ಮಂಗಳೂರಿಗೆ ಮಾ9ರಂದು ಡಾ. ವೇಕ್ ಪಾಠಕ್ ಆಗಮನ

ಮಂಗಳೂರು, ಮಾ. 6: ಸ್ಟೀರೋಯ್ಡ ರಹಿತ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಬಲ್ಲ ದೇಶದ ಏಕೈಕ ವೈದ್ಯರೆಂಬ ಖ್ಯಾತಿ ಪಡೆದಿರುವ ಕೋಯಂಬತ್ತೂರಿನ ಡಾ. ವಿವೇಕ್ ಪಾಠಕ್ ಮಾ. 9ರಂದು ನಗರಕ್ಕೆ ಆಗುಸಲಿದ್ದಾರೆ.
ವಿಶ್ವ ಕಿಡ್ನಿ ದಿನಾಚರಣೆಯ ಅಂಗವಾಗಿ ಕಿಡ್ನಿ ರೋಗಿಗಳ ಸಂಘವು ನಗರದ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಿಡ್ನಿ ರೋಗಿಗಳ ಪ್ರತಿನಿಧಿ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ.
ವಿಶ್ವ ಕಿಡ್ನಿ ದಿನಾಚರಣೆಯ ಈ ವರ್ಷದ ಘೋಷಣೆ 'ಕಿಡ್ನಿ ಕಾಯಿಲೆ ಮತ್ತು ಬೊಜ್ಜು' ಎಂಬ ವಿಷಯದಲ್ಲಿ ಮಾತನಾಡಲಿರುವ ಡಾ. ಪಾಠಕ್, ಕಿಡ್ನಿ ರೋಗಿಗಳ ಜೊತೆಗೆ ಸಂವಾದ ನಡೆಸಲಿದ್ದಾರೆ ಎಂದು ಕಿಡ್ನಿ ಆರೋಗ್ಯ ಅಭಿಯಾನ ದ.ಕ. ಜಿಲ್ಲಾ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು. ಎಚ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





