Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬ್ರಿಟಿಷರ ಜೊತೆ ಹೊಂದಾಣಿಕೆ...

ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಆರೆಸ್ಸೆಸ್‌ನಿಂದ ದೇಶಪ್ರೇಮದ ಪಾಠ: ಪಿಣರಾಯಿ ವಿಜಯನ್ ವ್ಯಂಗ್ಯ

ವಾರ್ತಾಭಾರತಿವಾರ್ತಾಭಾರತಿ25 Feb 2017 7:24 PM IST
share
ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಆರೆಸ್ಸೆಸ್‌ನಿಂದ ದೇಶಪ್ರೇಮದ ಪಾಠ: ಪಿಣರಾಯಿ ವಿಜಯನ್ ವ್ಯಂಗ್ಯ

ಮಂಗಳೂರು, ಫೆ.25:  1925ರಲ್ಲಿ ಆರೆಸ್ಸೆಸ್‌ ಸ್ಥಾಪನೆಯಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೆ ಮೋಸ ಮಾಡುವ ಪಾತ್ರ ವಹಿಸಿದ್ದಾರೆ. ಎಲ್ಲರೂ ಒಂದಾಗಬೇಕು ಎಂದು ಬಯಸಿದ್ದ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದ. ಗಾಂಧೀಜಿ ಹತ್ಯೆಯಾದಾಗ ಆರೆಸ್ಸೆಸ್‌ ಸಿಹಿ ತಿಂಡಿ ಹಂಚಿದರು. ಅಂತಹವರಿಂದ ನಾವು ದೇಶಪ್ರೇಮದ ಪಾಠ ಕಲಿಯಬೇಕಾಗಿದೆ ಎಂದು ಪಿಣರಾಯ್ ವಿಜಯನ್ ವ್ಯಂಗ್ಯವಾಡಿದರು.

 ನೆಹರೂ ಮೈದಾನದಲ್ಲಿ ನಡೆದ ಸೌಹಾರ್ದ ರ‍್ಯಾಲಿಯಲ್ಲಿ  ಭಾಗವಹಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿದರು.


ಆರೆಸ್ಸೆಸ್‌ ಹಿಟ್ಲರ್ ಫ್ಯಾಸಿಸಂನಿಂದ ಪ್ರಭಾವಿತ: 

ಆರೆಸ್ಸೆಸ್ ಹಿಟ್ಲರ್ ಫ್ಯಾಸಿಸಂನಿಂದ ಪ್ರಭಾವಿತವಾಗಿದೆ. ಆರೆಸ್ಸೆಸ್‌ಗೆ ರಾಜಕೀಯ ತತ್ವಶಾಸ್ತ್ರ ಇರಲಿಲ್ಲ. ಇದಕ್ಕಾಗಿ ಇಟಲಿಯ ಮುಸೋಲಿನಿಯನ್ನು ಭೇಟಿಯಾಗಿ ಅವರ ಸಂಘಟನೆಯಲ್ಲಿ ಭಾಗಿಯಾಗಿ ಅಲ್ಲಿನ ಸಂಘಟನಾ ನೀತಿಯನ್ನು ನಮ್ಮ ದೇಶದಲ್ಲಿ ಅಳವಡಿಸಿಕೊಂಡಿದ್ದಾರೆ. ಮತ್ತೆ ತತ್ವಶಾಸ್ತ್ರ ಹುಡುಕುತ್ತ ಜರ್ಮನಿ ಸೇರಿದರು. ಹಿಟ್ಲರ್ ತತ್ವಶಾಸ್ತ್ರ ಅಭ್ಯಾಸ ಮಾಡಿದರು. ಅಲ್ಪಸಂಖ್ಯಾತರನ್ನು ಇಲ್ಲವಾಗಿಸುವುದೇ ಹಿಟ್ಲರ್ ತತ್ವ.

ಅದೇ ತತ್ವವನ್ನು ಆರೆಸ್ಸೆಸ್ ತನ್ನ ತತ್ವವನ್ನಾಗಿ ಬೆಳೆಸಿಕೊಂಡಿದೆ. ಭಾರತದಲ್ಲಿ ಕೋಮುಗಲಭೆ ಹಬ್ಬುವುದಕ್ಕೆ ಆರೆಸ್ಸೆಸ್ ಪಾತ್ರ ವಹಿಸಿದೆ. ದೇಶ ಸ್ವಾತಂತ್ರ‍್ಯ ಪಡೆದಾಗಿನಿಂದ ಇಲ್ಲಿಯವರೆಗೂ ಅವರು ಮಾಡಿರುವ ಕೋಮುಗಲಭೆಗೆ ಲೆಕ್ಕವೆ ಇಲ್ಲ. ಭಾರತದ ಧರ್ಮ ನಿರಪೇಕ್ಷತೆಯನ್ನು ಅವರು ಒಪ್ಪುವುದಿಲ್ಲ. ೪೭ರ ಆರ್ಗನೈಝರ್ ಪತ್ರಿಕೆಯಲ್ಲಿ ದೇಶದ ಬಾವುಟಕ್ಕೂ ಭಾರತಕ್ಕೂ ಸಂಬಂಧವಿಲ್ಲ ಎಂಬ ಲೇಖನ ಬರೆದಿದ್ದಾರೆ.  ಇಂಡಿಯಾ ಪದ ಉಪಯೋಗಿಸಬಾರದು, ದೇಶದ  ಭಾವುಟ ಸರಿಯಿಲ್ಲ ಎಂದು ಆರೆಸ್ಸೆಸ್‌ನ ಪತ್ರಿಕೆಯಲ್ಲಿ ಬಂದಿತ್ತು ಎಂದು ಹೇಳಿದರು.        

ಎಂ.ಎಂ. ಕಲ್ಬುರ್ಗಿ ಅಭಿಪ್ರಾಯ ಹೇಳಿದಕ್ಕೆ ಕೊಲೆ ಮಾಡಿದ್ದಾರೆ: 

ಭಾಷಣದಲ್ಲಿ ಕನ್ನಡಿಗ ಬರಹಗಾರರ ಮೇಲೆ ನಡೆದ ವೈಚಾರಿಕ ದಾಳಿ ಪ್ರಸ್ತಾಪಿಸಿದ ವಿಜಯನ್, ಅಸಹಿಷ್ಣುತೆ ಒಪ್ಪದ ಮಹಾನ್ ಬರಹಗಾರರನ್ನು ಕೊಂದರು. ಬರೆದರೆ ಬೆರಳು ಕತ್ತರಿಸುತ್ತೇವೆ, ಅತ್ಯಾಚಾರ ನಡೆಸುವುದಾಗಿ ಬೆದರಿಸುತ್ತಿದ್ದಾರೆ. ಇದು ಅವರ ಸಂಸ್ಕೃತಿ ಆರೆಸ್ಸೆಸ್ ಇತರರ ಅಭಿಪ್ರಾಯ ಒಪ್ಪುವುದಿಲ್ಲ. ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಎಂ.ಎಂ. ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ್ದಾರೆ.

ಕನ್ನಡದ ಭಗವಾನ್, ಜ್ಞಾನಪೀಠ ಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ , ಕನ್ನಡ ಕವಿ ಹುಚ್ಚಂಗಿ ಪ್ರಸಾದ್, ಚೇತನ ತೀರ್ಥಹಳ್ಳಿ ಅವರು  ಅಭಿಪ್ರಾಯ ವ್ಯಕ್ತಪಡಿಸಿದಕ್ಕೆ ಅವರಿಗೆ ಬೆದರಿಕೆ ಹಾಕಿದರು. ಯು ಆರ್ ಅನಂತಮೂರ್ತಿ ಅವರಿಗೆ ಪಾಕಿಸ್ತಾನ ಟಿಕೇಟ್ ಕಳುಹಿಸಿಕೊಟ್ಟರು. ಭಾರತ ಆರೆಸ್ಸೆಸ್‌ನ ಸೊತ್ತು ಅಲ್ಲ ಎಂದು ಹೇಳಿದರು.

ಪ್ರತಾಪ್ ಪೂಜಾರಿ ಹತ್ಯೆ ಮಾಡಿದವರಿಂದಲೇ ಇಂದು ಬಂದ್ ಗೆ ಕರೆ : 

ಕರಾವಳಿ ಜಿಲ್ಲೆಯಲ್ಲಿ ಸಂಘಪರಿವಾರ ಹಲವರ ಹತ್ಯೆ ಮಾಡಿದೆ. ಪ್ರತಾಪ್ ಪೂಜಾರಿ ಹತ್ಯೆ ಮಾಡಿದವರು ಇಂದು ಬಂದ್ ಗೆ ಕರೆ ಕೊಟ್ಟಿದ್ದಾರೆ. ವಿನಾಯಕ ಬಾಳಿಗ ನನ್ನು ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಹತ್ಯೆ ಮಾಡಿದ್ದಾರೆ. ಇದರಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಪಾತ್ರ ದ ಬಗ್ಗೆ ಯು ಚರ್ಚೆಯಾಗಿತ್ತು. ಹಿಂದು ಸಂಘಟನೆಯ  ಪ್ರವೀಣ್ ಪೂಜಾರಿಯನ್ನು ಕೊಂದರು ಎಂದು ಹೇಳಿದರು.

 ಕೇಂದ್ರಕ್ಕೆ ಆರೆಸ್ಸೆಸ್‌ನಿಂದ ಮಾರ್ಗದರ್ಶನ:

ಕೇಂದ್ರದ ಆಡಳಿತ ದೇಶಕ್ಕೆ ಸವಾಲಾಗುತ್ತಿದೆ. ಅದಕ್ಕೆ ಮಾರ್ಗದರ್ಶನ ನೀಡುತ್ತಿರುವ ಆರೆಸ್ಸೆಸ್ ಕೋಮು ಸೌಹಾರ್ದತೆ ಕೆರಳಿಸಿ ನಾಗರಿಕರಿಗೆ ಸವಾಲಿನ ಪರಿಸ್ಥಿತಿ ಎದುರಿಸಲು  ಕಾರಣವಾಗಿದೆ. ಆರೆಸ್ಸೆಸ್ ದೇಶದ ಜನತೆ ಒಂದಾಗಲು ಬಯಸಿಲ್ಲ. ಜನರಲ್ಲಿ ಭಿನ್ನತೆ ಸೃಷ್ಟಿಸುವುದೇ ಅದರ ಗುರಿಯಾಗಿದೆ.  ಕೇರಳದಲ್ಲಿ ೨೦೫ ಕಮ್ಯುನಿಸ್ಟ್ ರು ಆರೆಸ್ಸೆಸ್ನಿಂದ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ನಾನು ಆರೆಸ್ಸೆಸ್‌ನವರ ಕತ್ತಿ- ಚೂರಿಗಳ ಮಧ್ಯೆ ನಡೆದು ಬಂದವನು: 

ಈಗಿನ ಕೇಂದ್ರ ಗೃಹ ಮಂತ್ರಿ ಸೆಕ್ಯುಲರಿಸಂ ಪದವೇ ಅಪಾಯಕಾರಿ ಎಂದು ಮಾತನಾಡುತ್ತಾರೆ. ಅದೇ ಅವರ ನೀತಿಯಾಗಿದೆ. ಇದು ಪ್ರತಿ ಪ್ರಜೆಯ ದೇಶ. ಪ್ರತಿಯೊಬ್ಬರ ಹಕ್ಕು ಕಾಪಾಡಲು ಧರ್ಮನಿರಪೇಕ್ಷತೆಯ ಒಪ್ಪುವ ಎಲ್ಲ ಶಕ್ತಿಗಳು ಒಗ್ಗೂಡಬೇಕಾಗಿದೆ. ಈ ದೇಶ ಆರೆಸ್ಸೆಸ್ ಸೊತ್ತಲ್ಲ. ಸಂಘ ಪರಿವಾರದವರು ಅವರ ಸಂಘಟನೆಯವರನ್ನೇ ಕೊಲ್ಲುವ ಸಂಸ್ಕೃತಿಗೆ ಇಳಿದಿದ್ದಾರೆ.

ಕೇರಳದಲ್ಲಿ ಒಡೆದಾಳುವ ನೀತಿಗೆ ಸಿಪಿಎಂ ತಡೆಯಾಗಿ ನಿಂತಿದ್ದರಿಂದಲೇ ನಮ್ಮ ಮೇಲೆ ದಾಳಿ ನಡೆಯುತ್ತಿದೆ. ನಾನು ಫಕ್ಕನೆ ಆಕಾಶದಿಂದ ಉದುರಿದ್ದಲ್ಲ. ಸಣ್ಣ ವಯಸ್ಸಿನಲ್ಲೇ ಆರೆಸ್ಸೆಸ್‌ನವರ ಕತ್ತಿ- ಚೂರಿಗಳ ಮಧ್ಯೆ ನಡೆದು ಬಂದವನು. ಇಂದಿಗೂ ನನಗೆ ಕತ್ತಿ- ಚೂರಿಗಳ ನಡುವೆ ನಡೆದಾಡಲು ಭಯವಿಲ್ಲ ಎಂದು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X