Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಒಂದೇ ವರ್ಷದಲ್ಲಿ ಕಾರ್ಪೋರೇಟ್‌ ವಲಯಕ್ಕೆ...

ಒಂದೇ ವರ್ಷದಲ್ಲಿ ಕಾರ್ಪೋರೇಟ್‌ ವಲಯಕ್ಕೆ ರೂ.6 ಲಕ್ಷ ಕೋಟಿ ವಿನಾಯಿತಿ!

ವಾರ್ತಾಭಾರತಿವಾರ್ತಾಭಾರತಿ6 March 2017 11:42 AM IST
share
ಒಂದೇ ವರ್ಷದಲ್ಲಿ ಕಾರ್ಪೋರೇಟ್‌ ವಲಯಕ್ಕೆ ರೂ.6 ಲಕ್ಷ ಕೋಟಿ ವಿನಾಯಿತಿ!

ಹೊಸದಿಲ್ಲಿ, ಮಾ.6: ಕಳೆದ ಹಣಕಾಸು ವರ್ಷದಲ್ಲಿ (2015–16) ಕೇಂದ್ರ ಸರಕಾರವು ದೇಶದ ಉದ್ಯಮ ವಲಯಕ್ಕೆ ನೀಡಿದ ಪ್ರತ್ಯಕ್ಷ, ಪರೋಕ್ಷ ತೆರಿಗೆ ರಿಯಾಯಿತಿಗಳ ಒಟ್ಟು ಮೊತ್ತವು ಹೆಚ್ಚು ಕಡಿಮೆ ಐದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ವ್ಯಕ್ತಿಗತ ಆದಾಯ ತೆರಿಗೆ ರಿಯಾಯಿತಿ ಮೊತ್ತ 55,366 ಕೋಟಿ ರೂ. ಮತ್ತು ಇತರೆ ರಿಯಾಯಿತಿಗಳ ಲೆಕ್ಕ ಹಿಡಿದರೆ ಈ ಮೊತ್ತ 6 ಲಕ್ಷ ಕೋಟಿ ರೂ. ದಾಟುತ್ತದೆ.  2017-18ರ ಬಜೆಟ್‌ನಲ್ಲಿ  ಈ ಮಾಹಿತಿ ಇದೆ.

ಪರೋಕ್ಷ ತೆರಿಗೆಗಳ ಪೈಕಿ ಅಬಕಾರಿ ಸುಂಕದ ಸಂಬಂಧದಲ್ಲಿ ನೀಡಲಾದ ರಿಯಾಯಿತಿ ಮೊತ್ತ ರೂ.2,24,940 ಕೋಟಿ. ಕಸ್ಟಮ್ಸ್ ಸುಂಕಗಳ ರಿಯಾಯಿತಿ  ರೂ. 2,57, 549 ಕೋಟಿ. 2.25 ಕೋಟಿ ವ್ಯಕ್ತಿಗತ  ತೆರಿಗೆದಾರರಿಗೆ ನೀಡಿದ ರಿಯಾಯಿತಿ ರೂ. 55,366 ಕೋಟಿ.

ಶಾಸನಾತ್ಮಕ ಕಾರ್ಪೊರೇಟ್ ತೆರಿಗೆ ದರಗಳನ್ನು ಶೇ. 24.67ಕ್ಕೆ ಕಡಿತಗೊಳಿಸಿ, ಈ ಕಂಪೆನಿಗಳಿಗೆ ಒಟ್ಟು ರೂ.68,711 ಕೋಟಿಗಳಷ್ಟು  ರಿಯಾಯಿತಿ ನೀಡಲಾಗಿದೆ. ಇಂತಹ ಕಂಪೆನಿಗಳ ಸಂಖ್ಯೆ 5.82 ಲಕ್ಷ. ಕಾರ್ಪೊರೇಟ್ ವ್ಯಾಖ್ಯಾನದಡಿ ಬಾರದ ಪಾಲುದಾರ ಉದ್ಯಮ ಸಂಸ್ಥೆಗಳು, ವ್ಯಕ್ತಿಗಳೇ ಸೇರಿ ನಡೆಸುವ ಒಟ್ಟು 7.59 ಲಕ್ಷ ಉದ್ಯಮಗಳಿಗೆ ನೀಡಿರುವ ತೆರಿಗೆ ರಿಯಾಯಿತಿ ರೂ. 4,561 ಕೋಟಿ.

‘ಬಿಟ್ಟುಕೊಡಲಾದ ಆದಾಯ’ ಎಂದರೆ  ‘ಆದ್ಯತೆಯ ತೆರಿಗೆದಾರರಿಗೆ ಒದಗಿಸುವ ಪರೋಕ್ಷ ಸಹಾಯಧನ (ಸಬ್ಸಿಡಿ)’ ಎಂದು ಬಜೆಟ್‌ನಲ್ಲಿ  ಬಣ್ಣಿಸಲಾಗಿದೆ.ತೆರಿಗೆ ನೀತಿ ಮತ್ತು ತೆರಿಗೆ ವೆಚ್ಚಗಳಲ್ಲಿ ಪಾರದರ್ಶಕತೆ ತರುವ ಅಂಗವಾಗಿ ‘ಬಿಟ್ಟುಕೊಡಲಾದ ಆದಾಯ’ದ ಮೊತ್ತದ ವಿವರಗಳನ್ನು 2006–07ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಯಿತು. 2014–15ರ ತನಕ ಪ್ರತಿ ವರ್ಷವೂ ಈ ವಿವರಗಳು ‘ಬಿಟ್ಟುಕೊಡಲಾದ ಆದಾಯ’ ಶೀರ್ಷಿಕೆಯಡಿ ಬೆಳಕು ಕಾಣುತ್ತಿದ್ದವು. 2015–16ರಲ್ಲಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಈ ತಲೆಬರಹ ಬದಲಿಸಿತು. ‘ಕೇಂದ್ರೀಯ ತೆರಿಗೆ ವ್ಯವಸ್ಥೆಯಡಿ ನೀಡಲಾಗುವ ತೆರಿಗೆ ಪ್ರೋತ್ಸಾಹ ಕ್ರಮಗಳು ಸರ್ಕಾರಿ ಆದಾಯದ ಮೇಲೆ ಉಂಟು ಮಾಡುತ್ತಿರುವ ಪ್ರಭಾವ’ ಎಂದು ಕರೆಯಿತು. ಹೆಸರು ಯಾವುದಾದರೇನು, ‘ಬಿಟ್ಟುಕೊಡಲಾದ ಆದಾಯ’ವೇ ಅದರ ತಿರುಳಾಗಿತ್ತು.

2015ರ ನವೆಂಬರ್ 30ರ ತನಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾದ ಕಾರ್ಪೊರೇಟ್ ಆದಾಯ ತೆರಿಗೆ ಪಾವತಿ ಸಂಖ್ಯೆ 5.82 ಲಕ್ಷ. ಆ ಹಣಕಾಸಿನ ಸಾಲಿನಲ್ಲಿ ನಿರೀಕ್ಷಿಸಲಾಗಿದ್ದ ಪಾವತಿಗಳ ಶೇ..90ರಷ್ಟು ಪ್ರಮಾಣವಿದು. ಈ ಕಂಪೆನಿ  ನೀಡಬೇಕಿದ್ದ ಕಾರ್ಪೊರೇಟ್ ತೆರಿಗೆಯ ಒಟ್ಟು ಮೊತ್ತರೂ.2,98,205 ಕೋಟಿ. ಜೊತೆಗೆ ರೂ.32,262 ಕೋಟಿಗಳಷ್ಟು ಲಾಭಾಂಶ ಪಾವತಿ ತೆರಿಗೆಯನ್ನೂ ಈ ಕಂಪೆನಿಗಳು ಸಂದಾಯ ಮಾಡಬೇಕಿತ್ತು.

ಆದರೆ, ಈ ಕಂಪೆನಿಗಳ ಪೈಕಿ ಶೇ..53ರಷ್ಟು ಕಂಪೆನಿಗಳು ಒಟ್ಟು ರೂ.12,08,658 ಕೋಟಿ ತೆರಿಗೆಸಹಿತ ಲಾಭವನ್ನು ಘೋಷಿಸಿದ್ದವು. ಶೇ. 44ರಷ್ಟು ಕಂಪೆನಿಗಳು ರೂ. 4.76 ಲಕ್ಷ ಕೋಟಿ ನಷ್ಟವನ್ನು ಘೋಷಿಸಿದವು. ಶೇ. 3ರಷ್ಟು ಕಂಪೆನಿಗಳು ಲಾಭವೂ ಇಲ್ಲ, ನಷ್ಟವೂ ಆಗಿಲ್ಲ ಎಂದವು. ತೆರಿಗೆ ರಿಯಾಯಿತಿಯ ಲಾಭವನ್ನು ದೇಶದ ಕಾರ್ಪೊರೇಟ್ ವಲಯ ಸತತವಾಗಿ ಪಡೆಯುತ್ತ ಬಂದಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2009–10ರಲ್ಲಿ ಈ ರಿಯಾಯಿತಿಗಳ ತಳಹದಿ ಇನ್ನಷ್ಟು ವಿಸ್ತರಿಸಿತೇ ವಿನಾ ತಗ್ಗಲಿಲ್ಲ. 2012–13ರ ಸಾಲಿನ ಹೊತ್ತಿಗೆ ಇಂತಹ ರಿಯಾಯಿತಿಗಳ ಒಟ್ಟು ಮೊತ್ತ ರೂ. 5,73,627  ಕೋಟಿ. ಆದ್ಯತೆಯ ತೆರಿಗೆ ಪಾವತಿದಾರರಿಗೆ ನೀಡಲಾದ ಪರೋಕ್ಷ ಸಬ್ಸಿಡಿ’ ಇದು  ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕಂಪೆನಿಗಳ ಸಂಖ್ಯೆ ವರ್ಷ ವರ್ಷ ಹೆಚ್ಚುತ್ತ ನಡೆದಂತೆ ಕಾರ್ಪೊರೇಟ್ ತೆರಿಗೆ ದರ ಇಳಿಯತ್ತ ಸಾಗಿದೆ. ಬಿಟ್ಟುಕೊಡಲಾದ ಈ ಆದಾಯದ ಅಗಾಧತೆ ಮನಗಾಣಬೇಕಿದ್ದರೆ ಈ ಮೊತ್ತವನ್ನು ಇತರೆ ಅತ್ಯಗತ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ನೀಡಲಾಗುವ ಹಣದ ಮೊತ್ತಗಳೊಂದಿಗೆ ಹೋಲಿಸಿ ನೋಡಬೇಕು. ಆಭರಣಗಳು ಮತ್ತು ಅಮೂಲ್ಯ ಹರಳುಗಳ ವ್ಯಾಪಾರ ಮಾಡುವ ಕಂಪೆನಿಗಳಿಗೆ ಹಾಲಿ ಬಜೆಟ್‌ನಲ್ಲಿ ನೀಡಲಾಗಿರುವ ಎಕ್ಸೈಸ್ ಸುಂಕ ವಿನಾಯಿತಿಯ ಮೊತ್ತವೇ ರೂ. 61,126 ಕೋಟಿಗಳು. ದೇಶದ ಒಂದೂವರೆ ಲಕ್ಷ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಬಜೆಟ್‌ನಲ್ಲಿ ನೀಡಲಾಗಿರುವ ಹಣ ರೂ. 6,050 ಕೋಟಿ. ಆಭರಣಗಳು ಮತ್ತು ಅಮೂಲ್ಯ ಹರಳುಗಳಿಗೆ ನೀಡಲಾಗಿರುವ ಸುಂಕ ವಿನಾಯಿತಿಯ ಮೊತ್ತದಲ್ಲಿ ಹತ್ತು ವರ್ಷಗಳ ಕಾಲ ಕುಡಿಯುವ ನೀರಿನ ಯೋಜನೆಗಳಿಗೆ ಹಣ ಹಂಚಿಕೆ ಮಾಡಬಹುದಿತ್ತು. ಬಿಟ್ಟುಕೊಡಲಾದ ಆದಾಯವಾದ ಒಟ್ಟು ರೂ. 6 ಲಕ್ಷ ಕೋಟಿಗಳ ಲೆಕ್ಕ ಹಿಡಿದಿದ್ದರೆ ಮುಂದಿನ 100 ವರ್ಷಗಳ ಕಾಲ ಈ ಹಳ್ಳಿಗಳಿಗೆ ಕುಡಿಯುವ ನೀರಿನ ಬಜೆಟ್ ಹಂಚಲು ಬಂದೀತು.

ಬಡಜನರಿಗೆ ಅಗ್ಗದ ದರದಲ್ಲಿ ಆಹಾರಧಾನ್ಯ ನೀಡುವ ಯೋಜನೆ ಉದಾರ ಆರ್ಥಿಕ ನೀತಿಯ ಪ್ರತಿಪಾದಕರಿಂದ ಭಾರಿ ಟೀಕೆಗೆ ಗುರಿಯಾಗಿದೆ.  ಈ ವರ್ಷದ ಬಜೆಟ್‌ನಲ್ಲಿ ಒಟ್ಟಾರೆ ಆಹಾರ ಸಬ್ಸಿಡಿಗೆಂದು ಹಂಚಿಕೆ ಮಾಡಲಾಗಿರುವ ಮೊತ್ತ ರೂ.1,45,339 ಕೋಟಿ. ಅರ್ಥಾತ್ ‘ಬಿಟ್ಟುಕೊಡಲಾಗಿರುವ ಆದಾಯ’ದ ನಾಲ್ಕನೆಯ ಒಂದು ಭಾಗದಷ್ಟು.

ಹಾಗೆಯೇ ಕೋಟ್ಯಂತರ ನಿರುದ್ಯೋಗಿಗಳಿಗೆ ವರ್ಷದಲ್ಲಿ ನೂರು ದಿನಗಳ ಕಾಲ ಉದ್ಯೋಗ ಒದಗಿಸುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಒಟ್ಟು ಮೊತ್ತ ರೂ.48 ಸಾವಿರ ಕೋಟಿ. ‘ಬಿಟ್ಟುಕೊಡಲಾಗಿರುವ ಆದಾಯ’ವಾದ ರೂ.6ಲಕ್ಷ ಕೋಟಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು 6 ವರ್ಷ ನಡೆಸಬಹುದು.‘ಬಿಟ್ಟುಕೊಡಲಾದ ಆದಾಯ’ದ ಬಹಳಷ್ಟು ರಿಯಾಯಿತಿ- ವಿನಾಯಿತಿಗಳು ರಫ್ತು ಪ್ರೋತ್ಸಾಹಕ್ಕೆ, ಇಲ್ಲವೇ ಜನಕಲ್ಯಾಣದ ವೃದ್ಧಿಗೆ ಕಾಣಿಕೆ ನೀಡುವಂತಹವು. ಇವುಗಳನ್ನು ಬಿಟ್ಟುಕೊಡಲಾದ ಆದಾಯದ ಪಟ್ಟಿಗೆ ಸೇರಿಸಲೇಬಾರದು. ಖಾಸಗಿ ಕ್ಷೇತ್ರವನ್ನು ನಿಂದಿಸಿ, ಬಡಿದು ಬಾರಿಸುವ ಈ ಪ್ರವೃತ್ತಿ ಕೊನೆಯಾಗಬೇಕು’ ಎಂಬುದು ದೆಹಲಿಯ ನೀತಿ ನಿರ್ಧಾರಗಳ ಸಂಶೋಧನಾ ಕೇಂದ್ರದ (ಸೆಂಟರ್ ಫಾರ್ ಪಾಲಿಸಿ ರೀಸರ್ಚ್) ವಾದ. ಔಷಧಿಗಳು, ಹಲ್ಲುಪುಡಿ, ಮೇಣದಬತ್ತಿ, ಸೂಜಿಗಳು, ಸೀಮೆ ಎಣ್ಣೆ ಸ್ಟವ್‌ಗಳು ಮುಂತಾದ ಸಾಮೂಹಿಕ ಬಳಕೆಯ ಸರಕುಗಳಿಗೆ ತೆರಿಗೆ ಕಡಿತಗೊಳಿಸಿದರೆ ಅದರ ಲಾಭ ಕಾರ್ಪೊರೇಟುಗಳಿಗೆ ಸಿಗುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X