ಕಾರ್ಕಳ, ಫೆ.26: ನೂರಾಲ್ಬೆಟ್ಟು ಗ್ರಾಮದ ಹಾಲೆಕ್ಕಿ ಎಂಬಲ್ಲಿ ಫೆ.24ರಂದು ರಾತ್ರಿ ವೇಳೆ ಶಿವರಾತ್ರಿ ಹಬ್ಬದ ಪ್ರಯುಕ್ತ ಎಳನೀರು ತೆಗೆಯಲು ಹೋದ ಆದರ್ಶ ಜೈನ್(23) ಎಂಬವರು ಕತ್ತಲೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.