Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ನೂತನ ಭಾರತ’ಕ್ಕಾಗಿ ಅಭಿಯಾನ ಘೋಷಿಸಿದ...

‘ನೂತನ ಭಾರತ’ಕ್ಕಾಗಿ ಅಭಿಯಾನ ಘೋಷಿಸಿದ ಪ್ರಧಾನಿ

ವಾರ್ತಾಭಾರತಿವಾರ್ತಾಭಾರತಿ12 March 2017 9:15 PM IST
share
‘ನೂತನ ಭಾರತ’ಕ್ಕಾಗಿ ಅಭಿಯಾನ ಘೋಷಿಸಿದ ಪ್ರಧಾನಿ

 ಹೊಸದಿಲ್ಲಿ,ಮಾ.12: ಇಲ್ಲಿಯ ಬಿಜೆಪಿ ಕೇಂದ್ರಕಚೇರಿಯಲ್ಲಿ ರವಿವಾರ ವಿಜಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಡವರು ಮತ್ತು ಶೋಷಿತರು ಸಂಪೂರ್ಣ ಸ್ವಾವಲಂಬಿಗಳಾಗಿ ಬದುಕುವ ತನ್ನ ನೂತನ ಭಾರತದ ಕನಸನ್ನು ತೆರೆದಿಟ್ಟರು. 2022ರಲ್ಲಿ ದೇಶವು ತನ್ನ 75ನೇ ಸ್ವಾತಂತ್ರೋತ್ಸವ ಆಚರಿಸುವ ವೇಳೆಗೆ ನೂತನ ಭಾರತವನ್ನು ನಿರ್ಮಿಸುವ ಶಪಥವನ್ನು ಕೈಗೊಳ್ಳುವಂತೆ ಅವರು ದೇಶಬಾಂಧವರಿಗೆ ಕರೆ ನೀಡಿದರು.

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಬಳಿಕ ಭಾವಪೂರ್ಣ ಭಾಷಣವನ್ನು ಮಾಡಿದ ಪ್ರಧಾನಿ, ಚುನಾವಣಾ ಫಲಿತಾಂಶಗಳು ತನ್ನ ಮನಸ್ಸಿನಲ್ಲಿ ನೂತನ ಭಾರತದ ಬುನಾದಿಯನ್ನು ಮೂಡಿಸಿವೆ ಎಂದರು.

ಸಾಮಾಜಿಕ -ರಾಜಕೀಯ ಮತಭೇದಗಳನ್ನು ಮರೆತು ಒಂದಾಗುವಂತೆ ಸಮಾಜದ ಎಲ್ಲ ವರ್ಗಗಳಿಗೆ ಮನವಿ ಮಾಡಿಕೊಂಡ ಅವರು,‘ನಾವು ರಚಿಸುವ ಸರಕಾರಗಳು ಎಲ್ಲರ ಏಳಿಗೆಗಾಗಿ ದುಡಿಯಲಿವೆ.ನಮಗೆ ಮತ ನೀಡಿದವರ ಮತ್ತು ಮತ ನೀಡದವರ ಪರವಾಗಿಯೂ ಅವು ಶ್ರಮಿಸಲಿವೆ. ಅವು ನಮ್ಮ ವಿರುದ್ಧವಾಗಿ ನಿಂತವರ ಪರವೂ ಇರುತ್ತವೆ. ಇವರೆಲ್ಲರ ನಡುವೆ ತಾರತಮ್ಯವೆಸಗಲು ಸರಕಾರ ಅಥವಾ ಬಿಜೆಪಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದರು.

  ತನ್ನ 35 ನಿಮಿಷಗಳ ಭಾಷಣದ ಹೆಚ್ಚಿನ ಅವಧಿಯನ್ನು ನೂತನ ಭಾರತದ ಚಿತ್ರಣ ನೀಡಲು ಮೀಸಲಿಟ್ಟ ಮೋದಿ, ಭಾರತವು ಘೋಷಣೆಗಳು ಮತ್ತು ವಾಗಾಡಂಬರಗಳನ್ನು ಮೀರಿ ತನ್ನ 1.25 ಶತಕೋಟಿ ಪ್ರಜೆಗಳ ಸಾಮರ್ಥ್ಯವನ್ನು ಬಳಸಿಕೊಂಡು ಬೆಳೆಯಲಿದೆ ಎಂದರು. ಈ 1.25 ಶತಕೋಟಿ ಪ್ರಜೆಗಳಲ್ಲಿ ಶೇ.65ರಷ್ಟು 35 ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದಾರೆ ಎನ್ನುವದನ್ನು ಅವರು ಬೆಟ್ಟು ಮಾಡಿದರು.

ಪ್ರಗತಿ ಎನ್ನುವುದು ಕಠಿಣ ರಾಜಕೀಯ ವಿಷಯವಾಗಿದೆ. ಪ್ರತಿ ಚುನಾವಣೆ ಯಲ್ಲಿಯೂ ಅಭಿವೃದ್ಧಿ ಕೇಂದ್ರ ವಿಷಯವಾಗಿರುತ್ತದೆ. ಆದರೆ ಈ ಹಿಂದೆ ಅಭಿವೃದ್ಧಿಯನ್ನು ಮುಖ್ಯವಾಗಿಟ್ಟುಕೊಂಡು ಚುನಾವಣೆಗಳಲ್ಲಿ ಹೋರಾಡಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿದ್ದವು. ಆದರೆ ನಾವು ಅಭಿವೃದ್ಧಿಯನ್ನೇ ಮುಖ್ಯ ಚುನಾವಣಾ ಭೂಮಿಕೆಯನ್ನಾಗಿಸಿಕೊಂಡು ಹೋರಾಡಿದೆವು ಎಂದರು.

ಬಡವರ ಏಳಿಗೆಗಾಗಿ ದುಡಿಯಲು ಬಿಜೆಪಿ ಬದ್ಧವಾಗಿದೆ ಎಂದ ಅವರು ಅಭಿವೃದ್ಧಿ ಮತ್ತು ಸಾಧನೆಯ ಕುರಿತು ಮಾತನಾಡಿದರು.
ನಮಗೂ ಪ್ರಗತಿ ಹೊಂದಬೇಕಾಗಿದೆ ಮತ್ತು ನಿಮ್ಮಿಂದ ಅವಕಾಶವನ್ನು ಬಯಸುತ್ತಿದ್ದೇವೆ ಎಂದು ಬಡವರು ಹೇಳುತ್ತಿದ್ದಾರೆ. ಇದು ನೂತನ ಭಾರತದ ಬುನಾದಿಯಾಗಿದೆ. ಇದು ನೂತನ ಭಾರತದ ಸಿದ್ಧಾಂತ ಮತ್ತು ವಿಶ್ವಾಸವಾಗಿದೆ ಎಂದರು.

ಮಧ್ಯಮ ವರ್ಗಗಳ ಮೇಲಿನ ಹೊರೆ ತಗ್ಗಬೇಕು,ಇದರಿಂದಾಗಿ ಅವರು ಪ್ರಕಾಶಿಸಲು ಸಾಧ್ಯವಾಗುತ್ತದೆ. ಬಡವರ ಶಕ್ತಿ ಮತ್ತು ಮಧ್ಯಮ ವರ್ಗಗಳ ಆಕಾಂಕ್ಷೆಗಳನ್ನು ನಾವು ಒಂದಾಗಿಸಿದರೆ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದಾಗ ಭಾರತ ಮಾತಾ ಕಿ ಜೈ ಎಂಬ ಘೋಷಣೆಗಳು ಮೊಳಗಿದವು.

ತನ್ನ ನೂತನ ಭಾರತದ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿದ ಅವರು, ಅದು 35ಕ್ಕಿಂತ ಕೆಳಗಿನ ಹರೆಯದವರ ಕನಸುಗಳಾಗಿರುತ್ತದೆ, ಮಹಿಳೆಯರ ಆಕಾಂಕ್ಷೆಗಳು ಈಡೇರುವ ಮತ್ತು ಬಡವರಿಗೆ ಅವಕಾಶಗಳನ್ನು ಒದಗಿಸುವ ಭಾರತವಾಗಿರುತ್ತದೆ ಎಂದರು.

ಬಿಜೆಪಿಯ ಗೆಲುವನ್ನು ವಿಶ್ಲೇಷಿಸಿದ ಅವರು ರಾಜಕೀಯ ಪಂಡಿತರನ್ನು ಮತ್ತು ವಿಶ್ಲೇಷಕರನ್ನು ನಯವಾಗಿಯೇ ತಿವಿದರು. ಮತದಾನೋತ್ತರ ಸಮೀಕ್ಷೆಗಳನ್ನೂ ಅವರು ಬಿಡಲಿಲ್ಲ. ಗೆಲುವಿಗೆ ಬಹಳಷ್ಟು ಕಾರಣಗಳಿರುತ್ತವೆ. ಆದರೆ ದಾಖಲೆಯ ಪ್ರಮಾಣದಲ್ಲಿ ಮತದಾನದ ಬಳಿಕ ಇಷ್ಟೊಂದು ಭಾರೀ ಗೆಲುವು ಲಭಿಸಿರುವುದು ವಿಶೇಷವಾಗಿದೆ ಮತ್ತು ಪ್ರತಿಯೊಬ್ಬರನ್ನೂ ಚಿಂತನೆಗೆ ಹಚ್ಚಿದೆ. ರಾಜಕೀಯ ಪಂಡಿತರು ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ ಎಂದರು.

ಇಷ್ಟೊಂದು ದುಡಿಯುವ ಅಗತ್ಯವೇನಿದೆ ಎಂದು ನಮ್ಮ ವಿರೋಧಿಗಳು ಪ್ರಶ್ನಿಸುತ್ತಾರೆ. ಇದು ನಮ್ಮ ಪಾಲಿಗೆ ಅತ್ಯಂತ ದೊಡ್ಡ ಗೌರವವಾಗಿದೆ ಎಂದ ಅವರು, ನಾವು ತಪ್ಪುಗಳನ್ನು ಮಾಡಬಹುದು,ಆದರೆ ನಮ್ಮ ಉದ್ದೇಶಗಳು ಎಂದಿಗೂ ತಪ್ಪಾಗಿರುವುದಿಲ್ಲ ಎಂದರು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X