ಆಟೊ ಢಿಕ್ಕಿ: ವೃದ್ಧ ಸಾವು
ಕುಶಾಲನಗರ, ಮಾ.15: ನಗರದ ಮಾರುಕಟ್ಟೆ ರಸ್ತೆಯಲ್ಲಿ ನೆನ್ನೆ ಸಂಜೆಯ ಸಂದರ್ಭದಲ್ಲಿ ಆರೋಗ್ಯಸ್ವಾಮಿ(71) ಎಂಬವರು ತಮ್ಮ ನಿವಾಸದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೊ ಢಿಕ್ಕಿ ಹೊಡೆದ ಪರಿಣಾಮ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಗಾಯಗೊಂಡ ಅವರನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕ್ಸಿತೆ ನೀಡಿ, ಮೈಸೂರಿನ ಜೆ.ಎಸ್ಸೆಸ್ಸ್ ಆಸ್ಪತ್ರೆಗೆ ದಾಖಲಿಸಯಿತು. ಆದರೆ ಚಿಕ್ಸಿತೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಟೊ ಚಾಲಕನು ಗಾಯಗೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





