Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 25000 ವರ್ಷಗಳ ಹಿಂದೆ ಉಷ್ಟ್ರಪಕ್ಷಿ...

25000 ವರ್ಷಗಳ ಹಿಂದೆ ಉಷ್ಟ್ರಪಕ್ಷಿ ಭಾರತದಲ್ಲಿತ್ತು

ವಾರ್ತಾಭಾರತಿವಾರ್ತಾಭಾರತಿ12 March 2017 6:41 PM IST
share
25000 ವರ್ಷಗಳ ಹಿಂದೆ ಉಷ್ಟ್ರಪಕ್ಷಿ ಭಾರತದಲ್ಲಿತ್ತು

ಹೈದರಾಬಾದ್, ಮಾ.12: ಆಫ್ರಿಕ ಮೂಲದ ಹಾರಾಡದ ಪಕ್ಷಿಯಾಗಿರುವ ಉಷ್ಟ್ರಪಕ್ಷಿ ಭಾರತದಲ್ಲಿ ಸುಮಾರು 25 ಸಾವಿರ ವರ್ಷಗಳ ಹಿಂದೆ ವಾಸಿಸುತ್ತಿತ್ತು ಎಂದು ‘ಸೆಂಟರ್ ಫಾರ್ ಸೆಲ್ಯೂಲರ್ ಆ್ಯಂಡ್ ಮೊಲೆಕ್ಯುಲರ್ ಬಯಾಲಜಿ (ಸಿಸಿಎಂಬಿ) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಈ ಪಕ್ಷಿಯ ಮೂಲಸ್ಥಾನ ಆಫ್ರಿಕವಾಗಿದ್ದರೂ ಭಾರತದಲ್ಲಿ, ಅದರಲ್ಲೂ ಹೆಚ್ಚಾಗಿ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಉಷ್ಟ್ರಪಕ್ಷಿಯ ಮೊಟ್ಟೆಯ ಚೂರುಗಳನ್ನು ಹಲವು ಭೂಗರ್ಭಶಾಸ್ತ್ರಜ್ಞರು ಮತ್ತು ಪುರಾತನ ವಸ್ತುಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ.

‘ಪುರಾತನ ಡಿಎನ್‌ಎ ವ್ಯವಸ್ಥೆ’ಯಲ್ಲಿ (ಭಾರತದಲ್ಲಿ ಪತ್ತೆಯಾದ) ಉಷ್ಟ್ರಪಕ್ಷಿಯ ಮೊಟ್ಟೆಯ ಹೊರ ಹೊದಿಕೆಯನ್ನು ವಿಶ್ಲೇಷಿಸಿದಾಗ , ಇವು ಅನುವಂಶಿಕವಾಗಿ ಆಫ್ರಿಕಾದ ಉಷ್ಟ್ರಪಕ್ಷಿಗಳ ಮೊಟ್ಟೆಗಳನ್ನು ಹೋಲುತ್ತಿತ್ತು ಮತ್ತು ಇದರ ಇಂಗಾಲಾಂಶದ ಅಧ್ಯಯನದಿಂದ ಇವು ಸುಮಾರು 25 ಸಾವಿರ ವರ್ಷಗಳ ಹಿಂದಿನ ಮೊಟ್ಟೆ ಎಂದು ತಿಳಿದು ಬಂದಿರುವುದಾಗಿ ಸಿಸಿಎಂಬಿಯ ಹಿರಿಯ ಪ್ರಧಾನ ವಿಜ್ಞಾನಿ ಕುಮಾರಸ್ವಾಮಿ ತಂಗರಾಜ್ ತಿಳಿಸಿದ್ದಾರೆ. ‘ಪಿಎಲ್‌ಒಎಸ್ ವನ್’ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ 2017 ಮಾರ್ಚ್ 9ರಂದು ಈ ಅಧ್ಯಯನ ವರದಿ ಪ್ರಕಟವಾಗಿದೆ.

ಸಿಸಿಎಂಬಿಯ ವಿಜ್ಞಾನಿಗಳು ಹಾಗೂ ರೂರ್ಕಿಯ ಐಐಟಿ ವಿಜ್ಞಾನಿಗಳು ಮತ್ತು ಇತರರು ಸೇರಿ ಈ ಅಧ್ಯಯನ ನಡೆಸಿದ್ದರು.

ಗೊಂಡ್ವಾನಾಲ್ಯಾಂಡ್ ಅಥವಾ ಗೊಂಡ್ವಾನಾ ಎಂದು ಕರೆಯಲ್ಪಡುತ್ತಿದ್ದ ಭೂಖಂಡ ಸರಿತವು ಉಷ್ಟ್ರಪಕ್ಷಿಗಳ ಮೂಲ ಮತ್ತು ವಿಕಸನದ ಜೊತೆಗೆ ಸಂಬಂಧ ಹೊಂದಿದೆ. ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ಆಫ್ರಿಕಾ, ಅರೆಬಿಯಾ, ಆಸ್ಟ್ರೇಲಿಯ, ಅಂಟಾರ್ಕ್‌ಟಿಕ, ಭಾರತ ಮತ್ತು ಮಡಗಾಸ್ಕರ್ ಸೇರಿದ ಒಂದು ಮಹಾ ಭೂಖಂಡವಾಗಿತ್ತು ಗೊಂಡ್ವಾನಾಲ್ಯಾಂಡ್.

ಕ್ರೆಟಾಷಿಯಸ್ ಅವಧಿಯ ಆರಂಭದಲ್ಲಿ ಅಂದರೆ 130ರಿಂದ 100 ಮಿಲಿಯನ್ ವರ್ಷಗಳ ಹಿಂದೆ ಈ ಮಹಾ ಭೂಖಂಡದಲ್ಲಿ ಉಂಟಾದ ಪ್ರಾಥಮಿಕ ವಿಂಗಡಣೆಯು ಆಫ್ರಿಕಾ ಮತ್ತು ಇಂಡೊ-ಮಡಗಾಸ್ಕರ್ ಪ್ರದೇಶವನ್ನು ಬೇರ್ಪಡಿಸಿತು.ಈ ಜೈವಿಕ-ಭೌಗೋಳಿಕ ಚದುರುವಿಕೆಯ ಕಾರಣ ಸುಮಾರು 20 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿದ್ದ ಉಷ್ಟ್ರಪಕ್ಷಿಗಳು ಯುರೇಷಿಯಾ(ಯುರೋಪ್ ಮತ್ತು ಏಷ್ಯಾ ಖಂಡಗಳು ಸಂಯೋಜನೆಗೊಂಡು ರೂಪುಗೊಂಡ ಬೃಹತ್ ಭೂಪ್ರದೇಶ) ದಾರಿಯಾಗಿ, ಭೂಮಾರ್ಗದ ಮೂಲಕ ಚದುರಿಹೋದವು.

ಅದಾಗ್ಯೂ, ಭಾರತದಲ್ಲಿ ಉಷ್ಟ್ರಪಕ್ಷಿಗಳ ಅಸ್ತಿತ್ವಕ್ಕೆ ಭೂಖಂಡ ಸರಿತ ಕಾರಣ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಸ್ಯ, ಪ್ರಾಣಿ ಸ್ವರೂಪಶಾಸ್ತ್ರದ ವಿಧಾನದಿಂದ ನಡೆಸಲಾದ ಮೊಟ್ಟೆಯ ಚೂರಿನ ಅಧ್ಯಯನದಿಂದ ಭಾರತದಲ್ಲಿ ಉಷ್ಟ್ರಪಕ್ಷಿಯ ಅಸ್ತಿತ್ವವನ್ನು ನಿರ್ಧರಿಸಲು ಅಸಾಧ್ಯ ಎಂಬ ಕಾರಣದಿಂದ ಈ ಪ್ರಕರಣದಲ್ಲಿ ಸಂಶೋಧಕರು ಪುರಾತನ ಡಿಎನ್‌ಎ ವ್ಯವಸ್ಥೆ ವಿಧಾನದ ಮೂಲಕ ಅಧ್ಯಯನ ನಡೆಸಿದ್ದಾರೆ .

ಆಫ್ರಿಕದ ಉಷ್ಟ್ರಪಕ್ಷಿಗಳ ಮೊಟ್ಟೆಗಳಿಗೆ ಮತ್ತು ಭಾರತದಲ್ಲಿ ದೊರೆತಿರುವ ಮೊಟ್ಟೆಗಳಿಗೆ ಶೇ.92ರಷ್ಟು ಸಮಾನತೆಯಿದೆ ಎಂದು ಈ ಮೊಟ್ಟೆಗಳ ಚೂರಿನಲ್ಲಿರುವ ಡಿಎನ್‌ಎ ಅಂಶಗಳಿಂದ ತಿಳಿದುಬಂದಿದೆ ಎಂದು ಎಂದು ವರದಿಯಲ್ಲಿ ತಿಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X