Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮುಖ್ಯಮಂತ್ರಿಯಾಗಲು ಹೋಗಿ ಮುಗ್ಗರಿಸಿದ...

ಮುಖ್ಯಮಂತ್ರಿಯಾಗಲು ಹೋಗಿ ಮುಗ್ಗರಿಸಿದ ಒಡಿಶಾದ ಚಾಣಾಕ್ಯ

ಪ್ಯಾರಿ ಮೋಹನ್ ಮಹಾಪಾತ್ರ ನಿಧನ

ವಾರ್ತಾಭಾರತಿವಾರ್ತಾಭಾರತಿ20 March 2017 2:17 PM IST
share
ಮುಖ್ಯಮಂತ್ರಿಯಾಗಲು ಹೋಗಿ ಮುಗ್ಗರಿಸಿದ ಒಡಿಶಾದ ಚಾಣಾಕ್ಯ

ಭುಬನೇಶ್ವರ್, ಮಾ.20: ದೀರ್ಘಕಾಲದ ಅಸೌಖ್ಯದ ಬಳಿಕ ರವಿವಾರ ನಿಧನ ಹೊಂದಿದ ಹಿರಿಯ ರಾಜಕಾರಣಿ ಹಾಗೂ ಮಾಜಿ ಅಧಿಕಾರಿ ಪ್ಯಾರಿ ಮೋಹನ್ ಮಹಾಪಾತ್ರ ಅವರು ಒಂದೊಮ್ಮೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಮೀಪವರ್ತಿಯಾಗಿದ್ದರೂ ನಂತರ ಪಟ್ನಾಯಕ್ ಅವರಿಂದಲೇ ‘‘ಬೆನ್ನಿಗೆ ಚೂರಿ ಹಾಕುವ ದ್ರೋಹಿ' ಎಂದು ನಿಂದನೆಕ್ಕೊಳಗಾದವರು.

ತಮ್ಮ ತಂದೆ ಬಿಜು ಪಟ್ನಾಯಕ್ ನಿಧನಾನಂತರ ಒಡಿಶಾಗೆ ನವೀನ್ ಪಟ್ನಾಯಕ್ ಬಂದಾಗ ಅವರಿಗೆ 1997ರಲ್ಲಿ ಮಹಾಪಾತ್ರ ಪರಿಚಯವಾಗಿತ್ತು. 1990 ಹಾಗೂ 1995 ಅವಧಿಯಲ್ಲಿ ಬಿಜು ಪಟ್ನಾಯಕ್ ಮುಖ್ಯಮಂತ್ರಿಯಾಗಿದ್ದಾಗ ಮಹಾಪಾತ್ರ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದರು. ಒಡಿಶಾಗೆ ಮುಂದೆ ನವೀನ್ ಬಂದಾಗ ಸಮೀಪವರ್ತಿಗಳ್ಯಾರೂ ಇಲ್ಲದೇ ಇದ್ದಾಗ ತಾಯಿಯ ಸಲಹೆಯಂತೆ ಪ್ಯಾರಿ ಬಾಬು ಬಳಿ ಬಂದಿದ್ದರು.

2000ರಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಲು ಮಹಾಪಾತ್ರ ಬಹಳಷ್ಟು ಸಹಾಯ ಮಾಡಿದ್ದರು. ಮಹಾಪಾತ್ರ ನವೀನ್ ಅವರ ಪಾಲಿನ ‘ಅಂಕಲ್’ ಆಗಿದ್ದರಲ್ಲದೆ ಅವರ ಪ್ರತಿಯೊಂದು ಹೆಜ್ಜೆಯೂ ಮಹಾಪಾತ್ರ ಸಲಹೆಯಂತೆಯೇ ನಡೆಯುತ್ತಿತ್ತು. ಇದರಿಂದ ಬಹಳ ಬೇಗನೇ ಮಹಾಪಾತ್ರ ಅವರ ಮನೆಯ ಮುಂದೆ ಅಧಿಕಾರಿಗಳು ಸರತಿ ನಿಲ್ಲಲು ಆರಂಭಿಸಿ ಸರಕಾರದ ನೀತಿ ಸಂಬಂಧ ಅವರಿಂದ ಸಲಹೆ ಸೂಚನೆ ಪಡೆಯಲಾರಂಭಿಸಿದ್ದರು.

ಮಹಾಪಾತ್ರ ಅವರನ್ನು ಸೂಪರ್ ಚೀಫ್ ಮಿನಿಸ್ಟರ್ ಹಾಗೂ ಒಡಿಶಾ ರಾಜಕಾರಣದ ‘ಚಾಣಕ್ಯ’ ಎಂದೇ ಕರೆಯಲ್ಪಡುತ್ತಿದ್ದು. ನರೇಂದ್ರ ಮೋದಿಗೆ ಅಮಿತ್ ಶಾ ಇದ್ದಂತೆ ನವೀನ್ ಪಟ್ನಾಯಕ್ ಅವರಿಗೆ ಮಹಾಪಾತ್ರ ಇದ್ದಿದ್ದರು, ಎಂದು ಕೆಲವರು ಹೇಳುತ್ತಿದ್ದರು.

2004ರಲ್ಲಿ ಮಹಾಪಾತ್ರ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ ನವೀನ್ ಪಟ್ನಾಯಕ್ ಪ್ರಮುಖ ಪಾತ್ರವಹಿಸಿದ್ದರು. ಬಿಜೆಪಿ ಒಂದು ಕಾಲದಲ್ಲಿ ಬಿಜೆಡಿಯ ಪ್ರಮುಖ ಮೈತ್ರಿ ಪಕ್ಷವಾಗಿದ್ದರೂ 2009ರಲ್ಲಿ ಬಿಜೆಪಿಯನ್ನು ದೂರಕ್ಕೆ ತಳ್ಳಿ ಹೋರಾಡುವಂತೆ ಮಹಾಪಾತ್ರ ನೀಡಿದ ಸಲಹೆ ಫಲ ಕಂಡಿತಲ್ಲದೆ ಬಿಜೆಪಿ 147ರಲ್ಲಿ 109 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಆದರೆ 2009ರ ಚುನಾವಣೆಯ ನಂತರ ಇಬ್ಬರ ನಡುವಿನ ಸಂಬಂಧಗಳಲ್ಲಿ ಬಿರುಕು ಮೂಡಿದ್ದು ಮಹಾಪಾತ್ರ ಅವರಲ್ಲಿ ಸಲಹೆ ಕೇಳದಂತೆ ನವೀನ್ ತಮ್ಮ ಅಧಿಕಾರಿಗಳಲ್ಲಿ ಹೇಳಿದ್ದರು. 2012ರ ಪಂಚಾಯತ್ ಚುನಾವಣೆಯ ಸಂದರ್ಭ ನವೀನ್ ಅವರು ಒಬ್ಬಂಟಿಯಾಗಿಯೇ ಪ್ರಚಾರ ಕೈಗೊಂಡರಲ್ಲದೆ ರಾಷ್ಟ್ರಪತಿ ಹುದ್ದೆಗಾಗಿ ಪಿ.ಎ. ಸಂಗ್ಮಾ ಅವರಿಗೆ ಬೆಂಬಲ ಕೂಡ ಸೂಚಿಸಿದ್ದರು.

ಮೇ 2012ರಲ್ಲಿ ನವೀನ್ ಪಟ್ನಾಯಕ್ ಅವರು ಲಂಡನ್ ನಲ್ಲಿದ್ದಾಗ ಪಕ್ಷದಲ್ಲಿ ಬಂಡಾಯವೊಂದನ್ನು ಎಬ್ಬಿಸಿದ್ದರು ಮಹಾಪಾತ್ರ. ಆದರೆ 104 ಶಾಸಕರ ಪೈಕಿ ಈ ಒಡಿಶಾದ ಚಾಣಕ್ಯನಿಗೆ ಒಲಿದಿದ್ದು ಕೇವಲ 33 ಶಾಸಕರು ಮಾತ್ರ. ಹಿಂದಿರುಗಿ ಬಂದ ಪಟ್ನಾಯಕ್ ತಮ್ಮ ಒಂದು ಕಾಲದ ಆತ್ಮೀಯನನ್ನು ವಂಚಕ, ದ್ರೋಹಿ, ಬೆನ್ನಿಗೆ ಚೂರಿ ಹಾಕಿದವ ಎಂದು ಜರಿದರು.

ನವೀನ್ ಅವರ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಗೊಳಿಸುವೆ ಎಂದ ಮಹಾಪಾತ್ರ ಬೆದರಿಸಿದ್ದರೂ ಅವರ ಒಡಿಶಾ ಜನ ಮೋರ್ಚ 2014ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ನೆಲ ಕಚ್ಚಿತ್ತು. ಕಳೆದ ವರ್ಷ ಅವರ ರಾಜ್ಯಸಭಾ ಸದಸ್ಯತನದ ಅವಧಿ ಮುಗಿದ ನಂತರ ಅವರು ಮತ್ತಷ್ಟು ತೆರೆಮರೆಗೆ ಸರಿದಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X