Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುಳ್ಯಪದವು ಬಾರ್‌ನಲ್ಲಿ ಕಾರ್ಮಿಕನ ಸಾವು:...

ಸುಳ್ಯಪದವು ಬಾರ್‌ನಲ್ಲಿ ಕಾರ್ಮಿಕನ ಸಾವು: ಕಾನತ್ತೂರು ದೈವಸ್ಥಾನದಲ್ಲಿ ಪ್ರಮಾಣ ಮಾಡಲು ಆಗ್ರಹ

ವಾರ್ತಾಭಾರತಿವಾರ್ತಾಭಾರತಿ1 March 2017 6:40 PM IST
share
ಸುಳ್ಯಪದವು ಬಾರ್‌ನಲ್ಲಿ ಕಾರ್ಮಿಕನ ಸಾವು:  ಕಾನತ್ತೂರು ದೈವಸ್ಥಾನದಲ್ಲಿ ಪ್ರಮಾಣ ಮಾಡಲು ಆಗ್ರಹ

ಪುತ್ತೂರು, ಮಾ.1: ಪುತ್ತೂರು ತಾಲ್ಲೂಕಿನ ಸುಳ್ಯಪದವಿನಲ್ಲಿರುವ ವಿನ್ಯಾಸ್ ಬಾರ್‌ನಲ್ಲಿ ಬಡ ಕೂಲಿ ಕಾರ್ಮಿಕ, ದಲಿತ ಸಮುದಾಯಕ್ಕೆ ಸೇರಿದ ಕೇಶವ ಅವರನ್ನು ಬಾರ್‌ನ ಕೆಲಸಗಾರರು ಹಲ್ಲೆ ನಡೆಸಿ, ಮರ್ಮಾಂಗಕ್ಕೆ ತುಳಿದು ಕೊಲೆ ಮಾಡಿದ್ದು ಸತ್ಯವಾಗಿದ್ದು, ಈ ಬಗ್ಗೆ ಕಾನತ್ತೂರು ಕ್ಷೇತ್ರದಲ್ಲಿ ಪ್ರಮಾಣ ಮಾಡಲಿ ಎಂದು ಹೇಳಿಕೆ ನೀಡಿರುವ ಬಾರ್‌ನ ಮಾಲಕ ವಿಠ್ಠಲ ರೈ ಅವರು ಕಾನತ್ತೂರು ದೈವಸ್ಥಾನದಿಂದ ಸತ್ಯ ಪ್ರಮಾಣಕ್ಕೆ ನೋಟೀಸು ಮಾಡಲಿ, ನಾವು ಅಲ್ಲಿಗೆ ಹೋಗಿ ಪ್ರಮಾಣ ಮಾಡಲು ಸಿದ್ಧ ಎಂದು ದ.ಕ.ಜಿಲ್ಲಾ ಸೌಹಾರ್ದ ಸಮಿತಿಯ ಅಧ್ಯಕ್ಷ ಪ್ರದೀಪ್ ರೈ ಪಾಂಬಾರು ಅವರು ಪ್ರತ್ಯುತ್ತರ ನೀಡಿದ್ದಾರೆ.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಶವ ಅವರನ್ನು ಬಾರ್‌ನ ಕೆಲಸದಾಳುಗಳು ಕೊಲೆ ಮಾಡಿರುವುದು ಸತ್ಯವಾಗಿರದಿದ್ದಲ್ಲಿ, ಅವರು ತಪ್ಪು ಮಾಡಿರದಿದ್ದರೆ ಬಾರ್‌ನ ಮಾಲಕಿ ನಯನಾ ರೈ ಅವರ ಪತಿ ವಿಠ್ಠಲ ರೈ ಅವರು ತನ್ನ ಮತ್ತು ಮೃತ ಕೇಶವರ ತಂದೆಯ ಬಳಿಕೆ ಪಂಚಾಯಿತಿ ಮಾಡಿ ಪ್ರಕರಣವನ್ನು ಮುಗಿಸಲು ಜನ ಕಳುಹಿಸಿ ಕೇಸು ಮಾಡಬೇಡಿ, ರಾಜಿಯಲ್ಲಿ ಪ್ರಕರಣವನ್ನು ಮುಗಿಸಿಕೊಡಿ ,ಅದಕ್ಕೆ ನಾವು ಹಣ ನೀಡುತ್ತೇವೆ ಎಂದು ಹೇಳಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.

ಈ ಹಿಂದೆ ದರ್ಬೆಯ ವಿನ್ಯಾಸ್ ಬಾರ್‌ನಲ್ಲಿ ವಿಠಲ ರೈ ಮತ್ತು ಬಾರ್‌ನ ಕೆಲಸದಾಳುಗಳು ಸೇರಿಕೊಂಡು ವಿಠಲ ರೈ ಅವರ ಸ್ವಂತ ಅಣ್ಣನಾದ ಸೀತಾರಾಮ ರೈ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ,ಮಾನಸಿಕ ಹಿಂಸೆ ನೀಡಿದ ಪರಿಣಾಮವಾಗಿ ಅವರು ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದರು. ಸೀತಾರಾಮ ರೈ ಅವರು ನಿಧನರಾದ ಬಳಿಕ ಇದೇ ವಿಠ್ಠಲ  ರೈ ಅವರು ಗೂಂಡಾಗಳನ್ನು ಕರೆತಂದು ಮೃತ ಅಣ್ಣನ ಪತ್ನಿ ಮಕ್ಕಳನ್ನು ಮನೆಯಿಂದ ಹೊರಹಾಕಿ, ಸೀತಾರಾಮ ರೈ ಅವರು ಮಕ್ಕಳ ಹೆಸರಿನಲ್ಲಿ ಮಾಡಿಟ್ಟಿದ್ದ ಆಸ್ತಿ ವೀಲ್‌ನ ಸಾಕ್ಷಿದಾರರಿಗೆ ಹಣದ ಆಮಿಷ ತೋರಿಸಿ, ಸಾಕ್ಷಿ ನಾಶಪಡಿಸಿ ಅವರ ಪತ್ನಿ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

 12 ವರ್ಷದ ಹಿಂದೆ ಇದೇ ಬಾರ್‌ನಲ್ಲಿ ನೆಲ್ಲಿಕಟ್ಟೆಯ ಡೆನ್ನಿಸ್ ಎಂಬಾತನಿಗೂ ರೀಪಿನಿಂದ ಹೊಡೆದು ಸಾಯಿಸಲಾಗಿದೆ. ಮೂರು ವರ್ಷದ ಹಿಂದೆ ಅನಾಥ ಭಿಕ್ಷುಕನೊಬ್ಬನಿಗೂ ಹಲ್ಲೆ ನಡೆಸಲಾಗಿದ್ದು, ಆತ ಮುಕ್ರಮಂಪಾಡಿ ಎಂಬಲ್ಲಿಗೆ ಹೋಗಿ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಭಿಕ್ಷುಕನಿಗೆ ಬನಿಯಾನಿ ವಸ್ತ್ರ ತೊಡಿಸಿ ಕಳುಹಿಸಿದ್ದ ಹುಡುಗರ ಮೇಲೆ ಕೇಸು ಆಗಿತ್ತು ಎಂದು ಆರೋಪಿಸಿದ ಪ್ರದೀಪ್ ರೈ, ಅವರು ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿ ಪ್ರಮಾಣ ಮಾಡಲು ಕಾನತ್ತೂರು ಕ್ಷೇತ್ರದಿಂದ ನೋಟೀಸು ಕಳುಹಿಸಲಿ, ನಾನು ಅನ್ಯಾಯಕ್ಕೊಳಗಾದವರನ್ನು ಅಲ್ಲಿಗೆ ಕರೆತಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದರು.

ಅಲವತ್ತುಕೊಂಡು ಕಣ್ಣೀರಿಟ್ಟ ಮಹಿಳೆ:

ಕಾಣಿಯೂರು ಗ್ರಾಮದ ಮಾಳ ಎಂಬಲ್ಲಿದ್ದ ತನ್ನ ಪತಿಗೆ ಸೇರಿದ್ದ ಸುಮಾರು ರೂ.75 ಲಕ್ಷ  ರೂ. ಮೌಲ್ಯದ ಕೃಷಿಭೂಮಿಯನ್ನು ಪತಿಯ ತಮ್ಮನಾದ ವಿಠ್ಠಲ ರೈ ತಮ್ಮಿಂದ ಬಲವಂತವಾಗಿ ಸ್ವಾಧೀನ ಪಡಿಸಿಕೊಂಡು ತನಗೆ ಮತ್ತು ತನ್ನ ಇಬ್ಬರು ಮಕ್ಕಳಾದ ತ್ರಿಶಾಂತ್ ರೈ ಮತ್ತು ತ್ರಿಶೋದ್ ರೈಗೆ ಅನ್ಯಾಯ ಎಸಗುವ ಮೂಲಕ ಗತಿಯಿಲ್ಲದಂತೆ ಮಾಡಿದ್ದಾನೆ.

ಕಾಣಿಯೂರು ವಿಜಯ ಬ್ಯಾಂಕಿನಲ್ಲಿದ್ದ ತನ್ನ 5 ಪವನ್ ಚಿನ್ನದ ಸರವನ್ನು ತನಗೆ ಗೊತ್ತಿಲ್ಲದಂತೆ ಪಡೆದುಕೊಂಡು ವಂಚಿಸಿದ್ದಾನೆ ಎಂದು ಅಲವತ್ತುಕೊಂಡು ಕಣ್ಣೀರಿಟ್ಟ ಲತಾ ಎಸ್.ರೈ ಅವರು ಈ ಬಗ್ಗೆಯೂ ಕಾನತ್ತೂರು ದೈವಸ್ಥಾನದಲ್ಲಿ ಪ್ರಮಾಣ ನಡೆಯಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮಂಡಲ ಪಂಚಾಯಿತಿ ಸದಸ್ಯ ಅಂಬೋಡಿ ಅಮ್ಚಿನಡ್ಕ, ಮೃತ ಕೇಶವ ಅವರ ತಂದೆ ಬಾಬು ಮತ್ತು ಮೃತ ಕೇಶವ ಅವರ ಪತ್ನಿ ಸುಮಿತ್ರ ಹಾಜರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X