Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೂವತ್ತು ವರ್ಷಗಳಿಂದ ಪಾಳು ಬಿದ್ದಿದ್ದ...

ಮೂವತ್ತು ವರ್ಷಗಳಿಂದ ಪಾಳು ಬಿದ್ದಿದ್ದ ಮಸೀದಿ ದುರಸ್ತಿ ಮಾಡಿಕೊಟ್ಟ ಹಿಂದೂಗಳು

ಅಹ್ಮದಾಬಾದ್ ನ ಕಾಲೊನಿಯಲ್ಲಿ ಮುಗುಳ್ನಕ್ಕ ಗಾಂಧೀಜಿ

ವಾರ್ತಾಭಾರತಿವಾರ್ತಾಭಾರತಿ27 Feb 2017 12:17 AM IST
share
ಮೂವತ್ತು ವರ್ಷಗಳಿಂದ ಪಾಳು ಬಿದ್ದಿದ್ದ ಮಸೀದಿ ದುರಸ್ತಿ ಮಾಡಿಕೊಟ್ಟ ಹಿಂದೂಗಳು

ಅಹ್ಮದಾಬಾದ್,ಫೆ.26: ಯಾವುದೇ ದಂಗೆ, ಪ್ರಚೋದನೆಯಿರಲಿ....ಅದು ಭಾರತೀಯರ ಹೃದಯಗಳಲ್ಲಿನ ಮಾನವೀಯತೆಯನ್ನು ನಿಜವಾಗಿಯೂ ಅಳಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕಾಲುಪುರದ ಬಕ್ರಿ ಪೋಳ್ ಸಮೀಪದ ಮಸೀದಿಯಿಂದ ಕಳೆದ ವರ್ಷ ಮಾರ್ಚ್‌ನಲ್ಲಿ ಮೊಳಗಿದ್ದ ನಮಾಝ್ ಕರೆ ಸಾಮಾನ್ಯ ಅಝಾನ್ ಆಗಿರಲಿಲ್ಲ. 30 ವರ್ಷಗಳ ಸುದೀರ್ಘ ವಿರಾಮದ ಬಳಿಕ ಈ ಮಸೀದಿಯಿಂದ ಕೇಳಿ ಬಂದಿದ್ದ ಈ ಅಝಾನ್ ದ್ವೇಷವನ್ನು ತೊಡೆದುಹಾಕುವ ಅನುಕಂಪ ಮತ್ತು ಗೌರವದ ಸಂಕೇತವಾಗಿತ್ತು.

ಹಿಂದು ಮತ್ತು ಮುಸ್ಲಿಮ್‌ರು ವಾಸವಾಗಿರುವ ಕಾಲುಪುರ ಪ್ರದೇದಲ್ಲಿ 1984ರ ಕೋಮುಗಳಭೆಯಲ್ಲಿ ರಕ್ತವು ನೀರಿನಂತೆ ಹರಿದಿತ್ತು. ನೂರು ವರ್ಷಗಳಷ್ಟು ಹಳೆಯದಾದ ಮಸೀದಿ ಹಿಂದುಗಳ ವಸತಿ ಪ್ರದೇಶದ ಮಧ್ಯೆ....ರಾಮ್‌ಜಿ,ನಾಗ್ದಲ್ಲಾ ಹನುಮಾನ್ ಮತ್ತು ಶೇಷ ನಾರಾಯಣ ದೇವಸ್ಥಾನಗಳ ಸಮೀಪವಿದ್ದರಿಂದ ಮುಸ್ಲಿಮರು ಸುಮ್ಮನೆ ತೊಂದರೆಯನ್ನು ಎದುರು ಹಾಕಿಕೊಳ್ಳುವುದೇಕೆಂದು ಭಾವಿಸಿ ನಮಾಝ್‌ಗೆ ಆ ಮಸೀದಿಗೆ ಹೋಗುವುದನ್ನೇ ಬಿಟ್ಟಿದ್ದರು.

1993ರಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಕೋಮು ಧ್ರುವೀಕರಣ ಹೆಪ್ಪುಗಟ್ಟಿತ್ತು. ಆ ವೇಳೆಗಾಗಲೇ ಕಾಲುಪುರ ಮಸೀದಿಯ ಸುತ್ತ ಗಿಡಗಂಟಿಗಳು ಬೆಳೆದು ಗೋಡೆಗಳು ಶಿಥಿಲಗೊಂಡು ಈಗಲೋ ಆಗಲೋ ಬೀಳುವಂತಾಗಿತ್ತು.

2002ರ ಕೋಮು ಗಲಭೆಗಳ ನಂತರ ಮಸೀದಿಯ ಸುತ್ತ ವಾಸವಿರುವವರಲ್ಲಿ ಅದನ್ನು ಉಳಿಸಬೇಕೆಂಬ ಸಾಮೂಹಿಕ ಇಚ್ಛೆ ಹುಟ್ಟಿಕೊಂಡಿತ್ತು. ತಮ್ಮ ಮುಸ್ಲಿಮ್ ಬಾಂಧವರೊಂದಿಗೆ ಮಾತುಕತೆ ನಡೆಸಿದ ಹಿಂದುಗಳು ಮಸೀದಿ ಪರಿಸರವನ್ನು ಸ್ವಚ್ಛಗೊಳಿಸಿ, ವಂತಿಗೆ ಸಂಗ್ರಹಿಸಿ ಅದರ ದುರಸ್ತಿಯನ್ನೂ ಮಾಡಿಸಿದರು. 201ರ, ಮಾರ್ಚ್‌ನಲ್ಲಿ ಮಸೀದಿ ಪುನರಾರಂಭಗೊಂಡಿತ್ತು. ಇದೀಗ ,ಒಂದು ವರ್ಷದ ಬಳಿಕ ಮಸೀದಿಯ ಪುನರ್‌ನಿರ್ಮಾಣ ಪ್ರಯತ್ನ ಉಭಯ ಸಮುದಾಯಗಳ ಮಧ್ಯೆ ಗಾಢ ಅನುಬಂಧವನ್ನು ಬೆಸೆದಿದೆ ಎನ್ನುವುದನ್ನು ಸ್ಥಳೀಯರು ದೃಢಪಡಿಸಿದ್ದಾರೆ. ಎಷ್ಟರ ಮಟ್ಟಿಗೆಂದರೆ ಮಸೀದಿಯ ಚಾವಿಗಳ ಒಂದು ಸೆಟ್ ಅನ್ನು ಹಿಂದುಗಳ ವಶಕ್ಕೆ ನೀಡಲಾಗಿದೆ.

ಮಸೀದಿಯ ಬಳಿ ಹೂವುಗಳನ್ನು ಮಾರುತ್ತಿರುವ ಪೂನಂ ಪಾರೇಖ್ ಮತ್ತು ಕೌಶಿಕ್ ರಾಮಿ ಬಳಿ ಮಸೀದಿಯ ಚಾವಿಯಿದೆ ಎಂದು ದರಿಯಾಪುರದ ಸಾಮಾಜಿ ಕಾರ್ಯಕರ್ತ ಅಝೀಝ್ ಗಾಂಧಿ ತಿಳಿಸಿದರು.

ಮಸೀದಿಯ ಬಳಿ ದಿನವೂ ಎರಡು ಬಾರಿ ಅಗರಬತ್ತಿ ಹಚ್ಚುತ್ತಿರುವ ರಾಮಿ, ಮೂರು ದಶಕಗಳಿಂದ ಬಂದ್ ಆಗಿದ್ದ ಮಸೀದಿ ಈಗ ಭಕ್ತರಿಂದ ತುಂಬಿರುವುದು ನಮಗೆ ತುಂಬ ಸಂತಸವನ್ನುವನ್ನುಂಟು ಮಾಡಿದೆ ಎನ್ನುತ್ತಾರೆ.

ಹಾಜಿ ಉಸ್ಮಾನ್ ಗನಿ ಮತ್ತು ಮಸೀದಿಯ ಇತರ ಟ್ರಸ್ಟಿಗಳೊಂದಿಗೆ ಸೇರಿಕೊಂಡು ನಾವು ಮಸೀದಿಯ ನವೀಕರಣ ಮಾಡಿದ್ದೇವೆ ಎನ್ನುತ್ತಾರೆ ನಾಗ್ದಲ್ಲಾ ಹನುಮಾನ ದೇವಸ್ಥಾನದ ಅರ್ಚಕ ಚಂದ್ರಕಾಂತ ಶರ್ಮಾ.

ಈ ಹಿಂದೆ ಮುಸ್ಲಿಮ್ ಯುವಕರು ಪ್ರಾರ್ಥನೆಗೆ ಬೇರೆ ಕಡೆಗೆ ಹೋಗಬೇಕಾಗಿತ್ತು. ಈಗ ಅವರೆಲ್ಲ ಇಲ್ಲಿಯೇ ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ ಎಂದರು.

ಮಸೀದಿಯ ನವೀಕರಣಕ್ಕೆ ಕಾರ್ಮಿಕರನ್ನು ಕರೆತರುವಲ್ಲಿ ನಮ್ಮ ಹಿಂದು ಬಾಂಧವರು ನಮಗೆ ತುಂಬ ನೆರವಾಗಿದ್ದರು ಎಂದು ದರಿಯಾಪುರದ ನಿವಾಸಿ ಹಮೀದುಲ್ಲಾ ಶೇಖ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X