ಹೆಬ್ರಿ, ಫೆ.28: ಚಾರ ಗ್ರಾಮದ ಶ್ರೀರಾಮ ಕಾಂಪ್ಲೆಕ್ಸ್ ನಿವಾಸಿ ಭುಜಂಗ ಶೆಟ್ಟಿ ಎಂಬವರ ಮಗಳು ಸಿಂಚನ(23) ಎಂಬಾಕೆ ಫೆ.25ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪರೀಕ್ಷೆ ಕಟ್ಟಿ ಬರುವುದಾಗಿ ಹೇಳಿ ಹೋದವರು ಈತನಕ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.