Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಈ ನಿಯಮ ಪಾಲಿಸದಿದ್ದರೆ ದುಬೈಯಲ್ಲಿ ನಿಮ್ಮ...

ಈ ನಿಯಮ ಪಾಲಿಸದಿದ್ದರೆ ದುಬೈಯಲ್ಲಿ ನಿಮ್ಮ ಲಗೇಜು ಪಾಸಾಗದು

ವಾರ್ತಾಭಾರತಿವಾರ್ತಾಭಾರತಿ2 March 2017 3:56 PM IST
share
ಈ ನಿಯಮ ಪಾಲಿಸದಿದ್ದರೆ ದುಬೈಯಲ್ಲಿ ನಿಮ್ಮ ಲಗೇಜು ಪಾಸಾಗದು

ದುಬೈ,ಮಾ. 2 : ದುಬೈ ವಿಮಾನ ನಿಲ್ದಾಣ ಸದ್ಯದಲ್ಲೇ ಹೊಸ ಲಗೇಜು ನಿಮಯಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಈ ಕ್ರಮದಿಂದ ಲಗೇಜು ಚೆಕ್-ಇನ್, ತಪಾಸಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನೆರವಾಗುವುದು ಎಂದು ಹೇಳಲಾಗಿದೆ.‘

‘ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವದಲ್ಲಿಯೇ ಅತ್ಯಾಧುನಿಕ ಬ್ಯಾಗೇಜ್ ಸಿಸ್ಟಂ ಹೊಂದಿದೆ,’’ ಎಂದು ನಿಲ್ದಾಣವು ಟರ್ಮಿನಲ್ ಆಪರೇಶನ್ಸ್ ಇದರ ಉಪಾಧ್ಯಕ್ಷ ಅಲಿ ಅಂಜಿಝೆಹ್ ಹೇಳಿದ್ದಾರೆ. ‘‘ಆದರೆ ಎಷ್ಟೇ ಮುಂದುವರಿದ ತಂತ್ರಜ್ಞಾನವನ್ನು ಬಳಸಿದರೂ ದೊಡ್ಡ ಗಾತ್ರದ ಬ್ಯಾಗುಗಳು ಬಂದಾಗ ಸಮಸ್ಯೆಗಳು ಎದುರಾಗಿಯೇ ಎದುರಾಗುತ್ತವೆ.

ಉರುಟಾಗಿರುವ ಬ್ಯಾಗುಗಳು ಅಥವಾ ಅಡಿ ಭಾಗ ಚಪ್ಪಟೆಯಾಗಿರದ ಬ್ಯಾಗುಗಳಿದ್ದರೆ ಅವುಗಳು ಸಮಸ್ಯೆಯೊಡ್ಡುವ ಸಂಭವವಿದೆ. ಇದರಿಂದ ಬ್ಯಾಗೇಜ್ ಸಿಸ್ಟಂ ತಾಂತ್ರಿಕ ಅಡಚಣೆಯೆದುರಿಸಿ ಪ್ರಯಾಣಿಕರಿಗೆ ಅವರ ಬ್ಯಾಗೇಜುಗಳನ್ನು ಹಿಂದಿರುಗಿಸುವಲ್ಲಿ ಅಥವಾ ಅವುಗಳನ್ನು ವಿಮಾನದಲ್ಲಿರಿಸುವಲ್ಲಿ ವಿಳಂಬವಾಗಬಹುದು,’’ ಎಂದು ಅವರು ಹೇಳಿದ್ದಾರೆ.

ಮಾರ್ಚ್ 8, 2017ಕ್ಕೆ ಅನ್ವಯವಾಗುವಂತೆ ಅಡಿ ಭಾಗ ಚಪ್ಪಟೆಯಿಲ್ಲದ ಬ್ಯಾಗುಗಳನ್ನು ಹೊಸ ನಿಯಮದಂತೆ ಚೆಕ್-ಇನ್ ಸಂದರ್ಭದಲ್ಲಿ ತಿರಸ್ಕರಿಸಲಾಗುವುದು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಸೇವೆಯೊದಗಿಸುವ ಎಲ್ಲಾ ಏರ್ ಲೈನ್ ಕಂಪೆನಿಗಳಿಗೂ ಈ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಲಾಗಿದೆಯಲ್ಲದೆ ಈ ಬಗ್ಗೆ ನಿಲ್ದಾಣದ ವೆಬ್ ಸೈಟಿನಲ್ಲೂ ಮಾಹಿತಿ ನೀಡಲಾಗಿದೆ.

ನಿಲ್ದಾಣದ ಮೊಬೈಲ್ ಆ್ಯಪ್ ಹಾಗೂ ಇತರ ಸೂಚನಾ ಫಲಕದಲ್ಲೂ ವಿವರಗಳನ್ನು ನೀಡಿ ಪ್ರಯಾಣಿಕರಲ್ಲಿ ಹೊಸ ನಿಯಮದ ಬಗ್ಗೆ ಅರಿವನ್ನುಂಟು ಮಾಡಲಾಗಿದೆ.‘‘ಆದಷ್ಟು ಹೆಚ್ಚು ಜನರಿಗೆ ಈ ನಿಯಮದ ಮಾಹಿತಿ ತಲುಪುವಂತೆ ನಾವು ಮಾಡುತ್ತಿದ್ದೇವೆ,’’ ಎಂದು ಅಂಗಿಝೆಹ್ ಹೇಳಿದ್ದಾರೆ. ‘‘ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿರುವಂತಹ ಬ್ಯಾಗುಗಳನ್ನು ಪ್ರಯಾಣಿಕರು ತಂದಿದ್ದರೂ ಅವರ ಬ್ಯಾಗುಗಳಲ್ಲಿನ ವಸ್ತುಗಳನ್ನು ಒಂದು ನಿಗದಿತ ಮೊತ್ತಕ್ಕೆ ಬೇರೆ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡುವ ಅವಕಾಶವೂ ಇದೆ,’’ ಎಂದು ಅವರು ಮಾಹಿತಿ ನೀಡಿದ್ದಾರೆ.

140 ಕಿಮೀ ವಿಸ್ತೀರ್ಣದ ಒಟ್ಟು 75 ಫುಟ್ಬಾಲ್ ಮೈದಾನಗಳಷ್ಟು ದೊಡ್ಡದಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬ್ಯಾಗೇಜ್ ನಿರ್ವಹಣಾ ವ್ಯವಸ್ಥೆಯು ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾಗಿದೆ.

ಈ ವ್ಯವಸ್ಥೆಯಡಿ ಒಟ್ಟು 15,000 ಟ್ರೇಗಳಿವೆ ಹಾಗೂ ಇವುಗಳಿಗೆ 21,000 ಮೋಟಾರುಗಳಿವೆ. ಈ ವರ್ಷದ ಜನವರಿ ತಿಂಗಳೊಂದರಲ್ಲಿಯೇ ಒಟ್ಟು 93 ಲಕ್ಷ ಬ್ಯಾಗುಗಳ ತಪಾಸಣೆ ಅದು ನಡೆಸಿದೆ. ಒಂದು ಬ್ಯಾಗ್ ಇಲ್ಲಿನ ಬ್ಯಾಗೇಜ್ ಸಿಸ್ಟಂನಲ್ಲಿ ಸರಾಸರಿ 29 ನಿಮಿಷವಿರುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X