Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಹಿಳೆಯರಿಗೂ ರಟ್ಟೆ ಬಲ ಇದೆ, ಆದರೆ ಅವರು...

ಮಹಿಳೆಯರಿಗೂ ರಟ್ಟೆ ಬಲ ಇದೆ, ಆದರೆ ಅವರು ಅದನ್ನು ತೋರಿಸುವುದಿಲ್ಲ ಎಂದು ನಾನು ಸಾಬೀತುಪಡಿಸಿದೆ: ಅಕ್ಲಿಮಾ

ನನ್ನ ಕಥೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್12 March 2017 9:36 AM IST
share
ಮಹಿಳೆಯರಿಗೂ ರಟ್ಟೆ ಬಲ ಇದೆ, ಆದರೆ ಅವರು ಅದನ್ನು ತೋರಿಸುವುದಿಲ್ಲ ಎಂದು ನಾನು ಸಾಬೀತುಪಡಿಸಿದೆ: ಅಕ್ಲಿಮಾ

ವರ್ಷದ ಹಿಂದೆ ನಾನು ಕೂಲಿ ಕೆಲಸ ಆರಂಭಿಸಿದೆ. ನನ್ನನ್ನೂ ಸೇರಿ ಅಲ್ಲಿ 10 ಮಂದಿ ಮಾತ್ರ ಮಹಿಳೆಯರಿದ್ದೆವು. ನಿರ್ಮಾಣದಾರ ಮಹಿಳಾ ಕೆಲಸಗಾರರನ್ನು ನೇಮಿಸಿಕೊಳ್ಳಲು ಇಚ್ಛಿಸುತ್ತಿರಲಿಲ್ಲ. ನಮ್ಮೊಂದಿಗೆ 50 ಪುರುಷರೂ ಕೆಲಸ ಮಾಡುತ್ತಿದ್ದರು. ಅವರು ಚಹಾ ಸೇವನೆ ಹಾಗೂ ಸಿಗರೇಟ್ ಸೇದಲು ವಿರಾಮ ಪಡೆಯುತ್ತಿದ್ದರು. ಆದರೆ ನಮಗೆ ಮಹಿಳೆಯರಿಗೆ ಬಿಡುವು ಇರಲಿಲ್ಲ. ಸುಮಾರು ಒಂದು ವರ್ಷ ಸದೃಢ ವ್ಯಕ್ತಿ ನಮ್ಮನ್ನು ತಮಾಷೆ ಮಾಡುತ್ತಿದ್ದ. ನಾನು ನಿದ್ದೆಯಲ್ಲಿ ಕೂಡಾ ಮಹಿಳೆಯರಿಗಿಂತ ಹೆಚ್ಚು ಕಲ್ಲು ತುಂಬಿದ ಬಕೆಟ್ ಒಯ್ಯಬಲ್ಲೆ ಎಂದೊಮ್ಮೆ ಹೇಳಿದ್ದ. ಆತನ ಜೋಕ್‌ಗೆ ಗುತ್ತಿಗೆದಾರ ಜೋರಾಗಿ ನಕ್ಕ. ಕೆಲ ಸಮಯದ ಬಳಿಕ ಆತ ಕಲ್ಲು ತುಂಬಿದ್ದ ಎಲ್ಲ ಬಕೆಟ್‌ಗಳನ್ನು ಸಾಗಿಸಿ, ತನ್ನ ತೋಳ್ಬಲ ಪ್ರದರ್ಶಿಸಿ, ನಮ್ಮತ್ತ ನಕ್ಕ. ಕೆಲದಿನಗಳ ಹಿಂದೆ ನಮಗೆ ಅರ್ಧ ಗಂಟೆಯಾದರೂ ವಿಶ್ರಾಂತಿ ಕೊಡಿ ಎಂದು ಗುತ್ತಿಗೆದಾರನನ್ನು ಕೇಳಿದೆ. ತಕ್ಷಣ ಕಟ್ಟುಮಸ್ತಾದ ವ್ಯಕ್ತಿಯನ್ನು ತೋರಿಸಿ, ನೀನು ಅಥವಾ ಯಾರೇ ಮಹಿಳೆ ಆತನನ್ನು ಕೆಲಸದಲ್ಲಿ ಮೀರಿಸಿದರೆ ಮರುದಿನದಿಂದಲೇ ನಿಮಗೂ ಸಮಾನವಾದ ವಿಶ್ರಾಂತಿ ಸಮಯ ಕೊಡುತ್ತೇನೆ ಎಂದು ಆತ ಅಣಕಿಸಿದ. ನಮ್ಮ ಮಹಿಳೆಯರ ಗುಂಪಿನತ್ತ ನೋಡಿದರೆ ಎಲ್ಲರೂ ತಲೆ ತಗ್ಗಿಸಿ ನಿಂತಿದ್ದರು. ನಾನು ಮನೆಗೆ ಹೋಗುತ್ತಿದ್ದಾಗ, ನನ್ನ ''ಪುಟ್ಟ ಹುಡುಗಿ, ಎಂದಿಗೂ ಪುರುಷರಿಗೆ ಸವಾಲು ಹಾಕಬೇಡಿ'' ಎಂದು ಎಚ್ಚರಿಸಿದಳು. ಯಾಕೆಂದು ಆಕೆಯನ್ನು ಕೇಳಿದೆ. ಐದು ವರ್ಷದ ಆಕೆ ಭಯದಿಂದಲೇ ತನ್ನ ತೋಳು ಪ್ರದರ್ಶಿಸಿ, "ನಮಗೆ ಇದು ಇಲ್ಲ" ಎಂದು ಹೇಳಿದಳು. ಮರುದಿನ ನಾನು ಕೆಲಸಕ್ಕೆ ಹೋದಾಗ, ಈ ಸವಾಲು ಸ್ವೀಕರಿಸಲು ನಾನು ಸಿದ್ಧ ಎಂದು ಅವರಿಗೆ ಹೇಳಿದೆ. ಕಟ್ಟುಮಸ್ತಾದ ವ್ಯಕ್ತಿಯ ಜತೆ ಕಲ್ಲು ತುಂಬಿದ ಬಕೆಟ್ ಒಯ್ಯುತ್ತಿದ್ದಾಗ, ಪ್ರತಿಯೊಬ್ಬರೂ ಕೆಲಸ ನಿಲ್ಲಿಸಿ ಚಪ್ಪಾಳೆ ಹೊಡೆಯಲು ಆರಂಭಿಸಿದರು. ಅದು ಒಂದು ರೀತಿಯ ಆಟವಾಯಿತು. ಎಷ್ಟು ಹೊತ್ತು ಕಳೆದಿತ್ತು ಎಂಬ ಕಲ್ಪನೆ ನನಗಿರಿಲ್ಲ. ಗುತ್ತಿಗೆದಾರ ಕೆಲಸ ನಿಲ್ಲಿಸಲು ಹೇಳಿದಾಗ, ನನ್ನೊಂದಿಗೆ ಇದ್ದ ವ್ಯಕ್ತಿಯತ್ತ ನೋಡಿದೆ. ಆತ ನೆಲದ ಮೇಲೆ ಮಲಗಿದ್ದ. ಆಗಲೇ ತೀರಾ ದಣಿದಿದ್ದ. ಆಗ ನಾನು ನೋಡಿದೆ; ಆತನಿಗಿಂತ 50 ಹೆಚ್ಚು ಬಕೆಟ್ ಕಲ್ಲು ಒಯ್ದಿದ್ದೆ. ಪ್ರತಿ ಮಹಿಳೆಯರು ಹರ್ಷೋದ್ಗಾರ ಮಾಡುತ್ತಿದ್ದರೆ, ನಾನು ನನ್ನ ಪುಟ್ಟ ಬಾಲಕಿಯತ್ತ ನೋಡಿದೆ. ಆಕೆ ನನ್ನ ಎದೆಯೆತ್ತರಕ್ಕೆ ಹಾರಿದಳು. ನಾನು ಏನೂ ಹೇಳಲಿಲ್ಲ. ಮಹಿಳೆಯರ ರಟ್ಟೆಯಲ್ಲೂ ಶಕ್ತಿ ಇದೆ; ಆದರೆ ಅದನ್ನು ತೋರಿಸುವುದಿಲ್ಲ ಅಷ್ಟೇ ಎಂದು ಆಕೆಗೆ ನಾನು ನಿರೂಪಿಸಿ ತೋರಿಸಿದ್ದೆ.

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X