Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನೈಜೀರಿಯ ಪ್ರಜೆಯ ಕವಿತೆ ಓದಿದ ಟ್ರಂಪ್:...

ನೈಜೀರಿಯ ಪ್ರಜೆಯ ಕವಿತೆ ಓದಿದ ಟ್ರಂಪ್: ಮೂಲ ಕವಿಗೆ ಅಚ್ಚರಿ!

ವಾರ್ತಾಭಾರತಿವಾರ್ತಾಭಾರತಿ18 March 2017 6:18 PM IST
share
ನೈಜೀರಿಯ ಪ್ರಜೆಯ ಕವಿತೆ ಓದಿದ ಟ್ರಂಪ್: ಮೂಲ ಕವಿಗೆ ಅಚ್ಚರಿ!

ಅಬುಜ (ನೈಜೀರಿಯ), ಮಾ. 18: ಸೇಂಟ್ ಪ್ಯಾಟ್ರಿಕ್ಸ್ ದಿನದ ಭಾಗವಾಗಿ ಗುರುವಾರ ನಡೆದ ಆಚರಣೆಯೊಂದರಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಕವಿತೆಯೊಂದರ ಕೆಲವು ಸಾಲುಗಳನ್ನು ಓದಿದ್ದಾರೆ ಎಂದು ತಿಳಿದು ತನಗೆ ಆಶ್ಚರ್ಯವಾಗಿದೆ ಎಂದು ನೈಜೀರಿಯದ ವ್ಯಕ್ತಿಯೊಬ್ಬರು ‘ಸಿಎನ್‌ಎನ್’ ಸುದ್ದಿ ಚಾನೆಲ್‌ಗೆ ಹೇಳಿದ್ದಾರೆ.

‘‘ನನ್ನ ಸಹೋದರಿ ಈ ಸುದ್ದಿಯನ್ನು ನನಗೆ ತಿಳಿಸಿದಳು. ಅವಳು ಹೇಳಿದ್ದನ್ನು ಮೊದಲು ನಾನು ನಂಬಲಿಲ್ಲ’’ ಎಂದು ನೈಜೀರಿಯದ ಬ್ಯಾಂಕ್ ಉದ್ಯೋಗಿ ಅಲ್‌ಬಶೀರ್ ಆದಮ್ ಅಲ್‌ಹಸನ್ ಹೇಳಿದರು.

ಅವರು ಆ ಕವಿತೆಯನ್ನು ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದರು. ‘‘ಹತ್ತು ವರ್ಷಗಳ ಹಿಂದೆ ನಾನು ಕಾಲೇಜಿಗೆ ಹೋಗುತ್ತಿದ್ದಾಗ ಆ ಪದ್ಯವನ್ನು ಬರೆದು ಇಂಟರ್‌ನೆಟ್‌ಗೆ ಹಾಕಿದ್ದೆ. ಅದು ಈ ಮಟ್ಟಕ್ಕೆ ಹೋಗುತ್ತದೆ ಎಂದು ನಾನು ಯೋಚಿಸಿರಲಿಲ್ಲ’’ ಎಂದರು.

‘‘ಈಗ ಅನಿಸುತ್ತದೆ, ನಾನು ಬ್ಯಾಂಕ್ ಉದ್ಯೋಗಿಯಾಗಿರಬಾರದಿತ್ತು, ಜೀವನಪರ್ಯಂತ ಕವಿಯಾಗಿರಬೇಕಿತ್ತು’’ ಎಂದು ಅಲ್‌ಹಸನ್ ಹೇಳಿದರು.
ಕಟ್ಸಿನ ನಿವಾಸಿಯಾಗಿರುವ ಅವರು ಫಸ್ಟ್ ಬ್ಯಾಂಕ್ ಆಫ್ ನೈಜೀರಿಯದಲ್ಲಿ ಬಿಸ್ನೆಸ್ ಮ್ಯಾನೇಜರ್ ಆಗಿದ್ದಾರೆ.

ಸೇಂಟ್ ಪ್ಯಾಟ್ರಿಕ್ಸ್ ದಿನಾಚರಣೆ ಸಮಾರಂಭದ ಔತಣಕೂಟದಲ್ಲಿ ಐರ್‌ಲ್ಯಾಂಡ್ ಪ್ರಧಾನಿ ಎಂಡ ಕೆನ್ನಿ ಜೊತೆ ಭಾಗವಹಿಸಿದ ಟ್ರಂಪ್, ‘‘ನಮ್ಮ ಐರಿಶ್ ಸ್ನೇಹಿತರ ಜೊತೆಯಲ್ಲಿ ನಾನು ನಿಂತಿರುವಾಗ, ನನಗೆ ನುಡಿಗಟ್ಟೊಂದು ನೆನಪಾಗುತ್ತಿದೆ. ಇದು ಚೆನ್ನಾಗಿದೆ, ಇದು ನನ್ನ ಮನ ಗೆದ್ದಿದೆ. ನಾನು ಇದರ ಬಗ್ಗೆ ತುಂಬಾ ವರ್ಷಗಳಿಂದ ಕೇಳಿದ್ದೇನೆ, ನಾನಿದನ್ನು ಪ್ರೀತಿಸುತ್ತೇನೆ- ‘ಸ್ನೇಹ ನಿಜವಲ್ಲ ಎಂದು ಗೊತ್ತಾದರೆ ಸ್ನೇಹಿತರನ್ನು ಮರೆಯುವುದು ಯಾವತ್ತೂ ನೆನಪಿರಲಿ. ಆದರೆ, ನಿನ್ನ ಜೊತೆಗೆ ನಿಂತವರನ್ನು ನೆನಪಿನಲ್ಲಿಟ್ಟುಕೊಳ್ಳಲು ಯಾವತ್ತೂ ಮರೆಯಬೇಡ’.

‘‘ಇದು ನಮಗೆ ಗೊತ್ತಿದೆ. ನಮ್ಮಲ್ಲಿ ತುಂಬಾ ಮಂದಿಗೆ ಗೊತ್ತಿದೆ. ಇದು ಒಂದು ಅತ್ಯುತ್ತಮ ನುಡಿಗಟ್ಟು’’ ಎಂದುದ ಟ್ರಂಪ್ ಹೇಳಿದರು.

ಸೇಂಟ್ ಪ್ಯಾಟ್ರಿಕ್ ಕೂಡ ವಲಸಿಗ: ಟ್ರಂಪ್‌ಗೆ ಐರ್‌ಲ್ಯಾಂಡ್ ಪ್ರಧಾನಿ ಚಾಟಿ

ಸೇಂಟ್ ಪ್ಯಾಟ್ರಿಕ್ಸ್ ದಿನವನ್ನು ವಲಸಿಗನೊಬ್ಬನ ಗೌರವಾರ್ಥ ಆಚರಿಸಲಾಗುತ್ತಿದೆ ಎಂಬುದನ್ನು ಅಮೆರಿಕ ಪ್ರವಾಸದಲ್ಲಿರುವ ಐರ್‌ಲ್ಯಾಂಡ್ ಪ್ರಧಾನಿ ಎಂಡ ಕೆನ್ನಿ ಗುರುವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೆನಪಿಸಿದ್ದಾರೆ.

ವಾಶಿಂಗ್ಟನ್‌ನ ಶ್ವೇತಭವನದ ಪೂರ್ವದ ಕೋಣೆಯಲ್ಲಿ ಮಾತನಾಡಿದ ಕೆನ್ನಿ, ಟ್ರಂಪ್‌ರ ವಲಸೆ ನೀತಿಗಳಿಂದ ಉದ್ಭವಿಸಿದ ವಿವಾದಗಳನ್ನು ಗಮನದಲ್ಲಿರಿಸಿ ಈ ಮಾತನ್ನಾಡಿದರು.

‘‘ಸೇಂಟ್ ಪ್ಯಾಟ್ರಿಕ್ ಮತ್ತು ಅವರ ಪರಂಪರೆಯನ್ನು ಆಚರಿಸಲು ಪ್ರತಿ ವರ್ಷ ನಾವು ಇಲ್ಲಿ ಸೇರುವುದು ಒಳ್ಳೆಯ ಸಂಗತಿಯಾಗಿದೆ. ಅವರು ಕೂಡ ವಲಸಿಗರಾಗಿದ್ದರು.’’ ಎಂದು ಕೆನ್ನಿ ಹೇಳಿದರು.

ಸೇಂಟ್ ಪ್ಯಾಟ್ರಿಕ್ ಬ್ರಿಟನ್‌ನ ಯಾವುದೋ ಒಂದು ಊರಿನಲ್ಲಿ ಹುಟ್ಟಿರಬೇಕು ಎಂದು ಭಾವಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X