ಸಾಕ್ಷಿ ಮಹಾರಾಜ್ಗೆ ಕೊಲೆ ಬೆದರಿಕೆ

ಉನ್ನಾವ್,ಮಾ.4: ವಿವಾದಾತ್ಮಕ ಹೇಳಿಕೆ ನೀಡಿ ಸದಾಸುದ್ದಿಯಲ್ಲಿರುವ ಬಿಜೆಪಿ ಸಂಸದ ಸಾಕ್ಷಿಮಹಾರಾಜ್ಗೆ ಬಾಂಬ್ಸ್ಫೋಟಿಸಿ ಕೊಲ್ಲುವ ಬೆದರಿಕೆ ಹಾಕಲಾಗಿದೆ. ಅಜ್ಞಾತ ನಂಬರ್ನಿಂದ ಫೋನ್ ಮಾಡಿದ ವ್ಯಕ್ತಿ ಸಾಕ್ಷಿಯನ್ನು ವಾಚಾಮಗೋಚರ ಬೈದಿದ್ದಾನೆ.
ಚುನಾವಣೆ ಮುಗಿಯಲ್ಲಿ ನಿಮ್ಮನ್ನು ಬಾಂಬಿಟ್ಟು ಕೊಲ್ಲಲಾಗುವುದು ಎಂದಿದ್ದಾನೆ. ಈ ಕುರಿತು ಅವರು ಉನ್ನಾವ್ ಕೋತ್ವಾಲಿ ಠಾಣೆಗೆ ದೂರು ನೀಡಿದ್ದಾರೆ.
ಜನಸತ್ತಾದ ವರದಿ ಪ್ರಕಾರ, ತನ್ನ ಆಪ್ತ ಕಾರ್ಯದರ್ಶಿ ಅಶೋಕ್ರ ಬಳಿಯಿದ್ದ ತನ್ನ ಮೊಬೈಲ್ಗೆ ನಿನ್ನೆ ರಾತ್ರಿ ಸುಮಾರು 9:11ರ ವೇಳೆಗೆ 240940693 ನಂಬರ್ನಿಂದ ಕರೆ ಬಂದಿತ್ತು.
ಕರೆ ಮಾಡಿದ ವ್ಯಕ್ತಿ ಮಾರ್ಚ್ 11 ರನಂತರ ನಿಮ್ಮನ್ನು ಬಾಂಬಿಟ್ಟು ಕೊಲ್ಲಲಾಗುವುದು ಎಂದು ಹೇಳಿದ್ದಾನೆಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಕೋತ್ವಾಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
Next Story