Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಷ್ಟು ಕರೆದರೂ ತನ್ನ ತಂದೆ ಯಾಕೆ ಗಲ್ಫ್...

ಎಷ್ಟು ಕರೆದರೂ ತನ್ನ ತಂದೆ ಯಾಕೆ ಗಲ್ಫ್ ಭೇಟಿಗೆ ಬರುತ್ತಿಲ್ಲ ಎಂದು ಆತನಿಗೆ ಕೊನೆಗೂ ತಿಳಿಯಿತು ...

ಒಂದು ಮನಕಲಕುವ ತಂದೆ - ಮಗನ ಕಹಾನಿ

ವಾರ್ತಾಭಾರತಿವಾರ್ತಾಭಾರತಿ17 March 2017 6:59 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಎಷ್ಟು ಕರೆದರೂ ತನ್ನ ತಂದೆ ಯಾಕೆ ಗಲ್ಫ್ ಭೇಟಿಗೆ ಬರುತ್ತಿಲ್ಲ ಎಂದು ಆತನಿಗೆ ಕೊನೆಗೂ ತಿಳಿಯಿತು ...

ತಿರುವನಂತಪುರಂ, ಮಾ.17: ಕೇರಳ ಮೂಲದ ದೇವಿಸ್ ದೇವಸ್ಸಿ ಚಿರಾಮೆಲ್ ಅವರು ಉದ್ಯೋಗದಲ್ಲಿರುವುದು ಬಹರೈನ್ ನ ಮನಾಮದಲ್ಲಿ. ಅವರು ಇತ್ತೀಚೆಗೆ ಮಾಡಿದ ಫೇಸ್ ಬುಕ್ ಪೋಸ್ಟ್ ಒಂದು ಅವರು ತಮ್ಮ ತಂದೆಯ ಮೇಲಿಟ್ಟಿರುವ ಅಪಾರ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಹೊರಹೊಮ್ಮಿದ್ದು ವೈರಲ್ ಆಗಿದೆ.

ಕಳೆದ ಹಲವು ವರ್ಷಗಳಿಂದ ಬಹರೈನ್ನಲ್ಲಿರುವ ದೇವಿಸ್ ಅವರು ತಮ್ಮ ತಂದೆಯನ್ನು ತಾವು ಉದ್ಯೋಗದಲ್ಲಿರುವ ಸ್ಥಳಕ್ಕೆ ಭೇಟಿ ನೀಡಲು ಹಲವಾರು ಬಾರಿ ಆಹ್ವಾನಿಸಿದ್ದರೂ ಅವರು ನಯವಾಗಿ ನಿರಾಕರಿಸಿದ್ದರು. ಅದಕ್ಕೆ ಕಾರಣವೇನೆಂದು ಅವರಿಗೆ ಇತ್ತೀಚೆಗಷ್ಟೇ ತಿಳಿದು ಬಂದಿತ್ತು.

ಯಾವತ್ತೂ ಗ್ರಾಮದಲ್ಲಿಯೇ ವಾಸಿಸಿದ್ದ ದೇವಿಸ್ ಅವರ ತಂದೆ ಚಪ್ಪಲಿ ಧರಿಸಿದವರೇ ಅಲ್ಲ. ಅಷ್ಟೇ ಅಲ್ಲ, ಅವರು ಯಾವಾಗಲೂ ಮುಂಡು ಧರಿಸಿಯೇ ಇರುತ್ತಾರೆ.. ತಮ್ಮ ಮಗ ತಮ್ಮನ್ನು ವಿದೇಶಕ್ಕೆ ಆಹ್ವಾನಿಸಿದಾಗ ಚಪ್ಪಲಿ ಹಾಗೂ ಪ್ಯಾಂಟ್ ಧರಿಸದ ಹಾಗೂ ಮುಂಡು ಧರಿಸಿದ ತನ್ನನ್ನು ನೋಡಿ ಆತನಿಗೆ ಆತನ ಸ್ನೇಹಿತರೆದುರು ಅವಮಾನವಾಗಬಹುದೆಂಬ ಭಯದಿಂದ ಅವರು ಮಗನ ಆಹ್ವಾನವನ್ನು ನಿರಾಕರಿಸುತ್ತಲೇ ಬಂದಿದ್ದರು.

ಆದರೆ ಇತ್ತೀಚೆಗೆ ಬಹರೈನ್ಗೆ ಬರುವಂತೆ ದೇವಿಸ್ ತಮ್ಮ ತಂದೆಯ ಮನವೊಲಿಸಿಯೇ ಬಿಟ್ಟರು. ಆದರೆ ಅವರ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ದೇವಿಸ್ ಕೂಡ ತಂದೆಯಂತೆಯೇ ಮುಂಡು ಧರಿಸಿದರು ಹಾಗೂ ಚಪ್ಪಲಿ ಧರಿಸುವುದನ್ನು ಬಿಟ್ಟು ಬಿಟ್ಟರು.

ತಮ್ಮ ತಂದೆ ಬಹರೈನ್ನಿಂದ ಹಿಂದಿರುಗುವ ವರೆಗೆ ತಾವು ಕೂಡ ಚಪ್ಪಲಿ ಅಥವಾ ಪ್ಯಾಂಟ್ ಧರಿಸುವುದಿಲ್ಲ, ಕೇವಲ ಮುಂಡು ಧರಿಸುತ್ತೇನೆ ಎಂದು ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರಲ್ಲದೆ, ತಮ್ಮ ತಂದೆ ಹಾಗೂ ತಾಯಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ತಾವು ಕುಳಿತಿರುವ ಚಿತ್ರವೊಂದನ್ನು ಪೋಸ್ಟ್ ಕೂಡ ಮಾಡಿದ್ದಾರೆ.

‘‘ಚಪ್ಪಲಿ ಧರಿಸದಿರುವ ನನ್ನ ತಂದೆಯನ್ನು ನಾನು ಪ್ರೀತಿಸುತ್ತೇನೆ. ಅವರೇಕೆ ನನ್ನ ಆಹ್ವಾನ ನಿರಾಕರಿಸುತ್ತಿದ್ದರೆಂದು ನನಗೆ ಡಿಸೆಂಬರಿನಲ್ಲಷ್ಟೇ ತಿಳಿದು ಬಂದಿತ್ತು. ಅವರು ಕೇರಳದ ಒಂದು ಗ್ರಾಮದ ರೈತ. ನನ್ನ ತಾಯಿ ಬಹರೈನ್ಗೆ ಹಲವು ಬಾರಿ ಬಂದಿದ್ದರೂ ತಂದೆ ಬಂದಿಲ್ಲ. ಬೆಟ್ಟಗುಡ್ಡ ಕಾಡು ಪ್ರದೇಶಗಳಲ್ಲಿ ಬರಿಗಾಲಲ್ಲಿ ನಡೆದ ಅವರ ಕಾಲಿನಿಂದ ಚಿಮ್ಮಿದ ರಕ್ತದಿಂದಾಗಿಯೇ ನಾನು ಜೀವನದಲ್ಲಿ ಏನನ್ನಾದರೂ ಸಾಧಿಸುವಂತಾಗಿದೆ. ಹೆತ್ತವರು ತಮ್ಮ ಮಕ್ಕಳಿಗಾಗಿ ಅನುಭವಿಸುವ ಯಾತನೆ ನನಗೆ ಗೊತ್ತು. ನಮ್ಮ ಹೆತ್ತವರ ಸಮಾಧಿಗೆ ಹೂವುಗಳನ್ನಿಡುವ ಬದಲು ಅವರ ಜೀವಿತಾವಧಿಯಲ್ಲಿ ಅವರ ಕೈಗಳಲ್ಲಿ ಹೂವುಗಳನ್ನಿಡೋಣ’’ ದೇವಿಸ್ ಅವರ ಈ ಭಾವನಾತ್ಮಕ ಪೋಸ್ಟ್ ಹಲವರ ಕಣ್ಣಲ್ಲಿ ನೀರು ತರಿಸಿರಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X