Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮುಸಾಫಿರ್- ಅಲೆಮಾರಿಯ ಕಣ್ಣಲ್ಲಿ...

ಮುಸಾಫಿರ್- ಅಲೆಮಾರಿಯ ಕಣ್ಣಲ್ಲಿ ಅಸಾಮಾನ್ಯ ವ್ಯಕ್ತಿತ್ವಗಳು...

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ17 March 2017 11:59 PM IST
share
ಮುಸಾಫಿರ್- ಅಲೆಮಾರಿಯ ಕಣ್ಣಲ್ಲಿ ಅಸಾಮಾನ್ಯ ವ್ಯಕ್ತಿತ್ವಗಳು...

ಪ್ರವಾಸ ಕೇವಲ ಸ್ಥಳಗಳನ್ನಷ್ಟೇ ಅಲ್ಲ, ಹೊಸ ಮನುಷ್ಯರನ್ನು, ಹೊಸ ಮನಸ್ಸುಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಖ್ಯಾತನಾಮರನ್ನು ಅರಸಿ ಹೋಗಿ ಅವರ ಬಗ್ಗೆ ಬರೆಯುವುದು ಸುಲಭ. ಆದರೆ ಸಾಮಾನ್ಯ ಮನುಷ್ಯನೊಳಗಿನ ಅಸಾಮಾನ್ಯರನ್ನು ಭೇಟಿ ಮಾಡುವುದಕ್ಕೆ ಲೇಖಕ ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರಬೇಕು. ಕ್ರಿಯಾಶೀಲ ಮನಸ್ಸನ್ನು ಹೊಂದಿರಬೇಕು. ಅಂತಹ ಸೂಕ್ಷ್ಮ ಕ್ರಿಯಾಶೀಲ ಮನಸ್ಸಿನ ಲೇಖಕರಿಂದ ಹೊರಬಂದಿರುವ ಕೃತಿಯೇ ‘ಮುಸಾಫಿರ್’. ತನ್ನ ಅಲೆಮಾರಿ ಬದುಕಿನಲ್ಲಿ ಕಂಡುಂಡ ಮನುಷ್ಯರನ್ನು ಲೇಖಕ ಸತೀಶ್ ಚಪ್ಪರಿಗೆ ಅವರು ಮುಸಾಫಿರ್ ಕೃತಿಗಳಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯರು ಎಂದು ಭಾವಿಸುವ ಜನರೊಳಗಿರುವ ಅಸಾಮಾನ್ಯತೆಯನ್ನು ಮುಖ್ಯವಾಹಿನಿಗೆ ಪರಿಚಯಿಸಿದ್ದಾರೆ. ಇವು ಬರೇ ವ್ಯಕ್ತಿ ಚಿತ್ರಗಳಲ್ಲ. ಅದರಾಚೆಗಿನ ಕಥನ ಗುಣವನ್ನು, ಜೀವಪರ ಧ್ವನಿಯನ್ನು ಹೊಂದಿರುವ ಕೃತಿ ಇದಾಗಿದೆ. ಮೊತ್ತ ಮೊದಲ ಲೇಖನ ‘ಕಲ್ಲುಕುಟಿಗರ ಸೀತು’ ಕುರಿತಂತೆ ಇದೆ. ನಾಲ್ಕಡಿ ಎತ್ತರದ ಗುಡಿಸಲಲ್ಲಿ ಬದುಕುತ್ತಿದ್ದ ಕಲ್ಲುಕುಟಿಗರ ಸೀತುವಿನ ಒಳಗಿದ್ದ ಅಸಾಮಾನ್ಯವಾದ ಸೃಜನಶೀಲ ವ್ಯಕ್ತಿತ್ವವನ್ನು ಅತ್ಯಂತ ಆಪ್ತವಾಗಿ ಲೇಖಕರು ಕಟ್ಟಿಕೊಡುತ್ತಾರೆ. ಯಕ್ಷಗಾನದ ಕುರಿತಂತೆ ಆಕೆಗಿದ್ದ ಅಪಾರ ಆಸಕ್ತಿ, ಕಲಾವಿದರ ಜೊತೆಗೆ ಆಕೆಗಿದ್ದ ನೇರ ಸಂಬಂಧಗಳು, ಇಡೀ ಊರನ್ನು ಆವಾಹಿಸಿದ್ದ ಆಕೆಯ ವ್ಯಕ್ತಿತ್ವ ನಮ್ಮನ್ನು ತೀವ್ರವಾಗಿ ತಟ್ಟುತ್ತದೆ. ನಕ್ಸಲರನ್ನು ಹುಡುಕುತ್ತಾ ಹೋದಾಗ ಎದುರಾದ ವಿಶಿಷ್ಟ ವ್ಯಕ್ತಿತ್ವದ ಮಾಖಿ ರೆಡ್ಡಿ, ಜಾಹೀರಾತುಗಳಲ್ಲೂ ಕ್ರಿಯಾಶೀಲತೆಯನ್ನು ಮೆರೆದು ಅದನ್ನು ಗ್ರಾಹಕರ ಮನಸೂರೆಗೊಳ್ಳುವಂತೆ ರೂಪಿಸಿದ ಜಾಹೀರಾತು ಜಗತ್ತಿನ ಮಹಾಗುರು ಪಿಯೂಶು ಪಾಂಡೆಯ ಒಳ ಮಾತುಗಳು, ಬದುಕು ಬರಕ್ಕೆ ಸಡ್ಡು ಹೊಡೆದ ಮರಾಠಾವಾಡದ ಮಹಾಮಾತೆ ಗೋದಾವರಿ, ಮಕ್ಕಳನ್ನು ಇಂಜಿನಿಯರ್, ಪ್ರೊಫೆಸರ್ ಆಗಿ ಮಾಡಿಯೂ, ಆಟೋದಲ್ಲಿ ದುಡಿಯುವ ರಾಮಯ್ಯನ ಸ್ವಾಭಿಮಾನಿ ಬದುಕು, ಪ್ರೇಮ ಮತ್ತು ವಂಚನೆಯ ಫಲವಾಗಿ ದೊರಕಿದ ತನ್ನ ಮಗುವನ್ನು ಉಳಿಸಿಕೊಳ್ಳಲು ಹವಣಿಸುವ ಮಾನಸಿ ಎನ್ನುವ ತರುಣಿ...ಹೀಗೆ ಸಮಾಜದ ಬೇರೆ ಬೇರೆ ಮಗ್ಗುಲುಗಳಿಗೆ ಸಂಬಂಧಿಸಿದ ಪಾತ್ರಗಳು ನಮ್ಮವೇ ಆಗಿ ಇಲ್ಲಿ ಕಾಡುತ್ತವೆ. ಪತ್ರಕರ್ತನೊಬ್ಬ ಬರೇ ಡೆಸ್ಕುಗಳ ನಾಲ್ಕು ಗೋಡೆಗಳ ನಡುವೆ ಉಳಿಯದೇ ಹೊರ ಜಗತ್ತಿಗೆ ಸ್ಪಂದಿಸತೊಡಗಿದಾಗ ಎದುರಾಗುವ ವೈವಿಧ್ಯಲೋಕಗಳ ಸಾರ ಸಂಗ್ರಹ ‘ಮುಸಾಫಿರ್’ ಕೃತಿಯಾಗಿದೆ. 25ಕ್ಕೂ ಅಧಿಕ ವ್ಯಕ್ತಿತ್ವಗಳ ಕಥನವನ್ನು ಲವಲವಿಕೆಯಿಂದ ಸತೀಶ್ ನಿರೂಪಿಸಿದ್ದಾರೆ. ವಸಂತ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 240. ಕೃತಿಯ ಮುಖಬೆಲೆ 180. ಆಸಕ್ತರು 080-22443996 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X