Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಗುಜರಾತ್‌ನಲ್ಲಿ ನಡೆದದ್ದು ಮಹಿಳೆಯ...

ಗುಜರಾತ್‌ನಲ್ಲಿ ನಡೆದದ್ದು ಮಹಿಳೆಯ ಗೌರವಕ್ಕೆಸವಾಲು : ಶಾಹಿನಾ, ಫೌಝಿಯಾ

ವಾರ್ತಾಭಾರತಿವಾರ್ತಾಭಾರತಿ11 March 2017 12:40 PM IST
share
ಗುಜರಾತ್‌ನಲ್ಲಿ ನಡೆದದ್ದು ಮಹಿಳೆಯ ಗೌರವಕ್ಕೆಸವಾಲು :  ಶಾಹಿನಾ, ಫೌಝಿಯಾ

ತೃಕ್ಕರಿಪುರ,(ಕಾಸರಗೋಡು) ಮಾ.11: ಮಹಿಳಾ ದಿನದಲ್ಲಿ ಗುಜರಾತ್‌ನಲ್ಲಿ ಅನುಭವಿಸಿದ್ದು ಹೆಣ್ಣಿನ ಗೌರವಕ್ಕೆ ಸವಾಲಾದ ನಿಮಿಷಳಾಗಿವೆ ಎಂದು ಮಫ್ತಾ ಧರಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಹಿಡಿಯಲ್ಪಟ್ಟ ತೃಕ್ಕರಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿ.ಪಿ. ಫೌಝಿಯಾ,ಚೆಂಗಳ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ ಹೇಳಿದ್ದಾರೆ.

ಇವರಿಬ್ಬರೂ ಗುರುವಾರ ರಾತ್ರಿ ಊರಿಗೆ ಬಂದು ತಲುಪಿದರು. ಭದ್ರತಾ ಅಧಿಕಾರಿಗಳು ಹೇಳಿದಂತೆ ಕೇಳಿ ವಯನಾಡಿನ ಮುಪ್ಪೈನಾಡ್ ಪಂಚಾಯತ್ ಅಧ್ಯಕ್ಷೆ ಶಹರ್‌ಬಾನ್ ಮಫ್ತಾ ತೆಗೆದು ಸಮಾರಂಭದಲ್ಲಿ ಭಾಗವಹಿಸಿದ ಬೆನ್ನಿಗೆ ಇವರಿಗೂ ಪರ್ದಾ ಧರಿಸಿ ಒಳಗೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು.

ಆದರೆ ಕಾರ್ಯಕ್ರಮಕ್ಕೆ ಪರ್ದಾ ತೆಗೆದು ಭಾಗವಹಿಸುವ ಇಷ್ಟ ತಮಗಿಲ್ಲ ಎಂದು ಈ ಇಬ್ಬರು ಪಂಚಾಯತ್ ಅಧ್ಯಕ್ಷೆಯರು ಅಧಿಕಾರಿಗಳಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ. ಆದ್ದರಿಂದ ಭದ್ರತಾ ಅಧಿಕಾರಿಗಳು ಪ್ರವೇಶ ದ್ವಾರದಿಂದ ದೂರ ನಿಲ್ಲಿಸಿದ್ದಾರೆ.

ಹತ್ತು ನಿಮಿಷದ ಬಳಿಕ ಪುನಃ ಕೇಳಿದಾಗ ಮಫ್ತಾ ಧರಿಸಿದವರಿಗೆ ಪ್ರವೇಶ ನೀಡಬಾರದೆಂದು ಸೂಚನೆ ನೀಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದರು. ಗೃಹಸಚಿವಾಲಯ ನೀಡಿದ ಗುರುತಿನ ಚೀಟಿ ತೋರಿಸಿದರೂ ಜನಪ್ರತಿನಿಧಿಗಳಾದ ತಮ್ಮನ್ನು ತಡೆದ್ದೇಕೆಂದು ಪ್ರಶ್ನಿಸಿದಾಗ ಮತ್ತಷ್ಟು ಅಧಿಕಾರಿಗಳು ಬಂದರು ಎಂದು ಶಾಹಿನಾ ತಿಳಿಸಿದರು. ಅರ್ಧಗಂಟೆ ಕಳೆದ ಬಳಿಕ ಮೊದಲ ಭದ್ರತಾ ಗೇಟಿನಿಂದ ಒಳಗೆ ಹೊಗಲು ಬಿಡಲಾಯಿತು. ಎರಡನೆ ಗೇಟಿನಲ್ಲಿ ಇನ್ನೂ ಹೆಚ್ಚು ಕಠಿಣ ತಪಾಸಣೆ ನಡೆಸಿದ್ದಾರೆ.

ನಿಮ್ಮ ಪ್ರಯಾಣದ ಹೊಣೆಯಿರುವ ಅಧಿಕಾರಿಗೆ ಫೋನ್ ಕರೆ ಮಾಡಿ ಖಚಿತಪಡಿಸಬೇಕೆಂದು ಹೇಳಿದಾಗ ಕಣ್ಣೂರ್ ಜಿಲ್ಲೆಯ ಹೊಣೆಯಿರು ವ ಅಧಿಕಾರಿಗೆ ಫೋನ್ ಮಾಡಿ ಸ್ಪಷ್ಟಪಡಿಸಲಾಯಿತು. ಆದರೂ ಒಳಗೆ ಹೋಗಲು ಬಿಡಲಿಲ್ಲ. ಸಂದರ್ಶಕ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ಅಧಿಕಾರಿಗಳು ಇಬ್ಬರಿಗೂ ಹೇಳಿದರು. ಆದರೆ ಅವರಿಬ್ಬರೂ ಅದನ್ನು ತಿರಿಸ್ಕರಿಸಿದಾಗ ಒಳಗೆ ಕಳುಹಿಸಬೇಕಾಗಿ ಬಂದಿತ್ತು. ಶುಚಿಕೋಣೆಗೆ ಹೋಗಿ ಮರಳುವಾಗಲೂ ಅಧಿಕಾರಿಗಳು ತಡೆದರು. ಅವರೊಡನೆ ವಾಗ್ವಾದ ಮಾಡಬೇಕಾಯಿತು. ಕೇರಳದ ತಂಡದೊಂದಿಗಲ್ಲದೆ ಬೇರೆಲ್ಲಿಯೂ ಕಾರ್ಯಕ್ರಮದಲ್ಲಿ ಕೂತುಕೊಳ್ಳುವುದಿಲ್ಲ ಎಂದು ಇಬ್ಬರೂ ಹಟ ಹಿಡಿದಾಗ ಕೊನೆಗೆ ಅಧಿಕಾರಿಗಳು ಮಣಿಯಬೇಕಾಯಿತು ಎಂದು ಶಾಹಿನಾ ತಿಳಿಸಿದ್ದಾರೆ.

ಮೊದಲ ದಿನ ಗುಜರಾತ್ ನ ಮಾದರಿ ಗ್ರಾಮ ಲೀಲಾಪೂರ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಶಾಲೆ ಮತ್ತು ಅಂಗನವಾಡಿಗೆ ಕಟ್ಟಡ ಪ್ರಪ್ರಥಮ ಬಾರಿ ನಿರ್ಮಿಸಲಾಗುತ್ತಿದೆ. ಇದನ್ನು ಡಿಜಿಟಲ್ ಗ್ರಾಮ ಎಂದು ಕರೆಯುತಿದ್ದಾರೆ. ಅಂಗನವಾಡಿ ಮಕ್ಕಳನ್ನು ನೋಡಿದರೆ ನೋಡಿದವರು ಕೂಡಲೇ ಈ ಮಕ್ಕಳಿಗೆ ಪೋಷಕಾಹಾರದ ಕೊರತೆ ಇದೆ ಎಂದು ಹೇಳಬಹುದು ಎಂದು ಶಾಹಿನಾ ಹೇಳಿದರು.

ಕೇರಳದಿಂದ ಬಂದ ಹೆಚ್ಚಿನವರು ಮಾದರಿ ಗ್ರಾಮ ನೋಡಿ ಮೂಗಿಗೆ ಬೆರಳಿಟ್ಟರು. ಸಂಬಂಧಿಸಿದ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ಎಂದು ಆಹ್ವಾನವನ್ನು ನೀಡಿದೆವು ಎಂದು ಶಾಹಿನಾ ತಿಳಿಸಿದ್ದಾರೆ. ದಿಲ್ಲಿಯ ಸಂಪೂರ್ಣ ಶುಚಿತ್ವ ಯೋಜನೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಪರ್ದಾಧರಿಸಿಯೇ ತಾನು ಭಾಗವಹಿಸಿದ್ದೆ. ಆದರೆ ಅಲ್ಲಿ ಇಂತಹ ಕಷ್ಟಗಳು ಅನುಭವವಾಗಿರಲಿಲ್ಲ ಎಂದು ಫೌಝಿಯಾ ಹೇಳಿದರು.

ಗುಜರಾತ್‌ನಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದ ಹಾಸ್ಟೆಲ್‌ಗಳು ಕೂಡಾ ಶುಚಿಯಾಗಿರಲಿಲ್ಲ ಎಂದು ಇಬ್ಬರು ಪಂಚಾಯತ್ ಅಧ್ಯಕ್ಷೆಯರು ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆಂದು ವೆಬ್‌ಪೋರ್ಟಲೊಂದು ವರದಿಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X