Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜೆಎನ್‌ಯು ವಿಡಿಯೋ ದೃಶ್ಯಾವಳಿ ತಿರುಚಿದ...

ಜೆಎನ್‌ಯು ವಿಡಿಯೋ ದೃಶ್ಯಾವಳಿ ತಿರುಚಿದ ಪ್ರಕರಣ : ಸ್ಮತಿ ಇರಾನಿ ಸಹಾಯಕಿ ಶಿಲ್ಪಿ ತಿವಾರಿ ಪಾತ್ರ ಸಾಬೀತು..?

ವಾರ್ತಾಭಾರತಿವಾರ್ತಾಭಾರತಿ2 March 2017 7:59 PM IST
share
ಜೆಎನ್‌ಯು ವಿಡಿಯೋ ದೃಶ್ಯಾವಳಿ ತಿರುಚಿದ ಪ್ರಕರಣ : ಸ್ಮತಿ ಇರಾನಿ ಸಹಾಯಕಿ ಶಿಲ್ಪಿ ತಿವಾರಿ ಪಾತ್ರ ಸಾಬೀತು..?

ಹೊಸದಿಲ್ಲಿ, ಮಾ.2: ಜೆಎನ್‌ಯು ವಿಡಿಯೋ ದೃಶ್ಯಾವಳಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವೆ ಸ್ಮತಿ ಇರಾನಿಯವರ ನಿಕಟ ಸಹಾಯಕಿ ಎನ್ನಲಾಗಿರುವ ಶಿಲ್ಪಿ ತಿವಾರಿ ಅವರ ಪಾತ್ರದ ಬಗ್ಗೆ ಈಗ ಸಂಶಯ ಹೆಚ್ಚಿದೆ. ಪ್ರಕರಣದ ವಿಚಾರಣೆ ಅಂಗವಾಗಿ ದಿಲ್ಲಿ ಸರಕಾರ ನಡೆಸಿರುವ ವಿಧಿವಿಜ್ಞಾನ ಪ್ರಯೋಗದ ವರದಿಯಲ್ಲಿ ಶಿಲ್ಪಿ ತಿವಾರಿ ಅವರ ಟ್ವಿಟರ್ ಖಾತೆ ಈ ತಿರುಚಲಾಗಿರುವ ವಿಡಿಯೋ ದೃಶ್ಯದ ಮೂಲ ಎಂದು ಕಂಡುಬಂದಿದೆ.

   ವರದಿ ಪ್ರಕಾರ ಕನಿಷ್ಟ ಮೂರು ವಿಡಿಯೋಗಳು ಶಂಕಾಸ್ಪದವಾಗಿದೆ. ಇದರಲ್ಲಿ ಕ್ಯೂ 2 ತಿವಾರಿಗೆ ಸಂಬಂಧಿಸಿದ್ದಾಗಿದೆ. ವಿಡಿಯೋದಲ್ಲಿ ಕೇಳಿ ಬರುವ ಧ್ವನಿಯು ಈ ವಿಡಿಯೋಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಕ್ಯು 1 ಮತ್ತು 2ರಲ್ಲಿ ಕಂಡು ಬರುವ ತುಟಿಗಳ ಚಲನೆಯಲ್ಲಿ ಇರುವ ವ್ಯತ್ಯಾಸದಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಇಲ್ಲಿ ಕೇಳಿ ಬರುವ ಸಂಭಾಷಣೆ ನೈಜವಲ್ಲ ಮತ್ತು ಇಲ್ಲಿ ಮಾತನಾಡುವ ವ್ಯಕ್ತಿಗಳ ಧ್ವನಿ ಇದಲ್ಲ ಎಂದು ತಿಳಿಸಲಾಗಿದೆ.

ಇನ್ನೊಂದೆಡೆ, ಕ್ಯು 2ರಲ್ಲಿ ಮುದ್ರಿತಗೊಂಡಿರುವ ಧ್ವನಿಯು ಶಿಲ್ಪಿ ತಿವಾರಿ ಅವರ ಹೆಸರಲ್ಲಿರುವ ಟ್ವಿಟರ್ ಖಾತೆಯ ಧ್ವನಿಯನ್ನು ಹೋಲುತ್ತದೆ. ಈ ಹಿನ್ನೆಲೆಯಲ್ಲಿ, ಇಲ್ಲಿ ಕಂಡು ಬರುವ ದೃಶ್ಯ ಮತ್ತು ಧ್ವನಿಯ ವಿಡಿಯೋಗಳಿಗೆ ಒಂದಕ್ಕೊಂದು ಸಂಬಂಧವಿಲ್ಲ. ಇವನ್ನು ನೈಜ ಘಟನೆಯಂತೆ ಬಿಂಬಿಸಲು ಸೇರಿಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಕ್ಯು 1ರಲ್ಲಿ, 38 ಸೆಕೆಂಡ್ ಅವಧಿಯ ಯೂಟ್ಯೂಬ್ ವಿಡಿಯೋದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ನಯ್ಯ ಕುಮಾರ್, ದೇಶ ವಿರೋಧಿ ಘೋಷಣೆ ಕೂಗುವ ದೃಶ್ಯವಿದೆ. ಕ್ಯು 2ರಲ್ಲಿ ದೃಶ್ಯ ಮತ್ತು ಧ್ವನಿ ಸ್ಪಷ್ಟವಾಗಿಲ್ಲ. ಆದರೆ ಇದನ್ನು ತಿರುಚಿ, ನೈಜ ಎಂಬಂತೆ ಬಿಂಬಿಸಲಾಗಿದೆ ಎಂದು ವರದಿ ತಿಳಿಸಿದೆ.

ಟ್ರುಥ್‌ಲ್ಯಾಬ್ಸ್ ಎಂಬ ಸಂಸ್ಥೆ ಈ ವಿಧಿವಿಜ್ಞಾನ ಪ್ರಯೋಗ ನಡೆಸಿದ್ದು ಫೆ.18ರಂದು ಐದು ವಿಡಿಯೋಗಳನ್ನು ಹಾಗೂ ಫೆ.22ರಂದು ಮತ್ತೆರಡು ವಿಡಿಯೋಗಳನ್ನು ಸಲ್ಲಿಸಿದೆ.

 ಈ ವರದಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಎಚ್‌ಆರ್‌ಡಿ ಸಚಿವಾಲಯ, ಶಿಲ್ಪಿ ತಿವಾರಿ ಖಾಸಗಿ ನೆಲೆಯಲ್ಲಿ ಸ್ಮತಿ ಇರಾನಿಗೆ ಸಹಾಯ ಮಾಡಿರಬಹುದು ಎಂದು ತಿಳಿಸಿದೆ. ಆಕೆಗೆ ಅಧಿಕೃತವಾಗಿ ಯಾವುದೇ ಕಾರ್ಯ ವಹಿಸಿಲ್ಲ. ಈ ಹಿಂದೆ ಆಕೆಗೆ ಹುದ್ದೆಯ ಪ್ರಸ್ತಾಪ ನೀಡಲಾಗಿತ್ತು. ಆದರೆ ಆಕೆ ಒಪ್ಪಿಕೊಂಡಿಲ್ಲ ಎಂದು ಎಚ್‌ಆರ್‌ಡಿ ಇಲಾಖೆಯ ವಕ್ತಾರ ಘನಶ್ಯಾಂ ಗೋಯೆಲ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X