Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ್ವೇಷ ಸಾಧನೆಗಾಗಿ ದರೋಡೆಯ ಸುಳ್ಳು ಕಥೆ !

ದ್ವೇಷ ಸಾಧನೆಗಾಗಿ ದರೋಡೆಯ ಸುಳ್ಳು ಕಥೆ !

ಪೊಲೀಸ್ ಇಲಾಖೆಯನ್ನು ಬೆಸ್ತು ಬೀಳಿಸಿದ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ6 March 2017 11:50 PM IST
share

ಉಪ್ಪಿನಂಗಡಿ, ಮಾ.6: ದ್ವೇಷ ಸಾಧನೆಗಾಗಿ ದರೋಡೆಯ ಸುಳ್ಳು ಕಥೆ ಸೃಷ್ಟಿಸಿದ ಲಾರಿ ಚಾಲಕನೋರ್ವ ಪೊಲೀಸ್ ಇಲಾಖೆಯನ್ನೇ ಬೇಸ್ತು ಬೀಳಿಸಿದಲ್ಲದೆ, ಪೊಲೀಸರ ಅಲೆದಾಟಕ್ಕೆ ಕಾರಣನಾದ ಘಟನೆ ರವಿವಾರ ನಡೆದಿದೆ. ಆದರೆ ಪೊಲೀಸರ ಕೂಲಂಕಷ ವಿಚಾರಣೆಯಿಂದಾಗಿ ಅಮಾಯಕರು ಶಿಕ್ಷೆಗೊಳಗಾಗುವುದು ತಪ್ಪಿದಂತಾಗಿದೆ.

 ಸುಳ್ಯ ಮೂಲದ ಗಣೇಶ ಎಂಬಾತ ಲಾರಿ ಚಾಲಕನಾಗಿದ್ದು, ರವಿವಾರ ಈತ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಂಡವೊಂದು ದರೋಡೆ ನಡೆಸಿ ಪರಾರಿಯಾಗಿದೆ ಎಂದು ಮಾಹಿತಿ ನೀಡಿ ಹಾಗೂ ದರೋಡೆ ನಡೆಸಿದ ತಂಡ ಸಂಚರಿಸಿದ ಕಾರೊಂದರ ನಂಬರ್ ನೀಡಿದ್ದ. ಈತ ನೀಡಿದ ಮಾಹಿತಿಯನ್ನಾಧರಿಸಿ ದರೋಡೆ ತಂಡವನ್ನು ಹಿಡಿಯಲು ಉಪ್ಪಿನಂಗಡಿ ಪೊಲೀಸರು ಭರ್ಜರಿ ತಯಾರಿ ನಡೆಸಿದ್ದರು.

 ಪೆರ್ನೆ ಸಮೀಪದ ಕಡಂಬು ಬಳಿ ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್ಸೈ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ, ಹೆದ್ದಾರಿ ಗಸ್ತು ದಳ ಹಾಗೂ ಪೊಲೀಸ್ ಸಿಬ್ಬಂದಿ ಹೀಗೆ ಪೊಲೀಸರ ದಂಡು ದರೋಡೆಕೋರರ ತಂಡವನ್ನು ಹಿಡಿಯಲು ಹೊಂಚು ಹಾಕಿ ಕುಳಿತಿತ್ತು. ಸಂಜೆಯಾಗುತ್ತಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈತ ನೀಡಿದ ನೀಡಿದ ನಂಬರ್‌ನ ಕಾರೊಂದು ಬಂದಿದ್ದು, ತಕ್ಷಣವೇ ಸಿನೆಮಾ ಶೈಲಿಯಲ್ಲಿ ಪೊಲೀಸರ ತಂಡ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿತು.

ಪೊಲೀಸರು ತಮ್ಮ ವಾಹನಕ್ಕೆ ಮುತ್ತಿಗೆ ಹಾಕಿರುವುದನ್ನು ಕಂಡು ಹೆದರಿ ಕಾರಿನ ಬಾಗಿಲು ತೆರೆಯಲೇ ಇಲ್ಲ. ಬಳಿಕ ಮತ್ತಷ್ಟು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಕಾರಿನ ಬಾಗಿಲನ್ನು ಒತ್ತಾಯವಾಗಿ ತೆರೆಸಿ, ಅದರಲ್ಲಿದ್ದ ಬೆಂಗಳೂರು ಮೂಲದ ಅಕ್ಷಯ್, ಶ್ರೀಧರ್, ನಾಗರಾಜ್ ಸೇರಿದಂತೆ ಒಟ್ಟು 9 ಜನರನ್ನು ವಶಕ್ಕೆ ಪಡೆದು, ಇವರ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಜೀಪಿನಲ್ಲಿ ಹಾಕಿ ಸಂಪ್ಯ ಠಾಣೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.

ಹೆದ್ದಾರಿ ದರೋಡೆಯ ತಂಡವೆಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ವಿಚಾರಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸಂಪ್ಯಕ್ಕೆ ಆಗಮಿಸುವ ತಯಾರಿಯು ನಡೆದಿತ್ತು. ಆದರೆ, ಠಾಣೆಯಲ್ಲಿ ಇವರ ಪ್ರಾಥಮಿಕ ವಿಚಾರಣೆಯಿಂದಲೇ ಸತ್ಯಾಂಶ ಬಯಲಾದಾಗ ಬೇಸ್ತು ಬೀಳುವ ಸರದಿ ಪೊಲೀಸರದ್ದಾಗಿತ್ತು.

 ಘಟನೆಯ ವಿವರ:

ಎರಡು ಕಾರುಗಳಲ್ಲಿ ಬೆಂಗಳೂರಿನ ತಂಡವೊಂದು ಮುರುಡೇಶ್ವರಕ್ಕೆ ತೆರಳಿ, ಅಲ್ಲಿಂದ ಅವರು ಕೊಡ್ಲಿಪೇಟೆಗೆ ತೆರಳುವವರಿದ್ದರು. ಗಣೇಶ್ ಎಂಬಾತ ಲಾರಿಯಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದ. ಈ ನಡುವೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಕಾರಿನಲ್ಲಿದ್ದವರು ಲಾರಿಯನ್ನು ಓವರ್‌ಟೇಕ್ ಮಾಡಲು ಮುಂದಾಗಿದ್ದು, ಆಗ ಲಾರಿಯವ ಸೈಡ್ ಕೊಟ್ಟಿರಲಿಲ್ಲ.

ಹೀಗೆ ಈತ ಓವರ್‌ಟೇಕ್‌ಗೆ ಅಡ್ಡಿಪಡಿಸಿದಾಗ ಶಿರಾಡಿ ಘಾಟಿಯ ಕೆಂಪು ಹೊಳೆ ಬಳಿ ಲಾರಿಯ ಎಡಗಡೆಯಿಂದ ಓವರ್‌ಟೇಕ್ ಮಾಡುವ ಮೂಲಕ ಕಾರಿನವರು ನಿಯಮವನ್ನು ಉಲ್ಲಂಘಿಸಿದ್ದರಲ್ಲದೆ, ಲಾರಿಗೆ ಕಾರನ್ನು ಅಡ್ಡವಿಟ್ಟು ಓವರ್‌ಟೇಕ್ ಮಾಡಲು ಅಡ್ಡಿ ಪಡಿಸಿರುವುದಕ್ಕೆ ಆಕ್ಷೇಪಿಸಿದ್ದರು. ಆಗ ಕಾರಿನಿಂದ ಮೂರು ಮಂದಿ ಕೆಳಗಿಳಿದಿದ್ದು, ಲಾರಿ ಚಾಲಕ ಮತ್ತು ಇವರ ಮಧ್ಯೆ ಹೊ-ಕೈಯೂ ನಡೆದಿತ್ತು. ಬಳಿಕ ಪ್ರಯಾಣ ಮುಂದುವರಿಸಿದ್ದರು ಎಂದು ತಿಳಿದು ಬಂದಿದೆ.

 ಲಾರಿ ಚಾಲಕ ದ್ವೇಷ ಸಾಧನೆಗಾಗಿ ಈ ರೀತಿ 'ಸುಳ್ಳು ದರೋಡೆ ಕಥೆ' ಸೃಷ್ಟಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಯಿತು. ಬಳಿಕ ಎರಡೂ ಕಡೆಯವರಿಂದಲೂ ಮುಚ್ಚಳಿಕೆಯನ್ನು ಬರೆಸಿ ಬಿಟ್ಟುಬಿಟ್ಟರು.

ಹೀಗೆ ಸುಳ್ಳು ಮಾಹಿತಿ ನೀಡುವ ಮೂಲಕ ಇಲಾಖೆಯ ದಿಕ್ಕು ತಪ್ಪಿಸಿ ಪೊಲೀಸರ ಅಲೆದಾಟಕ್ಕೆ ಕಾರಣನಾದ ಲಾರಿ ಚಾಲಕನಿಗೆ ಕಾನೂನು ಶಿಕ್ಷೆಗೆ ಒಳಪಡಿಸಬೇಕಿತ್ತು ಎಂಬುದು ಸಾರ್ವಜನಿಕರ ಒತ್ತಾಯವಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X