Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪಕ್ಕದಲ್ಲೇ ನೂತನ ಸೌರವ್ಯೂಹ ; ಭೂಮಿ...

ಪಕ್ಕದಲ್ಲೇ ನೂತನ ಸೌರವ್ಯೂಹ ; ಭೂಮಿ ಗಾತ್ರದ 7 ಗ್ರಹಗಳು

ಜೀವಿಗಳ ಅಸ್ತಿತ್ವದ ಭರವಸೆ

ವಾರ್ತಾಭಾರತಿವಾರ್ತಾಭಾರತಿ23 Feb 2017 9:05 PM IST
share
ಪಕ್ಕದಲ್ಲೇ ನೂತನ ಸೌರವ್ಯೂಹ ; ಭೂಮಿ ಗಾತ್ರದ 7 ಗ್ರಹಗಳು

ಕೇಪ್ ಕ್ಯಾನವರಲ್ (ಅಮೆರಿಕ), ಫೆ. 23: ನಮ್ಮ ಸೌರಮಂಡಲದ ಪಕ್ಕದಲ್ಲೇ ಇರುವ ಇನ್ನೊಂದು ಸೌರಮಂಡಲವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆಹಚ್ಚಿದ್ದು, ಅದರಲ್ಲಿ ಭೂಮಿ ಗಾತ್ರದ ಏಳು ಗ್ರಹಗಳಿವೆ. ಅತ್ಯಂತ ಗಮನಾರ್ಹ ವಿಷಯವೆಂದರೆ, ಈ ಏಳು ಗ್ರಹಗಳ ಪೈಕಿ ಮೂರು ಗ್ರಹಗಳು ಮೇಲ್ಮೈಯಲ್ಲಿ ನೀರಿನ ಅಸ್ತಿತ್ವಕ್ಕೆ ಪೂರಕವಾದ ಅಂತರದಲ್ಲಿ ತಮ್ಮ ಸೂರ್ಯನ ಸುತ್ತ ತಿರುಗುತ್ತಿವೆ ಎಂದು ಬುಧವಾರ ಪ್ರಕಟಗೊಂಡ ಸಂಶೋಧನೆಯೊಂದು ತಿಳಿಸಿದೆ

ಹಾಗಾಗಿ, ಈ ಗ್ರಹಗಳಲ್ಲಿ ಜೀವದ ಅಸ್ತಿತ್ವ ಇರುವ ಸಾಧ್ಯತೆಯಿದೆ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಈ ಗ್ರಹಗಳು ‘ಟ್ರಾಪಿಸ್ಟ್-1’ ಎಂಬ ಹೆಸರಿನ ಸಣ್ಣ ಹಾಗೂ ಮಂದ ನಕ್ಷತ್ರದ ಸುತ್ತ ತಿರುಗುತ್ತಿವೆ. ಅಕ್ವೇರಿಯಸ್ ಎಂಬ ಆಕಾಶಗಂಗೆಯಲ್ಲಿ ಇರುವ ಈ ನಕ್ಷತ್ರ ಭೂಮಿಯಿಂದ ಸುಮಾರು 40 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ.

ಈ ಸೌರಮಂಡಲವು ಸಮೀಪದಲ್ಲಿರುವುದು ಹಾಗೂ ಸಣ್ಣ ಮಾತೃ ನಕ್ಷತ್ರಕ್ಕೆ ಹೋಲಿಸಿದರೆ ಅದರ ಗ್ರಹಗಳ ಗಾತ್ರ ದೊಡ್ಡದಾಗಿರುವುದು ಖಗೋಳ ವಿಜ್ಞಾನಿಗಳ ಅಧ್ಯಯನಕ್ಕೆ ಹೇಳಿ ಮಾಡಿಸಿದ ವಿಷಯವಾಗಿದೆ. ಜೀವಿಗಳ ಸಂಭಾವ್ಯ ರಾಸಾಯನಿಕ ಬೆರಳಚ್ಚುಗಳಿಗಾಗಿ ಈ ಗ್ರಹಗಳ ವಾತಾವರಣವನ್ನು ಜಾಲಾಡುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ.

‘‘ಹೊರ ಜಗತ್ತಿನಲ್ಲಿ ಜೀವವಿದೆಯೇ ಎಂಬ ಸಂಶೋಧನೆಯಲ್ಲಿ ನಾವು ಇನ್ನೊಂದು ಹೆಜ್ಜೆಯನ್ನು ಇಟ್ಟಿದ್ದೇವೆ ಎಂದು ನನಗನಿಸುತ್ತದೆ’’ ಎಂದು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಖಗೋಳ ವಿಜ್ಞಾನಿ ಅಮಾರಿ ಟ್ರಿಯಾವುಡ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಸಂಶೋಧನೆ ಈ ವಾರದ ‘ನೇಚರ್’ ಪತ್ರಿಕೆಯ ಸಂಚಿಕೆಯಲ್ಲಿ ಪ್ರಕಟವಾಗಿದೆ. ‘ಟ್ರಾಪಿಸ್ಟ್-1’ ನಕ್ಷತ್ರದ ಸುತ್ತ ಮೂರು ಗ್ರಹಗಳು ಸುತ್ತುತ್ತಿವೆ ಎನ್ನುವುದನ್ನು ತೋರಿಸುವ ಹಿಂದಿನ ಸಂಶೋಧನೆಯ ಮುಂದುವರಿದ ಭಾಗ ನೂತನ ಸಂಶೋಧನೆಯಾಗಿದೆ.

ಈವರೆಗೆ ಸೌರವ್ಯೆಹದ ಹೊರಗೆ 3,500ಕ್ಕೂ ಹೆಚ್ಚಿನ ಗ್ರಹಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಸಂಶೋಧಕರು ಭೂಮಿಯ ಗಾತ್ರದ ಕಲ್ಲುಮಣ್ಣುಗಳಿಂದ ಕೂಡಿದ ಹಾಗೂ ಸೂಕ್ತ ಉಷ್ಣತೆ ಹೊಂದಿದ ಗ್ರಹಗಳಿಗಾಗಿ ಹುಡುಕಾಡುತ್ತಿದ್ದಾರೆ. ಯಾಕೆಂದರೆ, ಇಂತಹ ಗ್ರಹಗಳಲ್ಲಿ ನೀರಿದ್ದರೆ ಅದು ದ್ರವ ರೂಪದಲ್ಲಿರುತ್ತದೆ. ಇದು ಜೀವಿಗಳ ಅಸ್ತಿತ್ವಕ್ಕೆ ಅಗತ್ಯವಾದ ಪರಿಸ್ಥಿತಿ ಎಂದು ಭಾವಿಸಲಾಗಿದೆ.

ನಕ್ಷತ್ರದ ಅತಿ ಸಮೀಪದಲ್ಲಿ ವಾಸಯೋಗ್ಯ ವಲಯ

ಟ್ರಾಪಿಸ್ಟ್-1 ನಕ್ಷತ್ರದ ವ್ಯಾಸ ನಮ್ಮ ಸೂರ್ಯನ ವ್ಯಾಸದ ಕೇವಲ 8 ಶೇಕಡದಷ್ಟಿದೆ. ಹಾಗಾಗಿ, ಭೂಮಿ ಗಾತ್ರದ ಗ್ರಹಗಳು ಅದರ ಸುತ್ತ ತಿರುಗುವಾಗ ದೊಡ್ಡದಾಗಿ ಕಾಣುತ್ತವೆ.

ಟ್ರಾಪಿಸ್ಟ್-1 ನಕ್ಷತ್ರವು ತೀರಾ ಸಣ್ಣ ಹಾಗೂ ತಂಪು ಆಗಿರುವುದರಿಂದ ಅದರ ‘ವಾಸಯೋಗ್ಯ ವಲಯ’ವು ನಕ್ಷತ್ರದ ಅತಿ ಸಮೀಪದಲ್ಲಿದೆ.

ದ್ರವ ರೂಪದ ನೀರಿನ ಅಸ್ತಿತ್ವ ಸಾಧ್ಯವಿರುವ ಸ್ಥಳಗಳಲ್ಲೇ ಮೂರು ಗ್ರಹಗಳಿವೆ ಎಂದು ಮುಖ್ಯ ಸಂಶೋಧಕ ಮೈಕಲ್ ಗಿಲನ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X