಿ ಕಾದಿಸಿಯ್ಯಾ ಕೊಲ್ಲಂ, ಮಾ.2ರಂದು ಅನ್ವರ್ ಅಲಿ ಹುದವಿ ಕೊಂಡೋಟಿ ಮಲಪ್ಪುರಂ ಮುಖ್ಯ ಪ್ರವಚನ ನೀಡಲಿದ್ದಾರೆ. ಮಾ.3ರಂದು ಅಸ್ಸೈಯದ್ ಅಹ್ಮದ್ ಪೂಕೋಯ ತಂಙಳ್ ದುಆ ಮಾಡಲಿದ್ದಾರೆ. ಶಾಫಿ ಸಖಾಫಿ ಮುಂಡಬ್ರ, ಮಲಪ್ಪುರಂ ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.4ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ ಅಲ್ಹಾಜ್ ಅಯ್ಯೂಬ್ ವಅಬಿ ಕೊರಿಂಗಿಲ ನೇತೃತ್ವದಲ್ಲಿ ‘ವೌಲೀದ್ ಪಾರಾಯಣ’ ನಡೆಯಲಿದೆ. ರಾತ್ರಿ ನಡೆಯಲಿರುವ ‘ಸೌಹಾರ್ದ ಸಂಗಮ’ ಕಾರ್ಯಕ್ರಮವನ್ನು ಆಹಾರ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಜಮಾಅತ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಾಫರ್ ಸಾದಿಕ್ ಫೈಝಿ ಕನ್ನಡದಲ್ಲಿ ಭಾಷಣ ಮಾಡಲಿದ್ದಾರೆ. ಬಳಿಕ ನಡೆಯಲಿರುವ ಉರೂಸ್ ಸಮಾರಂಭವನ್ನು ಕೊರಿಂಗಿಲ ಮಸೀದಿ ಇಮಾಂ ಅಲ್ಹಾಜ್ ಜಿ.ಎಚ್.ಅಯ್ಯೂಬ್ ವಅಬಿ ಉದ್ಘಾಟಿಸಲಿದ್ದಾರೆ. ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಫಿಳ್ ಇ.ಪಿ.ಅಬೂಬಕರ್ ಅಲ್ ಖಾಸಿಮಿ ಪತ್ತನಾಪುರಂ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊರಿಂಗಿಲ ಜಮಾಅತ್ ಕಮಿಟಿಯ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಸದಸ್ಯ ಟಿ.ಎ.ರಹ್ಮಾನ್, ಉರೂಸ್ ಕಮಿಟಿಯ ಕಾರ್ಯದರ್ಶಿ ಖಾಸಿಂ ಕೇನಾಜೆ ಉಪಸ್ಥಿತರಿದ್ದರು.





