Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ದುರ್ನಡತೆಗಾಗಿ ಆಟಗಾರನನ್ನು 'ಔಟ್'...

ದುರ್ನಡತೆಗಾಗಿ ಆಟಗಾರನನ್ನು 'ಔಟ್' ಮಾಡಬಹುದು ಅಂಪೈರ್ !

ಕ್ರಿಕೆಟ್ ನಲ್ಲಿ ಏನೇನು ಹೊಸ ನಿಯಮಗಳು ಜಾರಿಗೆ ಬರುತ್ತಿವೆ ನೋಡಿ

ವಾರ್ತಾಭಾರತಿವಾರ್ತಾಭಾರತಿ7 March 2017 2:05 PM IST
share
ದುರ್ನಡತೆಗಾಗಿ ಆಟಗಾರನನ್ನು ಔಟ್ ಮಾಡಬಹುದು ಅಂಪೈರ್ !

ಮೆಲ್ಬೋರ್ನ್, ಮಾ.7:ಕ್ರೀಡಾಂಗಣದಲ್ಲಿ ಆಟಗಾರರು ಅನುಚಿತವಾಗಿ ವರ್ತಿಸಿದರೆ  ಅಂತಹ ಆಟಗಾರರನ್ನು ಕ್ರೀಡಾಂಗಣದಿಂದ  ಹೊರದಬ್ಬುವ ಸ್ವಾತಂತ್ರ್ಯವನ್ನು ಅಂಪೈರ್ ಗೆ ನೀಡಲಾಗಿದೆ.

ಅಕ್ಟೋಬರ್ 1ರಂದು ಕ್ರಿಕೆಟ್ ನ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಎಂಸಿಸಿ ತಿಳಿಸಿದೆ.

ಆಟಗಾರರು ಹಿಡಿಯುವ ಬ್ಯಾಟ್ ಗೂ ನಿಯಮ ಜಾರಿಯಾಗಿದೆ. ಇನ್ನು ಮುಂದೆ ಬ್ಯಾಟ್ಸ್ ಮನ್ ಗಳು ತಮಗೆ ಇಷ್ಟವಾದ ಬ್ಯಾಟ್ ನ್ನು ತಯಾರಿಸಿ ಉಪಯೋಗಿಸುವಂತಿಲ್ಲ.  ಆಟಗಾರರು ಹಿಡಿಯುವ ಬ್ಯಾಟ್ 108 ಮಿ.ಮೀ. ಅಗಲ 67 ಮಿ.ಮೀ ಆಳ ಮತ್ತು 40 ಮಿ.ಮಿ  ಅಂಚು ಹೊಂದಿರಬೇಕು. ಈ ನಿಯಮ ಪಾಲಿಸದ ಬ್ಯಾಟ್ ನ್ನು ಆಟಗಾರರು ಉಪಯೋಗಿಸುವಂತಿಲ್ಲ.

ಬ್ಯಾಟ್ ಮತ್ತು ಬಾಲ್ ನಡುವೆ ಅಸಮತೋಲನದ ಹಿನ್ನೆಲೆಯಲ್ಲಿ ಆಟಗಾರರು, ಬ್ಯಾಟ್ ತಯಾರಕರು ಮತ್ತು ವಿಶ್ವದ ನಾನಾ ಕ್ರಿಕೆಟ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಹೊಸ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬ್ಯಾಟ್ ನ ಗಾತ್ರ ದೊಡ್ಡದಾಗಿದೆ. ಬ್ಯಾಟ್ಸ್ ಮನ್ ಗಳು ತಮಗೆ ಇಷ್ಟವಾದ ಬ್ಯಾಟ್ ಗಳನ್ನು ಬಳಸುವುದು ಜಾಗತಿಕ ಕ್ರಿಕೆಟ್ ನಲ್ಲಿ ಒಂದು ಸಮಸ್ಯೆಯಾಗಿದೆ ಎಂದು ಎಂಸಿಸಿ ಧುರೀಣ ಸ್ಟೀಫನ್ಸನ್ ತಿಳಿಸಿದ್ದಾರೆ.

ಏಕರೂಪದ ಬ್ಯಾಟ್ ಗಳ ಬಳಕೆ ನಿಯಮ ಜಾರಿಯಾಗುವುದರ ಜೊತೆಗೆ  ಆಟದಲ್ಲಿ ಶಿಸ್ತನ್ನು ಮೂಡಿಸುವ ಉದ್ದೇಶಕ್ಕಾಗಿ ಇನ್ನೊಂದು ನಿಯಮವನ್ನು ರೂಪಿಸಲಾಗಿದೆ. ಕ್ರೀಡಾಂಗಣದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸುವ ಅಥವಾ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವ  ಆಟಗಾರನನ್ನು ಔಟೆಂದು ತೀರ್ಪು ನೀಡಿ ಅವರನ್ನು ಕ್ರೀಡಾಂಗಣದಿಂದ ಹೊರದಬ್ಬುವ ಅಧಿಕಾರವನ್ನು ಅಂಪೈರ್ ಗೆ ನೀಡಲಾಗಿದೆ.

ಎದುರಾಳಿ ತಂಡದ ಆಟಗಾರನ ಮೇಲೆ ಚೆಂಡು ಎಸೆತ, ಹಲ್ಲೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥ ಆಟಗಾರನಿರುವ ತಂಡ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಬಿಟ್ಟುಕೊಡಬೇಕಾಗುತ್ತದೆ.

ಎದುರಾಳಿ ಆಟಗಾರನ ಮೇಲೆ , ತಂಡದ ಅಧಿಕಾರಿ  ಅಥವಾ ಪ್ರೇಕ್ಷಕನ ಮೇಲೆ ಹಲ್ಲೆ ನಡೆಸಿದ  ಆಟಗಾರನನ್ನು ಕ್ರೀಡಾಂಗಣದಿಂದ ನಿಗದಿತ ಓವರ್ ಗಳು ಪೂರ್ಣಗೊಳ್ಳುವ ತನಕ ಹೊರದಬ್ಬಲಾಗುವುದು. 5 ಪೆನಾಲ್ಟಿ ರನ್ ಕಡಿತ ಮಾಡಲಾಗುವುದು.

ಹೊಸ ನಿಯಮ ಪ್ರಕಾರ ಬೌನ್ಸಿಂಗ್  ಬ್ಯಾಟ್ ರನೌಟ್ ನ್ನು ರದ್ದುಪಡಿಸಲಾಗಿದೆ.  ಬ್ಯಾಟ್ಸ್ ಮನ್ ರನ್ ಗಳಿಸುವ ಯತ್ನದಲ್ಲಿ ಕ್ರೀಸ್ ತಲುಪಿ ಬ್ಯಾಟ್ ನ್ನು ಒಮ್ಮೆ ಕ್ರೀಸ್ ಸ್ಪರ್ಶಿಸಿದರೆ ಮತ್ತೆ ಬ್ಯಾಟ್ಸ್ ಮನ್ ಬ್ಯಾಟ್ ನ್ನು ಎತ್ತಿದರೂ ಆತನನ್ನು ರನೌಟ್  ಮಾಡಲು ಸಾಧ್ಯವಿಲ್ಲ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X