ಉಡುಪಿ: ಭೂಮಾಪನ ಇಲಾಖಾ ದಾಖಲೆಗಳ ಡಿಜಿಟಲೀಕರಣ
ಜಿಲ್ಲಾ ಮಟ್ಟದ ಭೂಮಾಪನ ಇಲಾಖೆ ಕಾರ್ಯಗಾರ

ಉಡುಪಿ, ಮಾ.11: ಭೂಮಾಪನ ಇಲಾಖೆಯ ಎಲ್ಲಾ ದಾಖಲೆಗಳು ಗಣಕೀಕರಣ, ಡಿಜಿಟಲೀಕರಣದತ್ತ ವೇಗವಾಗಿ ಸಾಗುತ್ತಿದೆ ಎಂದು ಭೂದಾಖಲೆಗಳ ಇಲಾಖೆಯ ಉಡುಪಿ ಜಿಲ್ಲಾ ಭೂದಾಖಲೆಗಳ ಉಪ ನಿರ್ದೇಶಕ ಕುಸುಮಾಧರ್ ಬಿ.ಕೆ ಹೇಳಿದ್ದಾರೆ.
ಬನ್ನಂಜೆ ಶ್ರೀನಾರಾಯಣ ಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಭೂಮಾಪನಾ ಇಲಾಖೆಯ ನೌಕರರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಂಥ ಸಂದರ್ಭದಲ್ಲಿ ಈ ರೀತಿಯ ಕಾರ್ಯಾಗಾರಗಳು ಉಪಯುಕ್ತವಾಗಿದ್ದು, ಅಳತೆ ಕೆಲಸವನ್ನು ಉನ್ನಿತೀಕರಣ ಗೊಳಿಸುವಲ್ಲಿ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಮಾಹಿತಿ ಹಕ್ಕು ನಿಯಮಗಳ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಉಪ ವಿಭಾಗದ ಭೂದಾಖಲೆಗಳ ಸಹಾಯಕ ನಿರ್ದೇಶಕ ಪುಷ್ಪರಾಜ್ ಪೂಜಾರಿ ವಿಷಯ ಮಂಡನೆ ಮಾಡಿದರು.
11ಇ ನಕ್ಷೆಯಂತೆ ನೊಂದಣಿ ಕಛೇರಿಯಲ್ಲಿ ನೊಂದಣಿ ಬಳಿಕ ಭೂಮಿ ತಂತ್ರಾಂಶದಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಉಡುಪಿ ಜಿಲ್ಲಾ ಭೂಮಿ ಸಮಾಲೋಚಕ ವಿನೋದ ಗಾಂವ್ಕರ್ ಮಾಹಿತಿ ನೀಡಿದರು. ಉಡುಪಿ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯ ಅಧೀಕ್ಷಕರಾದ ನಾಗೇಶ ಕಚೇರಿ ನಿರ್ವಹಣೆ, ನೌಕರರಿಗೆ ಲ್ಯವಿರುವ ಸೌಲ್ಯಗಳ ಕುರಿತು ವಿವರಗಳನ್ನು ನೀಡಿದರು.
ಕಾರ್ಕಳ ವಿಭಾಗದ ಅಧೀಕ್ಷಕರಾದ ಶ್ರೀಕಲಾ ಇವರು ಕ್ರಯ ಪತ್ರ ಇನ್ನಿತರ ಉದ್ದೇಶಗಳಿಗೆ ನೊಂದಣಿ ಬಳಿಕ ಆಕಾರಬಂದ್ ದುರಸ್ತಿ ( ಜಮೀನು ವಿಭಜನೆ ಆದಾಗ ಜಮೀನು, ನಕ್ಷೆಯಲ್ಲಿ ವಿಭಜನೆ ಆದರೂ ಭೂಕಂದಾಯದಲ್ಲಿ ವಿಭಜನೆ ಪ್ರಕ್ರಿಯೆ ಆಕಾರಬಂದ್ ದುರಸ್ತಿ ಎನ್ನುತ್ತಾರೆ.) ವೇಳೆ ಭೂಮಾಪನ ಸಿಬ್ಬಂದಿಗಳು ನಿಗಾ ವಹಿಸಬೇಕಾದ ವಿಷಯಗಳ ಕುರಿತು ವಿವರವಾದ ಸೂಚನೆಗಳನ್ನು ನೀಡಿದರು.
ಕುಂದಾಪುರ ಉಪವಿಭಾಗ ೂದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ ಇವರು, ಕಾರ್ಯಗಾರದಲ್ಲಿ ಮಂಡಿಸಲಾದ ಹಾಗೂ ಚರ್ಚಿಸಿದ ವಿಷಯಗಳನ್ನು ಪ್ರಾಮಾಣಿಕವಾಗಿ ಕರ್ತವ್ಯದಲ್ಲಿ ಜಾರಿಗೊಳಿಸಬೇಕೆಂದು ತಿಳಿಸಿದರು. ಉಪಸ್ಥಿತರಿದ್ದ ನಿವೃತ ಭೂಮಾಪನ ಸಹಾಯಕ ನಿರ್ದೇಶಕ ಕೃಷ್ಣ ತಾಂಡೇಲ್ ಹೊಸ ಭೂಮಾಪಕರಿಗೆ ಉಪಯುಕ್ತ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಖಾಯಂ ಪೂರ್ವಾವಧಿ ಘೋಷಣೆ ಆದ 18 ಮಹಿಳೆ ಯರು ಸೇರಿದಂತೆ 54 ಭೂಮಾಪಕರಿಗೆ ಅಳತೆ ಸ್ಕೇಲು ಹಾಗೂ ಪೆನ್ಸಿಲ್ಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು. ಶಿವಮೊಗ್ಗದಲ್ಲಿ ಎ.10ರಂದು ನಡೆಯಲಿರುವ ಸರ್ವೆ ದಿನಾಚರಣೆ ಮತ್ತು ಪೂರ್ವಭಾವಿಯಾಗಿ ಎ.8-9ರಂದು ನಡೆಯುವ ಭೂಮಾಪನ ಇಲಾಖಾ ಸಿಬ್ಬಂದಿಗಳ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಕಳ ಪರ್ಯಾವೇಕ್ಷಕ ಗೋಪಾಲ್ ಎನ್.ವಿ, ಎನ್. ಸುಬ್ರಮಣ್ಯ, ಉಡುಪಿ ಪರ್ಯಾವೇಕ್ಷಕ ನಾಗೇಶ, ಬ್ರಹ್ಮಾವರ ಪರ್ಯಾವೇಕ್ಷಕ ಮಹೇಶ ಕುಮಾರ್, ಬೈಂದೂರು ಪರ್ಯಾವೇಕ್ಷಕ (ಪ್ರಬಾರ) ಎಂ.ಸಿ ಪೂಜಾರಿ ಉಪಸ್ಥಿತರಿದ್ದರು.
ಕುಂದಾಪುರ ಪರ್ಯಾವೇಕ್ಷಕ ಪುರುಷೋತ್ತಮ ಅತಿಥಿಗಳನ್ನು ಸ್ವಾಗತಿಸಿದರು. ಉಡುಪಿ ಪರ್ಯಾವೇಕ್ಷಕ ದಯಾನಂದ ವಂದಿಸಿ, ಬ್ರಹ್ಮಾವರ ಪರ್ಯಾವೇಕ್ಷಕ ಸುನೀಲ್ ನಟೇಕರ್ ಕಾರ್ಯಕ್ರಮ ನಿರ್ವಹಿಸಿದರು.







