ಜ್ಯುವೆಲ್ಲರಿ ಶಾಪ್ನಿಂದ ಚಿನ್ನ ಕಳವು
ಉಪ್ಪಿನಂಗಡಿ, ೆ.22: ತಾಯಿತ ಖರೀದಿಗೆಂದು ಬಂದ ಯುವಕರಿಬ್ಬರು ಜ್ಯುವೆಲ್ಲರಿ ಶಾಪ್ ನಿಂದ ಚಿನ್ನ ದೋಚಿ ಪರಾರಿಯಾದ ಘಟನೆ ಉಪ್ಪಿನಂಗಡಿ ಯಲ್ಲಿ ಬುಧವಾರ ಸಂಜೆ ನಡೆದಿದೆ.
ಉಪ್ಪಿನಂಗಡಿಯ ಬ್ಯಾಂಕ್ ರಸ್ತೆಯಲ್ಲಿರುವ ಮಾಧವ ಆಚಾರ್ಯರ ಮಧುಶ್ರೀ ಜ್ಯುವೆಲ್ಲರಿಗೆ ಬುಧವಾರ ಸಂಜೆ ತಾಯಿತ ಖರೀದಿಯ ನೆಪದಲ್ಲಿ ಬಂದ ಯುವಕರಿಬ್ಬರು ತಾಯಿತ ಖರೀದಿಸಿ ಅಂಗಡಿಯಲ್ಲಿದ್ದ ಪ್ರಶಾಂತ್ ಆಚಾ ರ್ಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಮಾಡಲೆಂದು ತಂದಿರಿಸಿದ್ದ 12 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ.
ತಾಯಿತ ಖರೀದಿದಾರರ ನಡೆಯಲ್ಲಿದ್ದ ಅಸಹಜತೆಯನ್ನು ಗಮನಿಸಿದ ಪ್ರಶಾಂತ್ ಆಚಾರ್ಯ ಬಳಿಕ ಡ್ರಾವರ್ನಲ್ಲಿದ್ದ ಚಿನ್ನವನ್ನು ಪರಿಶೀಲಿಸಿದಾಗ, 12 ಗ್ರಾಂ ಚಿನ್ನ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story