Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ .. ಮೆಣಸೇ .....!

ಓ .. ಮೆಣಸೇ .....!

ವಾರ್ತಾಭಾರತಿವಾರ್ತಾಭಾರತಿ6 March 2017 12:28 AM IST
share
ಓ .. ಮೆಣಸೇ .....!

  ಯಾವುದೇ ಕಾರಣಕ್ಕೂ ರೌಡಿಸಂಗೆ ಪೊಲೀಸರು ಬೆಂಬಲ ನೀಡಬಾರದು
-ಡಾ. ಜಿ.ಪರಮೇಶ್ವರ್, ಸಚಿವ
  ಬೆಂಬಲ ನೀಡುವುದು ರಾಜಕಾರಣಿಗಳ ಹಕ್ಕೇ?
---------------------
  ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು
-ಅಮರನಾಥ ಶೆಟ್ಟಿ, ಮಾಜಿ ಸಚಿವ
  ಅಮಾನ್ಯಗೊಂಡ ನಾಣ್ಯದ ಹೇಳಿಕೆ.
---------------------
  ಉ.ಪ್ರ.ದಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವುದು ಅತೀ ದೊಡ್ಡ ಪ್ರಮಾದ
-ಉಮಾಭಾರತಿ, ಕೇಂದ್ರ ಸಚಿವ
  ಸೋಲಿಸುವುದಕ್ಕಾಗಿಯೇ ಕಣಕ್ಕಿಳಿಸುವುದಕ್ಕಿಂತ ಇಳಿಸದಿರುವುದು ವಾಸಿಯಲ್ಲವೇ?
---------------------
  ಕಾಂಗ್ರೆಸ್‌ನವರು ಏನೇ ಮಾಡಿದರೂ ಈ ಯಡಿಯೂರಪ್ಪ ಬಗ್ಗುವುದಿಲ್ಲ
-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
 ಅದಕ್ಕೇ ಈಶ್ವರಪ್ಪ ಅವರಿಗೆ ಆ ಕೆಲಸ ಕೊಟ್ಟಿರುವುದು.
---------------------
  ಭಾರತಕ್ಕೆ ಐಸಿಸ್ ಹೆದರಿಕೆಯಿಲ್ಲ
-ರಾಜನಾಥ್ ಸಿಂಗ್, ಗೃಹ ಸಚಿ
  ಭಾರತಕ್ಕಿರುವುದು ಆರೆಸ್ಸೆಸ್‌ನ ಹೆದರಿಕೆ.
---------------------
  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ ಇದೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
  ನಿಮಗೆ ಮಾತ್ರ ಯಾವ ಪಕ್ಷಗಳಲ್ಲೂ ಅವಕಾಶ ಇರುವಂತಿಲ್ಲ.
---------------------
  ‘ಚಪ್ಪಲಿ ಹೇಳಿಕೆ’ ಜಾನಪದ ನುಡಿಮುತ್ತಿನಂತೆ
-ಯು.ಟಿ.ಖಾದರ್, ಸಚಿವ
  ಜಾಣನ ಪದ.
---------------------
  ಶೋಭಾ ಕರಂದ್ಲಾಜೆಯವರೇ, ನನ್ನ ಜೊತೆ ಹುಡುಗಾಟ ಆಡಬೇಡಿ
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
  ವಯಸ್ಸಾದ ಇಬ್ಬರೂ ಹುಡುಗರಂತೆ ಆಟ ಆಡೋದು ತಪ್ಪು.
---------------------
  ನಕ್ಸಲರು ಮತದಾನದಿಂದ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಬಹುದು
-ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ
  ಸ್ವಾಮೀಜಿಗಳೂ ಆ ಹಕ್ಕನ್ನು ಮತದಾನಗಳಿಂದಲೇ ಯಾಕೆ ಪಡೆಯಬಾರದು?
---------------------
  ನಾನು ಹಾಲಿನಲ್ಲಿ ಎಣ್ಣೆಯಾಗಿರದೆ ಸಕ್ಕರೆಯಾಗಿರುತ್ತೇನೆ
-ಪ್ರಮೋದ್ ಹೆಗಡೆ, ಬಿಜೆಪಿ ಸೇರಿದ ನಾಯಕ
  ಆಲ್ಕೋ-ಹಾಲಿನಲ್ಲಿರುವ ಐಸಿನ ತುಂಡಿನಂತೆ ಎಂದಿದ್ದರೆ ಅಬಕಾರಿ ಇಲಾಖೆಗೆ ಲಾಭವಾಗುತ್ತಿತ್ತು.
---------------------
  ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ
-ವಿ.ಸುನೀಲ್ ಕುಮಾರ್, ಶಾಸಕ
  ಬಜರಂಗಿಗಳ ಅಸಾಂಸ್ಕೃತಿಕ ಚಟುವಟಿಕೆಗಳಿಂದ ಉಳಿಸುವ ಉದ್ದೇಶವೇ?
---------------------
  ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರವನ್ನು ಮನೆಮನೆಗೂ ತಲುಪಿಸುತ್ತೇನೆ
-ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
  ಮನೆಮನೆಯಲ್ಲೂ ನಿಮ್ಮ ಭ್ರಷ್ಟಾಚಾರದ ಕತೆ ಬಾಯಿ ಪಾಠ.
---------------------
  ಯಡಿಯೂರಪ್ಪ, ಅನಂತ್‌ಕುಮಾರ್ ಅವರಿಗಿಂತ ನನಗೆ ಪಕ್ಷ ಮುಖ್ಯ
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
  ಯಾವ ಪಕ್ಷ ಎನ್ನುವುದನ್ನೂ ಸ್ಪಷ್ಟಗೊಳಿಸಿ.
---------------------
  ರಾಜಕೀಯ ಪಕ್ಷಗಳು ಹೈಕಮಾಂಡ್‌ಗೆ ಕಪ್ಪ ಕೊಡೋದಿಲ್ಲ ಅಂದರೆ ಆತ್ಮವಂಚನೆ ಮಾಡಿಕೊಂಡಂತೆ
-ರಮೇಶ್ ಕುಮಾರ್, ಸಚಿವ
  ಆತ್ಮವೇ ಇಲ್ಲದವರಿಂದ ವಂಚನೆ ಎಲ್ಲಿ ಬಂತು?
---------------------
  ಕೇರಳದಲ್ಲಿ ದೇಶಪ್ರೇಮಿಗಳು ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ
-ಮಾ.ವೆಂಕಟರಾವ್, ಆರೆಸ್ಸೆಸ್ ದಕ್ಷಿಣ ಪ್ರಾಂತ ಸರಸಂಘ ಚಾಲಕ
  ನೀವೆಲ್ಲ ಇಷ್ಟು ಧೈರ್ಯದಿಂದ ಓಡಾಡುತ್ತಿರುವಾಗ ಇನ್ನೇನಾದೀತು?
---------------------
  ಚಿತ್ರರಂಗದಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಹೇಳುವಷ್ಟು ದೊಡ್ಡ ಮನುಷ್ಯ ನಾನಲ್ಲ
-ಶಿವರಾಜ್‌ಕುಮಾರ್, ನಟ
  ಯಾರು ಕೆಟ್ಟ ನಟರು ಎನ್ನುವುದನ್ನು ಹೇಳುವ ದೊಡ್ಡ ಜನರು ಪ್ರೇಕ್ಷಕರಲ್ಲಿ ಇನ್ನೂ ಇದ್ದಾರೆ.
---------------------
 ಕಾಂಗ್ರೆಸ್‌ಗೆ ನಾನೆಂದ್ರೆ ಹೆದರಿಕೆ
-ಜನಾರ್ದನ ರೆಡ್ಡಿ, ಮಾಜಿ ಸಚಿವ
  ಬಿಜೆಪಿಗೂ.
---------------------
  ನಾನು ಇದುವರೆಗೆ ಕೋಟಿ ರೂಪಾಯಿ ನೋಡಿಯೇ ಇಲ್ಲ
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
  ನೀವು ಏನೇನೂ ನೋಡಿದ್ದೀರಿ ಎನ್ನುವುದು ಮಾಧ್ಯಮಗಳಲ್ಲಿ ಚಿತ್ರ ಸಹಿತ ಪ್ರಕಟವಾಗಿದೆ ಬಿಡಿ.

---------------------
  ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದು ಹಳೆಯ ಕಾಂಗ್ರೆಸ್. ಈಗ ಇರುವುದು ತಿನ್ನುವ ಕಾಂಗ್ರೆಸ್
-ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
 ಮನುಷ್ಯರನ್ನು ತಿನ್ನುವ ಆರೆಸ್ಸೆಸ್‌ಗಿಂತ ವಾಸಿ.
---------------------
  ಸಾಂಸ್ಕೃತಿಕ ಲೋಕದಲ್ಲಿ ಒಳ ರಾಜಕೀಯ ಹೆಚ್ಚಾಗಿದೆ
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕ.ಅ.ಪ್ರಾಧಿಕಾರದ ಅಧ್ಯಕ್ಷ
ರಾಜಕೀಯದೊಳಗೆ ಸಾಂಸ್ಕೃತಿಕ ಲೋಕ ಎಂದರೆ ಚೆನ್ನ.

---------------------
  ಮನೆಯಲ್ಲಿ ನಾಯಿ ಸಾಕುವುದು ಈಗ ಫ್ಯಾಶನ್ ಆಗಿದೆ. ಇದರ ಬದಲು ದನಗಳನ್ನು ದತ್ತು ಪಡೆಯಬಹುದು
   -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ನೀವು ಗೋರಕ್ಷಣೆಗಾಗಿ ಸಾಕಿರುವ ಸಂಘಪರಿವಾರ ಕಾರ್ಯಕರ್ತರಿಗೆಲ್ಲ ಒಂದೊಂದು ದನ ದತ್ತು ಕೊಟ್ಟು ಬಿಡಿ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X