Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನೆದರ್‌ಲ್ಯಾಂಡ್ ಪ್ರಯಾಣಕ್ಕೆ ಟರ್ಕಿ...

ನೆದರ್‌ಲ್ಯಾಂಡ್ ಪ್ರಯಾಣಕ್ಕೆ ಟರ್ಕಿ ಸಚಿವರಿಗೆ ನಿಷೇಧ

ಎರ್ದೊಗಾನ್ ಪರ ರ್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯಲು ಕ್ರಮ

ವಾರ್ತಾಭಾರತಿವಾರ್ತಾಭಾರತಿ12 March 2017 9:18 PM IST
share
ನೆದರ್‌ಲ್ಯಾಂಡ್ ಪ್ರಯಾಣಕ್ಕೆ ಟರ್ಕಿ ಸಚಿವರಿಗೆ ನಿಷೇಧ

ಆ್ಯಮ್‌ಸ್ಟರ್‌ಡಂ, ಮಾ. 12: ಟರ್ಕಿ ವಿದೇಶ ಸಚಿವ ವೌಲೂತ್ ಕವುಸೊಗ್ಲು ರೋಟರ್‌ಡ್ಯಾಮ್‌ಗೆ ಬರುವುದನ್ನು ನೆದರ್‌ಲ್ಯಾಂಡ್ಸ್ ಶನಿವಾರ ನಿಷೇಧಿಸಿದೆ.

ಇದಕ್ಕೂ ಮೊದಲು, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರಿಗೆ ಹೊಸದಾಗಿ ಪ್ರಬಲ ಅಧಿಕಾರಗಳನ್ನು ನೀಡುವುದರ ಪರವಾಗಿ ರೋಟರ್‌ಡ್ಯಾಮ್‌ನಲ್ಲಿ ನಡೆಯಲಿದ್ದ ಟರ್ಕಿ ನಾಗರಿಕರ ರ್ಯಾಲಿಯಲ್ಲಿ ಟರ್ಕಿ ವಿದೇಶ ಸಚಿವರು ಭಾಗವಹಿಸುವುದನ್ನು ನೆದರ್‌ಲ್ಯಾಂಡ್ಸ್ ನಿಷೇಧಿಸಿತ್ತು.

ನೂತನ ಅಧಿಕಾರಗಳನ್ನು ಅಧ್ಯಕ್ಷರಿಗೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಮುಂದಿನ ತಿಂಗಳು ಜನಮತಗಣನೆ ನಡೆಯಲಿದೆ.

ಆದರೆ, ತಾನು ಖಂಡಿತವಾಗಿಯೂ ರೋಟರ್‌ಡ್ಯಾಮ್‌ಗೆ ಹೋಗುವುದಾಗಿ ಶನಿವಾರ ಬೆಳಗ್ಗೆ ಕವುಸೊಗ್ಲು ಹೇಳಿದ್ದರು ಹಾಗೂ ಡಚ್ ಸರಕಾರವು ತನ್ನ ದೇಶದಲ್ಲಿರುವ ಟರ್ಕಿ ನಾಗರಿಕರನ್ನು ‘ಒತ್ತೆಯಾಳು’ಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ನೆದರ್‌ಲ್ಯಾಂಡ್ ತನಗೆ ಪ್ರವೇಶ ನೀಡದಿದ್ದರೆ ಅದರ ವಿರುದ್ಧ ಕಠಿಣ ಆರ್ಥಿಕ ಮತ್ತು ರಾಜಕೀಯ ದಿಗ್ಬಂಧನೆಗಳನ್ನು ವಿಧಿಸಿವುದಾಗಿಯೂ ಕವುಸೊಗ್ಲು ಬೆದರಿಕೆ ಹಾಕಿದ್ದರು. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನೆದರ್‌ಲ್ಯಾಂಡ್ ಕಠಿಣ ನಿಲುವು ತೆಗೆದುಕೊಂಡಿದೆ.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಸವಾಲು ಮತ್ತು ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಕವುಸೊಗ್ಲು ವಿಮಾನಕ್ಕೆ ರೋಟರ್‌ಡ್ಯಾಮ್‌ನಲ್ಲಿ ಇಳಿಯಲು ಅವಕಾಶ ನೀಡಲಾಗುವುದಿಲ್ಲ ಎಂದು ನೆದರ್‌ಲ್ಯಾಂಡ್ ಹೇಳಿದೆ. ಅದೂ ಅಲ್ಲದೆ, ಬೆದರಿಕೆಯಿಂದಾಗಿ ಸಮಸ್ಯೆಗೆ ಸರ್ವಸಮ್ಮತ ಪರಿಹಾರವೊಂದನ್ನು ಕಂಡುಹಿಡಿಯುವ ಸಾಧ್ಯತೆಯೂ ಕೈತಪ್ಪಿಹೋಗಿದೆ ಎಂದಿದೆ.

ನುಸುಳಿ ಬಂದ ಸಚಿವೆ ವಾಪಸ್

ನುಸುಳಿದ ಸಚಿವೆರೋಟರ್‌ಡ್ಯಾಮ್‌ನಲ್ಲಿರುವ ಟರ್ಕಿ ಪ್ರಜೆಗಳ ರ್ಯಾಲಿಯಲ್ಲಿ ಭಾಗವಹಿಸಲು ಟರ್ಕಿ ವಿದೇಶ ಸಚಿವರಿಗೆ ನೆದರ್‌ಲ್ಯಾಂಡ್ ಅವಕಾಶ ನಿರಾಕರಿಸಿದರೂ, ಟರ್ಕಿಯ ಇನ್ನೋರ್ವ ಸಚಿವರು ರ್ಯಾಲಿಯಲ್ಲಿ ಪ್ರತ್ಯಕ್ಷರಾದ ಘಟನೆ ನಡೆದಿದೆ.

ಟರ್ಕಿಯ ಕುಟುಂಬ ಕಲ್ಯಾಣ ಸಚಿವೆ ಫಾತಿಮಾ ಬೆತುಲ್ ಸಯನ್ ಕಯ ಜರ್ಮನಿಯ ಮೂಲಕ ಕಾರಿನಲ್ಲಿ ಆಗಮಿಸಿದರು.

ಆದರೆ, ರೋಟರ್‌ಡ್ಯಾಮ್‌ನಲ್ಲಿರುವ ಟರ್ಕಿಯ ಕಾನ್ಸುಲೇಟ್ ಕಚೇರಿಯ ಎದುರು 1,000ಕ್ಕೂ ಅಧಿಕ ಜನರು ಭಾಗವಹಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡಲಿಲ್ಲ.

ಅವರನ್ನು ತಡೆದ ಪೊಲೀಸರು ಜರ್ಮನಿಯ ಗಡಿವರೆಗೆ ಅವರನ್ನು ಬಿಟ್ಟುಬಂದರು.

 ಈ ಘಟನೆಯ ಹಿನ್ನೆಲೆಯಲ್ಲಿ, ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದರು. ಈ ಸಂದರ್ಭದಲ್ಲಿ ನೂರಾರು ಕಾರುಗಳು ರಸ್ತೆಗಳನ್ನು ಬಂದ್ ಮಾಡಿದವು.

ಕುದುರೆಗಳ ಮೇಲೆ ಆಸೀನರಾದ ಪೊಲೀಸರು ಪ್ರತಿಭಟನಕಾರರ ಗುಂಪಿನತ್ತ ಧಾವಿಸಿ ಚದುರಿಸಲು ಪ್ರಯತ್ನಿಸಿದರು ಹಾಗೂ ಜಲಫಿರಂಗಿ ಧಾರೆಯನ್ನು ಬಳಸಲಾಯಿತು.

ನಾಝಿ ಯುಗದ ಪಳೆಯುಳಿಕೆ: ಎರ್ದೊಗಾನ್

 ತನ್ನ ವಿದೇಶ ಸಚಿವರ ಪ್ರಯಾಣಕ್ಕೆ ನೆದರ್‌ಲ್ಯಾಂಡ್ ನಿಷೇಧ ವಿಧಿಸಿರುವುದು ಹಿಟ್ಲರ್‌ನ ನಾಝಿ ಯುಗದ ಪಳೆಯುಳಿಕೆಯಂತಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಶನಿವಾರ ಹೇಳಿದ್ದಾರೆ.

‘‘ಅವರು ನಾಝಿಗಳ ಪಳೆಯುಳಿಕೆಗಳು, ಅವರು ಫ್ಯಾಶಿಸ್ಟರು’’ ಎಂದು ಇಸ್ತಾಂಬುಲ್‌ನಲ್ಲಿ ಶನಿವಾರ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

‘‘ನಿಮಗೆ ಬೇಕೆನಿಸಿದಷ್ಟು ಬಾರಿ ನಮ್ಮ ವಿದೇಶ ಸಚಿವರು ನಿಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿ. ಆದರೆ, ಇನ್ನು ಮುಂದೆ ನಿಮ್ಮ ವಿಮಾನಗಳು ಟರ್ಕಿಯಲ್ಲಿ ಹೇಗೆ ಇಳಿಯುತ್ತವೆ ಎನ್ನುವುದನ್ನು ನಾವು ನೋಡುತ್ತೇವೆ’’ ಎಂದು ಎರ್ದೊಗಾನ್ ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X