Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಡವೆಗೆ ಮಿಡಿದ ಹೃದಯಗಳು !

ಕಡವೆಗೆ ಮಿಡಿದ ಹೃದಯಗಳು !

ವಾರ್ತಾಭಾರತಿವಾರ್ತಾಭಾರತಿ17 March 2017 7:06 PM IST
share
ಕಡವೆಗೆ ಮಿಡಿದ ಹೃದಯಗಳು !

ಹಾಸನ, ಮಾ.17: ಹಲವು ವರ್ಷಗಳಿಂದ ಸಾಕಿ ಸಲುಹಿದ ಕಡವೆಯನ್ನು ನೋಡಿದ ಕುಟುಂಬದ ಹೃದಯಗಳು ಮಿಡಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹತ್ತಿಹಳ್ಳಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ಪರಮೇಶ್ ಮತ್ತು ಕುಸುಮ ದಂಪತಿಗಳು ಕಡವೆಯನ್ನು ನೋಡಿ ಮರುಗಿದವರು.

ಕಳೆದ 7 ವರ್ಷಗಳ ಹಿಂದೆ ಅವರ ಹಸು ಕರು ಹಾಕಿತು. ದುರದೃಷ್ಟವಶ ಕರು ಸಾವನಪ್ಪಿತ್ತು. ಕಾಡಿನಲ್ಲಿ ಕಡವೆ ಮರಿಯ ತಾಯಿ ಬೇಟೆಗಾರನ ಗುರಿಗೆ ಸಿಕ್ಕಿ ಸಾವನಪ್ಪಿದ್ದು, ಒಂದೇ ಮರಿ ಉಳಿದಿತ್ತು.  ಪರಮೇಶ್ ಹಸುಗಳು ಆ ಸ್ಥಳಕ್ಕೆ ಅಹಾರಕ್ಕಾಗಿ ಹೋಗಿ ಬರುವಾಗ ಜೊತೆಯಲ್ಲಿ ಕಡವೆ ಮರಿ ಕೂಡ ಸೇರಿಕೊಂಡಿತು. ಕೆಲ ದಿನಗಳಲ್ಲೆ ಕುಟುಂಬದ ಸದಸ್ಯರಾಗಿ ಹೊಂದಿಕೊಂಡಿತು.

ಹಸು ಈ ಮರಿಗೆ ಹಾಲನ್ನು ಕುಡಿಸುತಿತ್ತು. ಮೂರು ವರ್ಷದವರೆಗೂ ಕಡವೆ ಅವರ ಸುಪರ್ದಿಯಲ್ಲಿ ಇತ್ತು.  ಕಾಡಿನ ಪ್ರಾಣಿಗಳೊಂದಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕಡವೆಯನ್ನು ಕೊಂಡೂಯ್ದರು. ಸುರಕ್ಷಿತವಾಗಿ ಕಡವೆಯನ್ನು ನಮಗೆ ಒಪ್ಪಿಸಿದ್ದೀರಿ ಎಂದು ಪ್ರಶಂಸೆಯ ಪತ್ರ ನೀಡಲಾಯಿತು. ಕಡವೆಯನ್ನು ನಗರದ ಗೆಂಡೆಕಟ್ಟೆ ಅರಣ್ಯದಾಮಕ್ಕೆ ತಂದು ಬಿಡಲಾಗಿತ್ತು.

ಕೆಲ ದಿವಸಗಳ ಹಿಂದೆ ಈ ಕಡವೆ ಪ್ರಾಣಿಗಳು ಅಹಾರಕ್ಕಾಗಿ ಪರದಾಡುತ್ತಿರುವ ಬಗ್ಗೆ ಟಿವಿಯಲ್ಲಿ ತೋರಿಸಿದಾಗ ಪರಮೇಶ್ ಕುಟುಂಬದವರಿಗೆ ಕರಳು ಕಿತ್ತು ಬಂದಂತಾಯಿತು. ತಕ್ಷಣ ಕಡವೆ ಬಳಿ ಬಂದೆ ಬಿಟ್ಟರು. ಗೆಂಡೆಕಟ್ಟೆ ಅರಣ್ಯದಾಮದಲ್ಲಿ ಇವರು ಇಟ್ಟ ಹೆಸರು 'ರಾಜು' ಎಂದು ಕೂಗಿದರು. ಕೆಲ ಸಮಯ ಹುಡುಕಾಡಿದರು. ನಂತರ ಮೆಲ್ಲಗೆ ಇವರ ಬಳಿ ಬರುವ ಮೂಲಕ ಸ್ಥಳದಲಿದ್ದವರಿಗೆ ಆಶ್ಚರ್ಯವನ್ನು ಉಂಟು ಮಾಡಿದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಕುಡಿಯಲು ನೀರು ಮತ್ತು ಹಸಿರು ಸೊಪ್ಪು ಇಲ್ಲದಿರುವುದರಿಂದ ಕೆಲ ದಿವಸಗಳ ಮಟ್ಟಿಗಾದರೂ ಕಡವೆಯನ್ನು ಸಾಕಲು ನಮಗೆ ಕೊಡುವಂತೆ ಹಾಸನ ಡಿಎಫ್ ಬಳಿ ಕೇಳಿಕೊಂಡರೂ ಯಾವ ಪ್ರಯೋಜನವಾಗಲಿಲ್ಲ. ಕೇಂದ್ರ ವನ್ಯಜೀವಿ ವಿಭಾಗದಿಂದ ಅನುಮತಿ ಪಡೆಯಬೇಕು ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ.  ದಂಪತಿಗಳು ನಿರಾಸಯಲ್ಲಿ ವಾಪಸ್ ಮನಗೆ ಹೋಗಬೇಕಾಯಿತು. ಮುಂದೆಯಾದರೂ ಕಡವೆ ಸಾಕಲು ಕೊಡಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ಕಡವೆಯನ್ನು ಸಾಕಿ ಸಲಗಿದ ಪರಮೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಹಸುಗಳೊಂದಿಗೆ ಬಾಂದವ್ಯ ಹೊಂದಿದ್ದ ಕಡವೆ ಹಸು ಹಾಲು ಕುಡಿದು ಬೆಳೆದಿದೆ. ದನಗಳ ಜೊತೆ ಇದು ಕೂಡ ಆಹಾರ ಸೇವಿಸಿ ಎಂದಿನಂತೆ ವಾಪಸ್ ಬರುತ್ತಿತ್ತು. ಈ ಸಮಯದಲ್ಲಿ ಅರಣ್ಯ ಅಧಿಕಾರಿಗಳು ಕೂಡ ನಮಗೆ ಯಾರು ತೊಂದರೆ ಮಾಡಲಿಲ್ಲ. ಆದರೆ ಕೆಲವರು ನಮ್ಮ ಮೇಲೆ ದೂರು ನೀಡಿದ ಪರಿಣಾಮ ಅರಣ್ಯಾಧಿಕಾರಿಗಳು ಅದನ್ನು ಇಲ್ಲಿಂದ ಕೊಂಡೂಯ್ದರು. ಈಗ ನಗರದ ಗೆಂಡೆಕಟ್ಟೆ ಅರಣ್ಯದಾಮಕ್ಕೆ ಬಿಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲೆ ಇದ್ದು, ಕಡವೆ ಬಾಡಿ ಹೋಗಿದೆ. ಬರಗಾಲದಿಂದ ಮರ ಗಿಡಗಳೆಲ್ಲಾ ಸುಟ್ಟು ಹೋಗಿದೆ. ಸಮರ್ಪಕವಾಗಿ ಮೇವು ಸಿಗುವವರೆಗೂ ನಮಗೆ ಕಡವೆಯನ್ನು ನೀಡಿ ಅದನ್ನು ಸಾಕಿ ಸಲಗಿ ಮತ್ತೆ ವಾಪಸ್ ನೀಡುತ್ತವೆ ಎಂದು ಮನವಿ ಮಾಡಿದ್ದಾರೆ.

 ಗೆಂಡೆಕಟ್ಟೆ ಅರಣ್ಯದಾಮಕ್ಕೆ ಬಂದಾಗ ದಂಪತಿಗಳು ರಾಜು ಎಂದು ಕರೆದ ಕೂಡಲೇ ಅವರ ಬಳಿ ಬಂದಿತ್ತು. ಆಗ ತನ್ನ ಮಕ್ಕಳ ಮುದ್ದು ಮಾಡುವ ರೀತಿ ಇದನ್ನು ಕೂಡ ಮುದ್ದಾಡಿದರು. ಹಣ್ಣು, ಎಲೆ ತಿನ್ನಿಸಲಾಯಿತು. ಈ ವೇಳೆ ಸ್ಥಳದಲ್ಲಿದ್ದ ಪ್ರಾಣಿ ಪ್ರಿಯರಲಿ ಇಂತಹ ಪ್ರೀತಿ ನೋಡಿ ಸಂತಸವಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X