Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಉತ್ತರ ಪ್ರದೇಶದಲ್ಲಿ ಬಿಜೆಪಿ ದಿಗ್ವಿಜಯ:...

ಉತ್ತರ ಪ್ರದೇಶದಲ್ಲಿ ಬಿಜೆಪಿ ದಿಗ್ವಿಜಯ: ಆರೆಸ್ಸೆಸ್‌‌ನಲ್ಲೇಕೆ ಸೂತಕದ ವಾತಾವರಣ..?

ಕೆ.ಎಲ್. ಚಂದ್ರಶೇಖರ್ ಐಜೂರುಕೆ.ಎಲ್. ಚಂದ್ರಶೇಖರ್ ಐಜೂರು16 March 2017 9:01 AM IST
share
ಉತ್ತರ ಪ್ರದೇಶದಲ್ಲಿ ಬಿಜೆಪಿ ದಿಗ್ವಿಜಯ: ಆರೆಸ್ಸೆಸ್‌‌ನಲ್ಲೇಕೆ ಸೂತಕದ ವಾತಾವರಣ..?

ಇನ್ನೊಂದು ಸುತ್ತಿನ ಪ್ರಧಾನ ಮಂತ್ರಿ ಖುರ್ಚಿ ಹೆಚ್ಚೂಕಮ್ಮಿ ನರೇಂದ್ರ ಮೋದಿಯವರ ಪಾಲಾಗಲಿರುವುದನ್ನು ಈಗ ಯಾರಾದರೂ ಅಲ್ಲಗೆಳೆಯುವುದು ಕಷ್ಟ. ಒಂದರ್ಥದಲ್ಲಿ ವಿರೋಧಿಗಳೇ ಇಲ್ಲದ ಕುಸ್ತಿ ಅಖಾಡದಲ್ಲಿ ನರೇಂದ್ರ ಮೋದಿಯವರದು ಬಲಿಷ್ಠ ಪೈಪೋಟಿ ಎದುರಾಗದ ಸಲೀಸು ಕದನ. ಮೋದಿಯವರ ಮುಂಬಾಲಕ ಹಿಂಬಾಲಕ ಕಾರ್ಪೊರೇಟ್ ಧಣಿಗಳು ಅವರ ಜತೆಗಿರುವ ತನಕ ಈ ಸಲೀಸು ಕದನ ಇನ್ನೊಂದಷ್ಟು ವರ್ಷಗಳ ಕಾಲ ಸಲೀಸಾಗಿಯೇ ನಡೆಯಲಿದೆ. ಹಾಗಿದ್ದರೆ, ಈ ಸಲೀಸು ಕದನಕ್ಕೆ ಕೊನೆ ಎಂಬುದಿಲ್ಲವೇ? ಮೋದಿಯವರನ್ನು ಈ ಅಖಾಡದಲ್ಲಿ ಯಾರೂ ಬಗ್ಗು ಬಡಿಯಲಾರರೇ?

ಬಹುಶಃ ಈಗ ಮೋದಿಯವರನ್ನು ಬಗ್ಗು ಬಡಿಯಲು ಸಾಧ್ಯವಿರುವುದು ಒಬ್ಬನೇ ಒಬ್ಬನಿಗೆ ಮಾತ್ರ. ಅವನು ಬೇರಾರೂ ಅಲ್ಲ ಆರೆಸ್ಸೆಸ್.

ಈ ದೇಶ ಬಲಪಂಥೀಯರಿಗೆ ಅರ್ಥವಾಗಿರುವಷ್ಟು, ಅವರಿಗೆ ಪಳಗಿರುವಷ್ಟು ಮತ್ತಾರಿಗೂ ನಡು ಬಗ್ಗಿಸಿಲ್ಲ. ಈ ದೇಶ ಬಲಪಂಥೀಯರಿಗೆ ಅರ್ಥವಾಗಿದ್ದರಲ್ಲಿ ಕೇವಲ ಎರಡೇ ಎರಡು ಪರ್ಸೆಂಟ್ ಎಡಪಂಥೀಯರಿಗೆ ಅರ್ಥವಾಗಿಬಿಟ್ಟಿದ್ದಿದ್ದರೆ ಇಂಡಿಯಾದ ರಾಜಕಾರಣದ ವ್ಯಾಕರಣ ಇವತ್ತು ಇಷ್ಟೊಂದು ಶೋಚನೀಯವಾಗಿರುತ್ತಿರಲಿಲ್ಲ.

ಮೊನ್ನೆಯ ಚುನಾವಣಾ ಫಲಿತಾಂಶ ಯಾರಿಗ್ಯಾವ ಒಳನೋಟಗಳನ್ನು ನೀಡಿತೋ ಇಲ್ಲವೋ ಗೊತ್ತಿಲ್ಲ. ನನಗಂತೂ ಬಿಜೆಪಿ ಜತೆಗೂಡಿರುವ ಕಾರ್ಪೊರೇಟ್ ಧಣಿಗಳ Workaholic Strategy ಇಂಚಿಂಚೆ ಅರ್ಥವಾಗಲು ಶುರುವಾಯಿತು. ದುಡ್ಡು, ಜಾತಿ, ಉಪಜಾತಿ, ಧರ್ಮ, ದೇವರು ಮತ್ತು ತೋಳ್ಬಲಗಳನ್ನೆಲ್ಲ ಸ್ಟ್ರ್ಯಾಟೆಜಿಯಾಗಿ ಬಿಜೆಪಿ ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾದ ಚುನಾವಣೆಯಿದು. ಈ ಸ್ಟ್ರ್ಯಾಟೆಜಿಯನ್ನು ಚುನಾವಣಾ ರಣತಂತ್ರವೆಂದು ಬೇಕಿದ್ದರೆ ಕರೆಯಬಹುದು. ಈ ರಣತಂತ್ರ ಈಗ ಆರೆಸ್ಸೆಸ್ಸಿಗೂ ದಿಗಿಲು ಹುಟ್ಟಿಸಿದೆ.

ಸದಾ ತನ್ನ ಅಂಕೆಯಲ್ಲಿ ಹಿಡಿದಿಟ್ಟುಕೊಳ್ಳಲು ಹವಣಿಸುವ ಆರೆಸ್ಸೆಸ್ ತಂತ್ರಗಾರಿಕೆಯನ್ನು ಮೀರಿ ಮೋದಿ ಜಿಗಿಯುತ್ತಿದ್ದಾರೆ. ಆರೆಸ್ಸೆಸ್ಸಿಗೆ ತಲೆನೋವಾಗಿರುವುದೆ ಇದು. ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಮೋಹನ್ ಭಾಗವತ್ ಮೂಲಕ ಮೀಸಲಾತಿಯ ಕೆಚ್ಚಲಿಗೆ ಕಲ್ಲೆಸೆಯುವಂತೆ ಆರೆಸ್ಸೆಸ್ ಮಾಡಿತು. ಅದರ ಪರಿಣಾಮ ಬಿಹಾರದ ಜನತೆ ಬಿಜೆಪಿಯ ಮುಖಮೂತಿ ನೋಡದೆ ಇಕ್ಕತೊಡಗಿದರು. ಈ ತಂತ್ರ ಮೊನ್ನೆ ಉತ್ತರಪ್ರದೇಶದ ಚುನಾವಣೆಯಲ್ಲಿ ಕಂಡುಬರಲಿಲ್ಲ. ಆರೆಸ್ಸೆಸ್ಸಿನ ಮುಂಚೂಣಿ ನಾಯಕರನ್ನು ಮೋದಿ ಮೊನ್ನೆಯ ಚುನಾವಣೆಯಲ್ಲಿ ಮನೆಯಲ್ಲೇ ಉಳಿದು ಬರೀ ಟಿ.ವಿ. ನೋಡುವಂತೆ ಮಾಡಿದರು. ಆರೆಸ್ಸೆಸ್ ಕೆರಳಲು ಇನ್ನೇನೂ ಬೇಕು. ಕಾರ್ಪೊರೇಟ್ ಕುಳಗಳು ಮೋದಿಯವರ ಜೊತೆಯಲ್ಲಿರುವ ತನಕ ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲೇಬೇಕು’ ಎನ್ನುವ ಬಾಯಿಗಳಿಗೆ ಬೀಗ ಬೀಳಲಿದೆ.

ಉತ್ತರಪ್ರದೇಶದ ಬಿಜೆಪಿಯ ದಿಗ್ವಿಜಯದಿಂದ ಹೆಚ್ಚು ಆತಂಕ, ಕಳವಳಕ್ಕೀಡಾಗಿರುವುದು ಆರೆಸ್ಸೆಸ್. ಆರೆಸ್ಸೆಸ್ಸಿನ ಬ್ರಾಹ್ಮಣ್ಯದ ಹಿಡಿತ ಮೀರಿ ಅಬ್ರಾಹ್ಮಣನೊಬ್ಬ ಬಿಜೆಪಿಯಲ್ಲಿ ಬೆಳೆಯಲುಂಟೇ? ಬದುಕಲುಂಟೇ? ಮೊನ್ನೆಯ ಗೆಲುವಿನ ಸಂಭ್ರಮದ ಅಲೆಯಲ್ಲಿ ಬಿಜೆಪಿ ಮತ್ತು ಕಾರ್ಪೊರೇಟ್ ಮಾಧ್ಯಮಗಳು ತೇಲುತ್ತಿದ್ದರೆ ಆರೆಸ್ಸೆಸ್ ಸೂತಕದಲ್ಲಿದ್ದಂತೆ ತೋರುತ್ತಿತ್ತು. ಮೋಹನ್ ಭಾಗವತರ ಮುಖದಲ್ಲಿ ಗೆಲುವಿನ ಗೆರೆಗಳೇ ಕಾಣಲಿಲ್ಲ. ಟಿ.ವಿ. ಮಾಧ್ಯಮಗಳಿಗೂ ಮೋಹನ್ ಭಾಗವತರ ಅಭಿಪ್ರಾಯ ಕೇಳಿಸಿಕೊಳ್ಳುವ ತುರ್ತಿದ್ದಂತೆ ಕಂಡುಬರಲಿಲ್ಲ.

ಹಾಗೇ ನೋಡಿದರೆ ಈ ದೇಶದಲ್ಲಿ ನರೇಂದ್ರ ಮೋದಿಯವರ ಎದುರು ಅವರ ಸಮಕ್ಕೆ ನಿಲ್ಲಬಲ್ಲ ಎದುರಾಳಿಯೇ ಇಲ್ಲ. ಬಹುಮುಖ್ಯವಾಗಿ ಮೋದಿಯವರನ್ನು ಸದೆಬಡಿಯಬಲ್ಲ ಸಂಗತಿಗಳೇ ಅವರ ಎದುರಾಳಿಗಳ ಕೈಯಲ್ಲಿಲ್ಲ. ಮುಂಬರುವ ಲೋಕಸಭಾ ಚುನಾವಣೆಯ ತೀರ್ಪಿಗೆ ಮುನ್ನುಡಿಯಂತೆ ಉತ್ತರಪ್ರದೇಶದ ಫಲಿತಾಂಶ ಪ್ರಕಟಗೊಂಡಿದೆ. ಬಲಪಂಥೀಯರಂತೆಯೇ ದೇಶದುದ್ದಕ್ಕೂ ಬಹುದೊಡ್ಡ ಕಾರ್ಯಕರ್ತ ಸಮೂಹವನ್ನು ಹೊಂದಿರುವ ಎಡಪಂಥೀಯರಿಗೆ ಈ ಎಲ್ಲಾ ಸ್ಟ್ರ್ಯಾಟೆಜಿಗಳೊಂದಿಗೆ ಈ ದೇಶ ಚುನಾವಣೆಯ ಭಾಗವಾಗಿ ಇನ್ನಷ್ಟು ಅರ್ಥವಾಗಲು ಇನ್ನೊಂದೈದು ಸಾವಿರ ವರ್ಷಗಳಾದರೂ ಬೇಕು. ಆಗ ಈ ದೇಶ ಇನ್ನಾವ ವಿಕಾರದ ತುದಿ ತಲುಪಿರುತ್ತೋ ಯಾರು ಬಲ್ಲರು.

ಸರಿ, ಈಗ ನಾವೇನೂ ಮಾಡುವುದು. ನಿಜಕ್ಕೂ ನಾವೇನಾದರೂ ಮಾಡುವ ಸ್ಥಿತಿಯಲ್ಲಿದ್ದೀವಾ? ಇದು ಪ್ರಶ್ನೆ. ಬಹುಶಃ ನಾವು ಮಾಡಬಹುದಾದದ್ದು ಇಷ್ಟೇ: ‘ಬಿಜೆಪಿ ವರ್ಸಸ್ ಆರೆಸ್ಸೆಸ್’ ಎಂಬ ಪತನಕಾಂಡದ ಹೊಸ ಅಧ್ಯಾಯದ ಆರಂಭಕ್ಕಾಗಿ ನಾವೆಲ್ಲ ಚಡಪಡಿಸುವುದು ಮತ್ತೂ ಈ ಅಧ್ಯಾಯದ ನಂತರದ ಫಲಿತಾಂಶ ಆದಷ್ಟು ಬೇಗ ಹೊರಬೀಳಲೆಂದು ನಮ್ಮ ನಮ್ಮ ಕುಲದೈವಗಳಲ್ಲಿ ಪ್ರಾರ್ಥಿಸುವುದು.’ ಇದಿಷ್ಟೇ ಈ ಹೊತ್ತಲ್ಲಿ ನಾವು ಮಾಡಬಹುದಾದದ್ದು.

share
ಕೆ.ಎಲ್. ಚಂದ್ರಶೇಖರ್ ಐಜೂರು
ಕೆ.ಎಲ್. ಚಂದ್ರಶೇಖರ್ ಐಜೂರು
Next Story
X