Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಾಣದ ಹಂಗು ತೊರೆದು ಹೋರಾಡಿದ ಮಂಝೂರ್...

ಪ್ರಾಣದ ಹಂಗು ತೊರೆದು ಹೋರಾಡಿದ ಮಂಝೂರ್ ಅಹ್ಮದ್

ವಾರ್ತಾಭಾರತಿವಾರ್ತಾಭಾರತಿ5 March 2017 4:04 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಪ್ರಾಣದ ಹಂಗು ತೊರೆದು ಹೋರಾಡಿದ ಮಂಝೂರ್ ಅಹ್ಮದ್

ತ್ರಾಲ್,ಮಾ.5: ತ್ರಾಲ್‌ನಲ್ಲಿ ಉಗ್ರರನ್ನು ಸದೆಬಡಿಯುವ ವೇಳೆ ಹುತಾತ್ಮರಾದ ಜಮ್ಮುಕಾಶ್ಮೀರ ಪೊಲೀಸ್ ಪಡೆಯ ಕಾನ್ಸ್‌ಸ್ಟೇಬಲ್ 33 ವರ್ಷ ವಯಸ್ಸಿನ ಮಂಝೂರ್ ಅಹ್ಮದ್ ನಾಯ್ಕ್, ಶೀಘ್ರದಲ್ಲೇ ತಂದೆಯಾಗಲಿದ್ದರು.ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಮನೆಯೊಂದರಲ್ಲಿ ಅವಿತಿದ್ದ ಉಗ್ರರನ್ನು ಹೊರದಬ್ಬುವ ಮೊದಲನೆ ಪ್ರಯತ್ನದಲ್ಲಿ ಗುಂಡಿನ ಸುರಿಮಳೆಯ ನಡುವೆಯೂ ಅಚ್ಚರಿಕರವಾದ ರೀತಿಯಲ್ಲಿ ಪಾರಾದ ಅವರು, ಎರಡನೆ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡರು.

 ಅವಿತಿದ್ದ ಉಗ್ರರ ಮೇಲೆ ದಾಳಿ ನಡೆಸಲು ಸಜ್ಜಾದ ಪೊಲೀಸ್,ಸೇನೆ ಹಾಗೂ ಸಿಆರ್‌ಪಿಎಫ್ ತಂಡದಲ್ಲಿ ಮಂಝೂರ್ ಮುಂಚೂಣಿಯಲ್ಲಿದ್ದರು. ಭಾರೀ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿದ್ದ ಉಗ್ರರನ್ನು ಮಟ್ಟಹಾಕಲು ಇಡೀ ಮನೆಯನ್ನೇ ಸ್ಫೋಟಕಗಳಿಂದ ಸ್ಫೋಟಿಸಿ ಕೆಡವಲು ಸೇನಾಧಿಕಾರಿಗಳು ನಿರ್ಧರಿಸಿದರು.

  ಸ್ಫೋಟಕಗಳನ್ನು ಮನೆಯ ಸುತ್ತಲೂ ಇರಿಸುವ ಕೆಲಸವನ್ನು ನಿರ್ವಹಿಸಲು ಮಂಝೂರ್ ತಾನಾಗಿಯೇ ಮುಂದೆಬಂದರು. ಇದೊಂದು ಅಪಾಯಕಾರಿಯಾದ ಕೆಲಸವಾಗಿದ್ದು, ಇದರಲ್ಲಿ ಸಾವನ್ನಪ್ಪುವ ಅಪಾಯವೂ ಇದೆ ಹಾಗೂ ಇಂತಹ ಅಪಾಯವನ್ನು ತೆಗೆದುಕೊಳ್ಳಬಾರದೆಂದು ಸೇನಾಧಿಕಾರಿಗಳು ಎಚ್ಚರಿಕೆ ನೀಡಿದರು. ಧೃತಿಗೆಡದ ಮಂಝೂರ್ ‘ಕೋಯಿ ಬಾತ್ ನಹೀ’ (ಚಿಂತಿಸಬೇಡಿ) ಎನ್ನುತ್ತಾ ಮನೆಯ ಸುತ್ತ ಸ್ಫೋಟಕಗಳನ್ನು ಇರಿಸುವ ಹೊಣೆಯನ್ನು ವಹಿಸಿಕೊಂಡರು.

ಇತ್ತ ಮನೆಯೊಳಗಿಂದ ಉಗ್ರರು ಎಡೆಬಿಡದೆ ಗುಂಡುಹಾರಿಸುತ್ತಿದ್ದರೂ, ಹಿಮ್ಮೆಟ್ಟದ ಮಂಝೂರ್ ಕತ್ತಲಮರೆಯಲ್ಲಿ ತೆವಳುತ್ತಾ ಸಾಗಿಬಂದು ಮನೆಯ ಸುತ್ತಲೂ ಸ್ಫೋಟಕಗಳನ್ನು ಇರಿಸಿದರೆಂದು ಹಿರಿಯ ಸೇನಾಧಿಕಾರಿಯೊಬ್ಬರು ಸ್ಮರಿಸಿಕೊಂಡಿದ್ದಾರೆ. ಉಗ್ರರು ಎಕೆ47 ರೈಫಲ್‌ಗಳಿಂದ ಗುಂಡುಹಾರಿಸುತ್ತಿದ್ದರೂ, ಯಶಸ್ವಿಯಾಗಿ ಪಾರಾಗಿದ್ದರು.

  ಆದರೆ ಅವರು ಇರಿಸಿದ್ದ ಸ್ಫೋಟಕವು ಮನೆಯ ಒಂದು ಭಾಗವನ್ನಷ್ಟೇ ಉರುಳಿಸಲು ಸಫಲವಾಯಿತು. ಆನಂತರ ಉಗ್ರರು ಮತ್ತು ಭದ್ರತಾ ಪಡೆಗಳ ಕಾಳಗ ಸುಮಾರು ರಾತ್ರಿ 2 ಗಂಟೆಯವರೆಗೂ ಮುಂದುವರಿಯಿತು. ಆ ಬಳಿಕ ಮನೆಯೊಳಗಿಂದ ಗುಂಡೆಸೆತ ಒಮ್ಮಿಂದೊಮ್ಮೆಗೆ ನಿಂತಿತು. ಆನಂತರ ಭದ್ರತಾಪಡೆಗಳು ಇನ್ನೂ ಎರಡು ತಾಸುಗಳ ಕಾಲ ಪ್ರತಿಕ್ರಿಯೆಗಾಗಿ ಕಾದುಕುಳಿತಿದ್ದವು. ಬಳಿಕ ಹಠಾತ್ತನೆ ಮನೆಯೊಳಗಿಂದ ಹಾರಿಬಂದ ಗುಂಡೊಂದು ಸೇನಾ ಮೇಜರ್ ಒಬ್ಬರನ್ನು ಗಂಭೀರವಾಗಿ ಗಾಯಗೊಳಿಸಿತು. ಮಂಝೂರ್ ಅಹ್ಮದ್ ಮತ್ತೊಮ್ಮೆ ಮನೆಯ ಸಮೀಪಕ್ಕೆ ತೆರಳಿ ಸ್ಫೋಟಕಗಳನ್ನು ಇರಿಸುವ ಸಾಹಸಕ್ಕೆ ಮುಂದಾದರು. ಅವರು ಮನೆಯ ಸಮೀಪಕ್ಕೆ ತೆವಳುತ್ತಾ ಸಾಗುತ್ತಿದ್ದಂತೆಯೇ ಅವರೆಡೆಗೆ ಉಗ್ರರು ಗುಂಡುಗಳ ಸುರಿಮಳೆಗೈದರು. ತನಗಾದ ಗಂಭೀರಗಾಯಗಳನ್ನು ಲೆಕ್ಕಿಸದೆಯೇ ಮಂಝೂರ್, ಮನೆಯ ಉಳಿದ ಭಾಗದ ಬಳಿ ಸ್ಫೋಟಕಗಳನ್ನು ಇರಿಸಿ, ಕೊನೆಯುಸಿರೆಳೆದರು.

 ನಾಲ್ಕು ವರ್ಷದ ಪುತ್ರ, ಗರ್ಭಿಣಿ ಪತ್ನಿ ಹಾಗೂ ಇಬ್ಬರು ನಿರುದ್ಯೋಗಿ ಸಹೋದರರನ್ನು ಅಗಲಿರುವ ನಾಯ್ಕ್, ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದಾರೆ.

ಹೆರಿಗೆಯ ನಿರೀಕ್ಷೆಯಲ್ಲಿರುವ ತನ್ನ ಪತ್ನಿಯೊಂದಿಗಿರಲು ನಾಯ್ಕ್ ರಜೆಯಲ್ಲಿ ತೆರಳಲಿದ್ದರು. ಆದರೆ ತ್ರಾಲ್‌ನಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.

ನಾಯ್ಕ್‌ರಂತಹ ದಿಟ್ಟ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಅತ್ಯಂತ ವಿಷಾದಕರವಾಗಿದೆ.ತನ್ನ ಕರ್ತವ್ಯ ಹಾಗೂ ತಾಯ್ನಡಿಗೆ ಅವರು ತೋರಿದ ಪ್ರೀತಿ ಎಂದೂ ವ್ಯರ್ಥವಾಗದು. ಈ ಕಾನ್ಸ್‌ಸ್ಟೇಬಲ್ ಮಾಡಿರುವ ಪರಮೋನ್ನತ ತ್ಯಾಗವು ಜಮ್ಮುಕಾಶ್ಮೀರದ ಪೊಲೀಸ್ ಪಡೆಗೆ ನೈತಿಕ ಸ್ಥೈರ್ಯವನ್ನು ತುಂಬಲಿದೆಯೆಂದು ಜಮ್ಮುಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವೈದ್ ಹೇಳಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X