Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇವಲ ಐದು ತಿಂಗಳಲ್ಲಿ 23 ಪಟ್ಟು ಹೆಚ್ಚಿದ...

ಕೇವಲ ಐದು ತಿಂಗಳಲ್ಲಿ 23 ಪಟ್ಟು ಹೆಚ್ಚಿದ ಚಂದ್ರಬಾಬು ಪುತ್ರನ ಆಸ್ತಿ!

ವಾರ್ತಾಭಾರತಿವಾರ್ತಾಭಾರತಿ8 March 2017 5:54 PM IST
share
ಕೇವಲ ಐದು ತಿಂಗಳಲ್ಲಿ 23 ಪಟ್ಟು ಹೆಚ್ಚಿದ ಚಂದ್ರಬಾಬು ಪುತ್ರನ ಆಸ್ತಿ!

ಹೈದರಾಬಾದ್,ಮಾ.8: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ತೆಲುಗು ದೇಶಂ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಆಸ್ತಿಗಳ ಮೌಲ್ಯ ಕೇವಲ ಐದೇ ತಿಂಗಳುಗಳಲ್ಲಿ 23 ಪಟ್ಟುಗಳಷ್ಟು ಹೆಚ್ಚಾಗಿದೆ. ಅವರೀಗ 330 ಕೋ.ರೂ.ಮೌಲ್ಯದ ಆಸ್ತಿಗಳ ಒಡೆಯ!

ಲೋಕೇಶ್ ಸೋಮವಾರ ಎಂಎಲ್‌ಸಿ ಸ್ಥಾನಕ್ಕೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತನ್ನ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 330 ಕೋ.ರೂ.ಗಳೆಂದು ಘೋಷಿಸಿದ್ದಾರೆ. ಇವುಗಳಲ್ಲಿ 273.84 ಕೋ.ರೂ.ಮೌಲ್ಯದ ಹೆರಿಟೇಜ್ ಫುಡ್ಸ್‌ನ ಶೇರುಗಳು, 18 ಕೋ.ರೂ.ಗಳ ಸ್ಥಿರಾಸ್ತಿಗಳು ಮತ್ತು 38.52 ಕೋ.ರೂ. ಮೌಲ್ಯದ ಹಿರಿಯರಿಂದ ಬಂದಿರುವ ಆಸ್ತಿಗಳು ಸೇರಿವೆ. ಜೊತೆಗೆ 6.27 ಕೋ.ರೂ.ಗಳ ಸಾಲವನ್ನೂ ಅವರು ಹೊಂದಿದ್ದಾರೆ.

  ಲೋಕೇಶ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಗಳ ವಿವರಗಳಿಗೂ 2016,ಅ.19ರಂದು ಅವರು ಬಹಿರಂಗಗೊಳಿಸಿದ್ದ ಆಸ್ತಿಗಳ ವಿವರಗಳಿಗೂ ಅಜಗಜಾಂತರವಿದೆ. ಪ್ರತಿ ವರ್ಷ ತನ್ನ ಕುಟುಂಬದ ಆಸ್ತಿ ವಿವರಗಳನ್ನು ಬಹಿರಂಗ ಗೊಳಿಸುವ ‘ಪಾರದರ್ಶಕತೆ ’ಯ ಪ್ರಕ್ರಿಯೆಯಲ್ಲಿ 2.52 ಕೋ.ರೂ.ವೌಲ್ಯದ ಹೆರಿಟೇಜ್ ಶೇರುಗಳು, 1.64 ಕೋ.ರೂ.ಮೌಲ್ಯದ ಇತರ ಕಂಪನಿಗಳ ಶೇರುಗಳು ಮತ್ತು 93 ಲ.ರೂ. ಮೌಲ್ಯದ ಕಾರು ಸೇರಿದಂತೆ ತನ್ನ ಆಸ್ತಿಗಳ ಒಟ್ಟು ವೌಲ್ಯ ಕೇವಲ 14.50 ಕೋ.ರೂ.ಗಳೆಂದು ಲೋಕೇಶ್ ಘೋಷಿಸಿದ್ದರು. ಅಲ್ಲದೆ ತಾನು 6.35 ಕೋ.ರೂ.ಗಳ ಸಾಲವನ್ನೂ ಹೊಂದಿದ್ದೇನೆ ಎಂದು ತಿಳಿಸಿದ್ದರು.

 ವಾಸ್ತವದಲ್ಲಿ ಹೆರಿಟೇಜ್ ಫುಡ್ಸ್ ಕಳೆದ ವರ್ಷದ ನ.8ರಂದು ತನ್ನ ಚಿಲ್ಲರೆ ವ್ಯಾಪಾರ ವಿಭಾಗವನ್ನು ಕಿಶೋರ ಬಿಯಾನಿಯವರ ಫ್ಯೂಚರ್ ರಿಟೇಲ್ ಲಿ.ಗೆ ಮಾರಾಟ ಮಾಡಿದ್ದು, ಅದರಲ್ಲಿಯ 295 ಕೋ.ರೂ.ವೌಲ್ಯದ ಕೇವಲ ಶೇ.3.65ರಷ್ಟು ಶೇರುಗಳನ್ನು ಮಾತ್ರ ಉಳಿಸಿಕೊಂಡಿತ್ತು. ಹೀಗಿದ್ದರೂ,ಲೋಕೇಶ್ ಬಳಿಯಿದ್ದ ಹೆರಿಟೇಜ್ ಫುಡ್ಸ್‌ನ ಶೇರುಗಳ ವೌಲ್ಯ ಐದೇ ತಿಂಗಳಲ್ಲಿ 2.52 ಕೋ.ರೂ.ನಿಂದ 273.84 ಕೋ.ರೂ.ಗೇರಿದೆ.

  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ಲೋಕೇಶ್ ತನ್ನ ಪತ್ನಿ ನಾರಾ ಬ್ರಹ್ಮಣಿ ಮತ್ತು ಎರಡರ ಹರೆಯದ ಪುತ್ರ ದೇವಾಂಶ್ ಒಡೆತನದ ಆಸ್ತಿಗಳನ್ನೂ ಘೋಷಿಸಿದ್ದಾರೆ. ಅಕ್ಟೋಬರ್‌ನಲ್ಲಿ ಬ್ರಹ್ಮಣಿಯವರ ಆಸ್ತಿಗಳ ಒಟ್ಟು ವೌಲ್ಯ 5.38 ಕೋ.ರೂ. ಮತ್ತು ದೇವಾಂಶ್ ಆಸ್ತಿ ವೌಲ್ಯ 11.70 ಕೋ.ರೂ.ಗಳೆಂದು ಪ್ರಕಟಿಸಲಾಗಿತ್ತು. ಆದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ಬ್ರಹ್ಮಣಿ ಆಸ್ತಿಯ ವೌಲ್ಯವನ್ನು 28 ಕೋ.ರೂ.ಗಳೆಂದು ತೋರಿಸಲಾಗಿದ್ದರೆ, ದೇವಾಂಶ್ ಆಸ್ತಿ ವೌಲ್ಯ ಹೆಚ್ಚುಕಡಿಮೆ ಮೊದಲಿನಷ್ಟೇ ಇದೆ.ಅಕ್ಟೋಬರ್‌ನಲ್ಲಿ ಲೋಕೇಶ್ ಘೋಷಿಸಿದ್ದಂತೆ ತಂದೆ ಚಂದ್ರಬಾಬು ನಾಯ್ಡು 67 ಲ.ರೂ.ಗಳ ಆಸ್ತಿಯನ್ನು ಹೊಂದಿದ್ದರೆ, ಹೆರಿಟೇಜ್ ಫುಡ್ಸ್‌ನ ಆಡಳಿತ ನಿರ್ದೇಶಕಿಯಾಗಿರುವ ತಾಯಿ ಭುವನೇಶ್ವರಿ 33.66 ಕೋ.ರೂ.ಮೌಲ್ಯದ ಆಸ್ತಿಯ ಒಡತಿಯಾಗಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X