Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹಿಳೆಯರಿಗಾಗಿಯೇ ಇರುವ ವೆಬ್‌ಸೈಟ್...

ಮಹಿಳೆಯರಿಗಾಗಿಯೇ ಇರುವ ವೆಬ್‌ಸೈಟ್ ಕೇರಳದಲ್ಲಿ ಶೀಘ್ರ ಕಾರ್ಯಾರಂಭ

ವಾರ್ತಾಭಾರತಿವಾರ್ತಾಭಾರತಿ19 March 2017 8:20 PM IST
share
ಮಹಿಳೆಯರಿಗಾಗಿಯೇ ಇರುವ ವೆಬ್‌ಸೈಟ್ ಕೇರಳದಲ್ಲಿ ಶೀಘ್ರ ಕಾರ್ಯಾರಂಭ

ತಿರುವನಂತಪುರಂ, ಮಾ.19: ಡಿಜಿಟಲ್ ಪ್ರಪಂಚದಲ್ಲಿ ಲಿಂಗ ಸಮಾನತೆ ಸಾಧಿಸುವ ಉದ್ದೇಶದಿಂದ ಮಹಿಳೆಯರನ್ನೇ ಒಳಗೊಂಡ ವೆಬ್‌ಸೈಟ್ ಕೇರಳದಲ್ಲಿ ಆರಂಭವಾಗಲಿದೆ.

ಮಹಿಳೆಯರ ಹೋರಾಟ ಮತ್ತು ಸಾಧನೆಯ ಬಗ್ಗೆ ಬೆಳಕು ಬೀರಲು ಉದ್ದೇಶಿಸಲಾಗಿದ್ದು ಪ್ರಮುಖವಾಗಿ ರಾಜ್ಯದ ಮಹಿಳೆಯರ ಕುರಿತಾದ ಸುದ್ದಿ, ಅಧ್ಯಯನ, ಸಂದರ್ಶನ, ಸಂವಾದ ಕಾರ್ಯಕ್ರಮ ಇತ್ಯಾದಿಗಳನ್ನು ಪ್ರಸಾರ ಮಾಡುವುದಾಗಿ - ಡಬ್ಲೂಡಬ್ಲೂಡಬ್ಲೂ.ವುಮೆನ್‌ಪಾಂಟ್.ಇನ್- ಎಂಬ ಮಹಿಳೆಯರೇ ಉಸ್ತುವಾರಿ ಹೊಂದಿರುವ ವೆಬ್‌ಸೈಟ್ ತಿಳಿಸಿದೆ.
 
 ಪುರುಷರೇ ಪ್ರಧಾನವಾಗಿರುವ ಡಿಜಿಟಲ್ ಪ್ರಪಂಚದಲ್ಲಿ ಮಹಿಳೆಯರಿಗೂ ಒಂದಿಷ್ಟು ಅವಕಾಶ ಸಿಗಲಿ ಎಂಬುದು ವೆಬ್‌ಸೈಟ್ ಆರಂಭದ ಹಿಂದಿರುವ ಕಾರಣವಾಗಿದೆ ಎಂದು ವೆಬ್‌ಸೈಟ್‌ನ ಸ್ಥಾಪಕರಲ್ಲಿ ಓರ್ವರಾಗಿರುವ ಸಾಮಾಜಿಕ ಕಾರ್ಯಕರ್ತೆ/ಪತ್ರಕರ್ತೆ ಆರ್.ಪಾರ್ವತಿ ದೇವಿ ತಿಳಿಸಿದ್ದಾರೆ. ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಪ್ರಪ್ರಥಮ ಸಮಗ್ರ ಡಿಜಿಟಲ್ ವೆಬ್‌ಸೈಟ್ ಇದಾಗಿದೆ ಎಂದವರು ತಿಳಿಸಿದ್ದಾರೆ. ನಮ್ಮ ಸಮಾಜದಲ್ಲಿರುವ ಮಹಿಳೆಯರ ಹೋರಾಟದ ಬದುಕು ಮತ್ತು ಸಾಧನೆಯನ್ನು ಸಾಕ್ಷಚಿತ್ರದ ಮೂಲಕ ಹೊರಜಗತ್ತಿಗೆ ಪ್ರಸ್ತುತಪಡಿಸುವುದು ನಮ್ಮ ಪ್ರಧಾನ ಉದ್ದೇಶವಾಗಿದೆ . ಸುದ್ದಿ, ಮಾಹಿತಿ, ಸಾಕ್ಷಚಿತ್ರ.. ಹೀಗೆ ಮಹಿಳೆಯರ ಕುರಿತಾದ ಯಾವುದೇ ವಿಷಯವಾದರೂ ಸರಿ, ನಮ್ಮ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳಲಿದೆ. ‘ಚರ್ಚೆ, ವಿಚಾರ ವಿನಿಮಯ, ಸ್ನೇಹ- ಮಹಿಳೆಯರಿಗೆ ಒಂದು ಅವಕಾಶ’ ಎಂಬುದು ವೆಬ್‌ಸೈಟ್‌ನ ಟ್ಯಾಗ್‌ಲೈನ್ ಆಗಿರುತ್ತದೆ. ಬರವಣಿಗೆಯ ಹವ್ಯಾಸ ಇರುವ ಯಾವುದೇ ಮಹಿಳೆ ವೆಬ್‌ಸೈಟ್‌ಗೆ ಬರಹಗಳನ್ನು ಕಳುಹಿಸಬಹುದು. ಅಲ್ಲದೆ ಈಗಾಗಲೇ ಇತರ ಮಾಧ್ಯಮಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸಿದವರೂ, ಈ ವೆಬ್‌ಸೈಟ್‌ಗೆ ಕಳುಹಿಸಬಹುದು. ಆರಂಭದಲ್ಲಿ ಮಲಯಾಳಂ ಭಾಷೆಯಲ್ಲಿ ಪ್ರಕಟವಾದರೂ, ಮುಂದಿನ ದಿನಗಳಲ್ಲಿ ಇಂಗ್ಲಿಷ್ ಅಡಿಬರಹದೊಂದಿಗೆ ಪ್ರಕಟಿಸುವ ಇರಾದೆಯಿದೆ ಎಂದವರು ತಿಳಿಸಿದ್ದಾರೆ.

‘ಬುಕ್ ಮಾರ್ಕೆಟ್’ ವಿಭಾಗದಲ್ಲಿ ಮಹಿಳೆಯರು ಬರೆದಿರುವ ಪುಸ್ತಕಗಳನ್ನು ಪರಿಚಯಿಸಲಾಗುವುದು. ಮಹಿಳೆಯರು ಬರೆದಿರುವ ಪುಸ್ತಕಗಳಿಗೆ ಮಾರುಕಟ್ಟೆ ಒದಗಿಸುವ ಅಥವಾ ಮಾರಾಟಕ್ಕೆ ಅವಕಾಶ ನೀಡುವ ವೇದಿಕೆಯಾಗಿ ಬಳಸಿಕೊಳ್ಳುವ ಆಶಯವೂ ಇದೆ ಎಂದವರು ತಿಳಿಸಿದ್ದಾರೆ.

 ಸಾಹಿತಿ- ಅನುವಾದಕಿ ಸುನೀತಾ ಬಾಲಕೃಷ್ಣನ್, ಸರಕಾರದ ಅಧೀನದಲ್ಲಿರುವ ಮಲಯಾಳಂ ಕಾರ್ಯಕ್ರಮವೊಂದರ ನಿರ್ದೇಶಕಿ ಸುಜಾ ಸುಸಾನ್ ಜಾರ್ಜ್ ಈ ವೆಬ್‌ಸೈಟ್‌ನ ಇತರ ನಿರ್ದೇಶಕರು. ಮಾ.21ರಂದು ವೆಬ್‌ಸೈಟ್‌ಗೆ ಚಾಲನೆ ದೊರಕಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X