Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ.. ಮೆಣಸೇ

ಓ.. ಮೆಣಸೇ

ಪಿ.ಎ.ರೈಪಿ.ಎ.ರೈ20 March 2017 12:16 AM IST
share
ಓ.. ಮೆಣಸೇ

ಪಂಜರಾಜ್ಯಗಳ ಚುನಾವಣೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ

- ಡಿ.ಕೆ.ಶಿವಕುಮಾರ್, ಸಚಿವ
     
ನಿಮಗೂ ಕಾಂಗ್ರೆಸ್‌ಗೂ ಇನ್ನೂ ಸಂಬಂಧ ಉಳಿದುಕೊಂಡಿರುವುದೇ ದೊಡ್ಡ ಅಚ್ಚರಿ ಬಿಡಿ.

---------------------
     
ಸಿದ್ದರಾಮಯ್ಯ ಸರಕಾರದ ಅಧರ್ಮವೇ ನಮ್ಮ ಚುನಾವಣಾ ಅಸ್ತ್ರ

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ನಿಮ್ಮ ಪಕ್ಷದ ಅಧರ್ಮವನ್ನು ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡುವ ಉದ್ದೇಶವೇ?
---------------------
     
ಮೋದಿಗೆ ಹುಟ್ಟದಿದ್ದರೂ ನಾವೆಲ್ಲ ಮೋದಿಯಂತೆ ವರ್ತಿಸುತ್ತಿದ್ದೇವೆ

-ಬೊಳುವಾರು ಮಹಮದ್ ಕುಂಞಿ, ಸಾಹಿತಿ
ಯಾವ ಮೋದಿ, ಕಣ್ಣು ಕೊಟ್ಟ ಮೋದಿಯೋ, ಕಣ್ಣು ತೆಗೆದ ಮೋದಿಯೋ?
---------------------

ನೀವು ಎಂತಹವರು ಎಂಬುದನ್ನು ನಿಮ್ಮ ಶರೀರವೇ ಹೇಳುತ್ತದೆ
- ಬಾಬಾ ರಾಮ್‌ದೇವ್, ಯೋಗಗುರು
ಪತಂಜಲಿ ಬಳಸುತ್ತಿರುವವರ ಶರೀರವನ್ನು ನೋಡಿದಾಗ ನೀವು ಎಂಥವರು ಎನ್ನುವುದು ಗೊತ್ತಾಗುತ್ತದೆ.

---------------------
     ಅಧಿಕಾರ ಕೊಟ್ಟರೆ ಸಚಿವ ಆಂಜನೇಯ ಬ್ರಾಹ್ಮಣರಿಗೂ ಮೀಸಲಾತಿ ಕೊಡ್ತಾರೆ
- ಎಚ್.ವಿಶ್ವನಾಥ್, ಮಾಜಿ ಸಂಸದ
 ಅಧಿಕಾರ ಕೊಟ್ಟರೆ ಬಿಜೆಪಿಗೆ ಮೀಸಲಾಗುವ ಕಾಂಗ್ರೆಸ್ಸಿಗರ ಧ್ವನಿ ಜೋರಾಗುತ್ತವೆ.

ಧರ್ಮ ಮತ್ತು ನಂಬಿಕೆ ಆಧಾರದಲ್ಲಿ ಭಾರತ ಪ್ರಜ್ವಲಿಸುತ್ತಿದೆ

-ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ

ಬಹುಶಃ ಕೋಮು ಬೆಂಕಿಯ ಝಳಕ್ಕಿರಬೇಕು.

---------------------
     
ಪ್ರಸ್ತುತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಬಲ ರಾಜಕೀಯ ನಾಯಕ

-ಪಿ. ಚಿದಂಬರಂ, ಕಾಂಗ್ರೆಸ್ ನಾಯಕ
ದುರ್ಬಲ ನಾಯಕರ ಸಂಖ್ಯೆ ಹೆಚ್ಚಾದಾಗ ಮೋದಿಯಂಥವರು ಪ್ರಬಲರಾಗುವುದು ಸಹಜ.
---------------------
ಬ್ರಾಹ್ಮಣರು ಮದ್ಯಪಾನ ಹಾಗೂ ಮಾಂಸಾಹಾರ ಸೇವಿಸುವುದನ್ನು ವಿರೋಧಿಸುತ್ತೇನೆ
- ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಸೋಮರಸ ಮತ್ತು ಯಜ್ಞ ನೈವೇದ್ಯಗಳನ್ನು ಸೇವಿಸಿದರೆ ಒಪ್ಪಿಗೆಯೇ?
---------------------

ಬಿಜೆಪಿಯ ಅಶ್ವಮೇಧ ಯಾಗದ ಕುದುರೆಯನ್ನು ರಾಜ್ಯದಲ್ಲಿ ಕಟ್ಟಿ ಹಾಕುವ ಸಾಮರ್ಥ್ಯ ಇರುವುದು ಜೆಡಿಎಸ್‌ಗೆ ಮಾತ್ರ
- ಎಚ್.ಡಿ..ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕುದುರೆಯೆಂದು ಕತ್ತೆಯನ್ನು ಕಟ್ಟಿ ಹಾಕಿದ ನಾಯಕರಲ್ಲವೇ ತಾವು.
---------------------

ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ವಿರುದ್ಧ ದಲಿತರನ್ನು ಎತ್ತಿ ಕಟ್ಟ್ಟುತ್ತಿದ್ದಾರೆ.
- ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ

ದಲಿತರ ವಿರುದ್ಧ ನೀವಿರುವಾಗ ಬೇರೆಯವರು ಎತ್ತಿಕಟ್ಟುವ ಅಗತ್ಯವಿದೆಯೆ?
---------------------

ತಮಿಳು ಭಾಷೆ ಮಾತನಾಡುವವರು ನಂಬಿಕೆಗೆ ಅರ್ಹರು
- ರಮಾನಾಥ್ ರೈ, ಸಚಿವ
ಅದಕ್ಕೆಂದೇ ಕನ್ನಡ ಮಾತನಾಡುವವರ ಜೊತೆಗೆ ಸಂಬಂಧ ಕಡಿಮೆ ಮಾಡಿರಬೇಕು.

---------------------

ಪ್ರಧಾನಿ ಮೋದಿ ಅತ್ಯಂತ ಪರಿಣಾಮಕಾರಿಯಾಗಿ ಭಾಷಣ ಮಾಡುವ ಕಲೆ ಹೊಂದಿದ್ದಾರೆ
-ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಕೊಲೆ ಮಾಡುವುದು ಅದಕ್ಕಿಂತಲೂ ಚೆನ್ನಾಗಿ ಎನ್ನುವುದು ಮಾಧ್ಯಮಗಳ ಆರೋಪ.

---------------------

 ಧನಬಲ ಪ್ರಯೋಗಿಸಿ ಪ್ರಜಾಸತ್ತೆಯನ್ನು ದುರ್ಬಲಗೊಳಿಸಲಾಗುತ್ತಿದೆ
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
 ಜನಬಲ ಕಳೆದುಕೊಂಡವರ ಹತಾಶೆಯ ಮಾತು.

---------------------

ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತೇನೆ
-ಡಾ. ಜಿ. ಪರಮೇಶ್ವರ, ಸಚಿವ

ಇನ್ನಷ್ಟು ನಾಯಕರನ್ನು ಬಿಜೆಪಿಗೆ ರವಾನಿಸುವ ಭರವಸೆಯೇ?
---------------------

ಕಾಂಗ್ರೆಸ್‌ಗೆ ಈಗ ಮೇಜರ್ ಸರ್ಜರಿಯ ಅಗತ್ಯವಿದೆ
- ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ಅದನ್ನು ನಿಮ್ಮಿಂದಲೇ ಆರಂಭಿಸಬೇಕಾಗಿದೆ.

---------------------

ಸಾವಿರ ಮೋದಿ ಬಂದರೂ ಕಾಂಗ್ರೆಸ್ ಮುಕ್ತ ಭಾರತ ಸಾಧ್ಯವಿಲ್ಲ
- ವಿ.ಎಸ್. ಉಗ್ರಪ್ಪ, ವಿ.ಪ.ಸದಸ್ಯ
ಅದನ್ನು ಕಾಂಗ್ರೆಸ್‌ನಾಯಕರೇ ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ.

---------------------
ಸಾಲ ಮಾಡಿ ತುಪ್ಪ ತಿನ್ನುವುದು ಸರೀನಾ
- ಕೆ.ಎಸ್. ಈಶ್ವರಪ್ಪ, ವಿ.ಪ.ವಿ.ಪಕ್ಷ ನಾಯಕ
ಸಾಲ ಮಾಡಿ ರಾಯಣ್ಣ ಬ್ರಿಗೇಡ್ ಕಟ್ಟುವುದಕ್ಕಿಂತ ವಾಸಿ.

---------------------

2019ರ ಲೋಕಸಭೆ ಚುನಾವಣೆವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ
- ನರೇಂದ್ರ ಮೋದಿ, ಪ್ರಧಾನಿ
ಆನಂತರವಾದರೂ ವಿಶ್ರಾಂತಿ ಪಡೆಯುವ ಭರವಸೆ ಕೊಡಿ.

---------------------

ನಾನು ಭಾರತದ ಮಗ
-ದಲೈಲಾಮ, ಬೌದ್ಧ ಗುರು

ಟಿಬೆಟ್ ಪಾಲಿನ ಮಲ ಮಗನೇ?
---------------------

ಪ್ರಧಾನಿ ನರೇಂದ್ರ ಮೋದಿಯನ್ನು ಯಾರಾದರೂ ಸೋಲಿಸಬಹುದು ಎಂದಿದ್ದರೆ ಅದು ರಾಹುಲ್ ಗಾಂಧಿಯ ಸರಳತೆ ಮಾತ್ರ
-ರಾಜ್ ಬಬ್ಬರ್, ಕಾಂಗ್ರೆಸ್ ನಾಯಕ

ರಾಹುಲ್ ಗಾಂಧಿಯನ್ನು ಬಲಿಕೊಡಲು ಸಿದ್ಧತೆಯೇ?

share
ಪಿ.ಎ.ರೈ
ಪಿ.ಎ.ರೈ
Next Story
X